AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ‘ಹಿಟ್ಲರನಿಗೆ ಜಯವಾಗಲಿ!’ ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ

Adolf Hitler : ಡೆಲಾಯಿಟ್ ಸಂಸ್ಥೆಯ ಉದ್ಯೋಗಿ ನೀರಭ್ ಮೆಹೆರೋತ್ರಾ ಹಿಟ್ಲರನ ಬಗೆಗಿನ ಪುಸ್ತಕ ಓದಿ ಕಂಡುಕೊಂಡ 'ನೀತಿ' ಇದು! 'ಶುಕ್ರವಾರದ ಸ್ಫೂರ್ತಿ' ಎಂದು ತನ್ನ ಪೋಸ್ಟ್‌ನಲ್ಲಿ ಹಿಟ್ಲರ್​ನ ಸದ್ಗುಣಗಳ ಪಟ್ಟಿಯನ್ನೇ ಕೊಟ್ಟಿದ್ದಾನೆ.

Viral: 'ಹಿಟ್ಲರನಿಗೆ ಜಯವಾಗಲಿ!' ಎಂದು ಕೆಲಸಗೇಡಿ ಕೆಲಸ ಕಳೆದುಕೊಂಡ ಕತೆ
(courtesy : Flickr/Recuerdos de Pandora)
TV9 Web
| Edited By: ಶ್ರೀದೇವಿ ಕಳಸದ|

Updated on:May 26, 2023 | 5:23 PM

Share

LinkedIn: ಸಾಮಾಜಿಕ ಜಾಲತಾಣಗಳಲ್ಲಿ (Social Media) ಅಳತೆಮೀರಿದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು, ವಿವೇಕರಹಿತವಾದ ವಾದಗಳನ್ನು ಮಂಡಿಸುವವರಿಗೆ ಬರವಿಲ್ಲ. ಅವು ವಿಪರೀತ ನಿಲುವುಗಳನ್ನು ಹೊಂದಿದಂಥ ಎಲ್ಲ ಪಂಥಗಳ ನಂಬಿಕೆಗಳ ಮಂದಿಗೆ ಸುಭದ್ರ ವೇದಿಕೆಯಾಗಿಯೇ ಮಾರ್ಪಟ್ಟಿವೆ. ಟ್ವಿಟರ್, ಫೇಸ್‌ಬುಕ್‌ಗಳಿಗೆ ಮೀಸಲಾಗಿದ್ದ ಈ ನಡವಳಿಕೆಗಳು ಇತ್ತೀಚೆಗಿನ ದಿನಗಳಲ್ಲಿ ಉದ್ಯಮ ಹಾಗೂ ನೌಕರಿಗೆ ಸಂಬಂಧಪಟ್ಟ ಸಾಮಾಜಿಕ ತಾಣವಾದ ಲಿಂಕ್ಡ್​ಇನ್​ನಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತಿವೆ.

ಜಗತ್ತಿನಲ್ಲೇ ಅತ್ಯಂತ ಹೇಯ ಜನಾಂಗೀಯವಾದಿ ಮತ್ತು ಹತ್ತಾರು ಲಕ್ಷ ಯಹೂದಿಗಳ ಕಗ್ಗೊಲೆಗೆ ನೇರವಾಗಿ ಕಾರಣನಾದ ಹಿಟ್ಲರನನ್ನು (Adolf Hitler) ವರ್ಚಸ್ವೀ ನಾಯಕ ಎಂದು ಕರೆದು ಕಳೆದ ವಾರ ‘ಸ್ಫೂರ್ತಿದಾಯಕ’ ಪೋಸ್ಟ್ ಬರೆದಿದ್ದ ಯುವಕನೊಬ್ಬ ನೌಕರಿ ಕಳೆದುಕೊಂಡಿದ್ದಾನೆ; ‘ಭೂಮಿಯ ಮೇಲಿನ ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುತ್ತವೆ. ಅವುಗಳಲ್ಲಿ ಯಾವ ಗುಣಗಳನ್ನು ಬಳಸಿಕೊಂಡು ನಮ್ಮನ್ನು ಹಾಗೂ ನಮ್ಮ ಸುತ್ತಲಿನವರನ್ನು ಪ್ರಭಾವಿಸುತ್ತೇವೆ ಎಂಬುದು ಸಂಪೂರ್ಣವಾಗಿ ನಮ್ಮ ಆಯ್ಕೆ. ನಾಝಿಗಳು ಹೇಳುತ್ತಿದ್ದಂತೆ, ‘ಹಿಟ್ಲರನಿಗೆ ಜಯವಾಗಲಿ!’

ಇದನ್ನೂ ಓದಿ : Viral Video:’ಸೆರಗನ್ನು ಮೇಲೇರಿಸಿಕೊಳ್ಳಿ!’; ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಡೆಲಾಯಿಟ್ ಸಂಸ್ಥೆಯಲ್ಲಿ ಕೆಲಸ ಮಾಡುವ ನೀರಭ್ ಮೆಹೆರೋತ್ರಾ ಎನ್ನುವವನು ಹಿಟ್ಲರನ ಬಗೆಗಿನ ಪುಸ್ತಕವೊಂದನ್ನು ಓದಿ ಕಂಡುಕೊಂಡ ‘ನೀತಿ’ ಇದಂತೆ! ‘ಗೂಗಲ್‌ನಲ್ಲಿ ಹುಡುಕಿದರೆ ಅವನನ್ನು ಅಂಕುಶವಿಲ್ಲದ ಸರ್ವಾಧಿಕಾರಿ, ನಿರ್ದಯಿ, ಆಕ್ರಮಣಕಾರಿ ಎಂದೆಲ್ಲ ಕರೆದಿದ್ದಾರೆ ಹಾಗೂ ಮಂದಿ ಅವನನ್ನು ತಲೆಕೆಟ್ಟವನು ಎಂದೂ ನಂಬಿದ್ದಾರೆ. ಆದರೆ ಅವನಲ್ಲಿ ಅನೇಕ ಒಳ್ಳೆಯ ಗುಣಗಳಿದ್ದವು. ನಾವು ಅವನಿಂದ ಕಲಿಯುವುದು ಬಹಳಷ್ಟಿದೆ.’ ‘ಶುಕ್ರವಾರದ ಸ್ಫೂರ್ತಿ’ ಎಂಬ ಒಕ್ಕಣೆಯ ತನ್ನ ಪೋಸ್ಟ್‌ನಲ್ಲಿ ಹಿಟ್ಲರ್​ನ ಸದ್ಗುಣಗಳ ಪಟ್ಟಿಯನ್ನೇ ಕೊಟ್ಟಿದ್ದಾನೆ: ವರ್ಚಸ್ವೀ ದಾರ್ಶನಿಕ, ಸೂಜಿಗಲ್ಲಿನ ಸೆಳೆತದ ವಾಗ್ಮಿ, ಮಹಾ ಆತ್ಮವಿಶ್ವಾಸಿ, ಅಸಾಧಾರಣ ಬುದ್ಧಿಜೀವಿ, ಹಾಗೂ ಎಣೆಯಿಲ್ಲದ ಕ್ರಿಯಾಶೀಲ.

ಇದನ್ನೂ ಓದಿ : Viral: ‘ಸರಳ’ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಇದನ್ನೋದಿದ ಬಹಳಷ್ಟು ಮಂದಿಗೆ ಸಹಜವಾಗಿ ಆಘಾತವಾಗಿದೆ. ಆದರೆ ಅವನು ಹೇಳಿದ್ದುದರಲ್ಲಿ ತಪ್ಪೇನೂ ಇಲ್ಲ ಎಂದವರೂ ಇದ್ದಾರೆ. ‘ಇದು ಸರಿಯೋ ತಪ್ಪೋ, ಹೋಗಿಹೋಗಿ ಲಿಂಕ್ಡ್​ಇನ್​ನಲ್ಲಿ ಪೋಸ್ಟ್ ಮಾಡುವುದೇ?’ ಎಂದಿದ್ದಾರೆ ಕೆಲವರು. ಈ ವ್ಯಕ್ತಿಯ ನಿಲುವಿನ ಬಗ್ಗೆ ನಿಮಗೇನೆನ್ನಿಸುತ್ತದೆ? ಅವನನ್ನು ಕೆಲಸದಿಂದ ತೆಗೆದುಹಾಕಿದ್ದು ಸರಿಯೇ? ನಿಮ್ಮ ಅಭಿಪ್ರಾಯ ತಿಳಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:17 pm, Fri, 26 May 23

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ