AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಜಗಳವಾಡೋದನ್ನು ಮಾತ್ರ ಇಲ್ಲಿ ಉಚಿತವಾಗಿ ಕಲಿಸಿಕೊಡಲಾಗುವುದು

Attitude: ನಮ್ಮ ಗುರಿ ಸ್ಪಷ್ಟವಾಗಿದ್ದಾಗ ಆ್ಯಟಿಟ್ಯೂಡ್ ಅನ್ನೋದು ತಾನಾಗಿಯೇ ಮೈಗೂಡುತ್ತದೆ. ಈ ಕೆಂಪು ಫ್ರಾಕ್ ಹುಡುಗಿಯನ್ನು ಗಮನಿಸಿದರೆ ಹೇಗೆ ಅನ್ನೋದು ಖಂಡಿತ ನಿಮಗೆ ತಿಳಿಯುತ್ತದೆ! ನೋಡಿ ವಿಡಿಯೋ.

Viral Video: ಜಗಳವಾಡೋದನ್ನು ಮಾತ್ರ ಇಲ್ಲಿ ಉಚಿತವಾಗಿ ಕಲಿಸಿಕೊಡಲಾಗುವುದು
ನೀನಷ್ಟೇನಾ ನಾನೂ ಮುಂದೆ ಬರಬೇಕು...
TV9 Web
| Edited By: |

Updated on:May 27, 2023 | 10:07 AM

Share

Attitude : ಈ ಕೆಂಪು ಫ್ರಾಕ್​ ಹಾಕಿಕೊಂಡಿರುವವಳು ನಾನೇ ನಾನೇ. ಇವಳ ಹಾಗೆ ಇರುವುದೇ ಸುಖಜೀವನದ ಗುಟ್ಟು, ನಾನಂತೂ ಹೀಗೆಯೇ ಇದ್ದೇನೆ. ಇವಳ ಆ್ಯಟಿಟ್ಯೂಡ್ (Attitude)​ ಮಾತ್ರ ಬೊಂಬಾಟ್​. ನನ್ನ ಒಡಹುಟ್ಟಿದವರು ಹೀಗೆಯೇ ಜಗಳಾಡಿಕೊಂಡಿರುತ್ತಾರೆ ನಾ ಮಾತ್ರ ಇವಳಂತೆಯೇ ಇರುತ್ತೇನೆ. ನಾನು ಮನೆಯಲ್ಲಿಯೂ ಆಫೀಸಿನಲ್ಲಿಯೂ ಹೀಗೆಯೇ ಇರುತ್ತೇನೆ, ಯಾರು ಏನಾದರೂ ಕಿತ್ತಾಡಿಕೊಳ್ಳಲಿ ನಾನಂತೂ ಈ ಕೆಂಪುಟಾಣಿಯ ಹಾಗೆಯೇ! ಹೀಗೆ ನೆಟ್ಟಿಗರೆಲ್ಲ ಈ ವಿಡಿಯೋಗೆ ಪ್ರತಿಕ್ರಿಯಿಸುತ್ತಿದ್ದಾರೆ.

ನೀವಷ್ಟೇ ಏನು? ನಾನೂ ಮುಂದೆ ಬಂದು ಡ್ಯಾನ್ಸ್ ಮಾಡಬೇಕು ಎಂದು ಮಧ್ಯದ ಮಗು ಮುಂದೆ ಬರುತ್ತದೆ. ನೀನ್ಯಾಕೆ ನಮ್ಮ ಮಧ್ಯೆ ಬಂದೆ ಎಂದು ಬಲಬದಿಯ ಮಗು ಅದನ್ನು ತಳ್ಳುತ್ತದೆ. ನಂತರ ಎರಡೂ ಹೊಡೆದಾಡಿಕೊಂಡು ಕಿವಿ ಕೂದಲು ಜಗ್ಗಾಡಿಕೊಂಡು ಜಗಳಾಡಲು ಶುರು ಮಾಡುತ್ತವೆ. ಆದರೆ ಈ ಕೆಂಪು ಫ್ರಾಕ್ ಹಾಕಿಕೊಂಡ ಮಗುವಿನ ಗುರಿ ಮಾತ್ರ ತಾನಾಯಿತು ಡ್ಯಾನ್ಸಾಯಿತು ಎದುರಿನ ಕ್ಯಾಮೆರಾಆಯಿತು.

ಇದನ್ನೂ ಓದಿ : Viral Video: ‘ಸೆರಗನ್ನು ಮೇಲೇರಿಸಿಕೊಳ್ಳಿ!’ ನೈತಿಕ ಶಿಕ್ಷಕರಿಗೆ ಗಾಯಕಿಯ​ ಮಾತಿನಚಾಟಿ, ನೋಡಿ ವಿಡಿಯೋ

ಮೇ 25ರಂದು ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಹೆಣ್ಣುಮಕ್ಕಳು ಯಾವ ವಯಸ್ಸಿನಲ್ಲಿಯೂ ಹೀಗೇನೇ, ಹಿಂದೆ ಇರಲು ಇಷ್ಟಪಡುವುದಿಲ್ಲ! ಎಂಬ ಒಕ್ಕಣೆ ಈ ಟ್ವೀಟ್​ಗೆ ಇದೆ. ಆದರೆ ಹೆಣ್ಣು ಸಹನಾಮಯಿ, ದಯಾಮಯೀ, ಕರುಣಾಮಯೀ, ತ್ಯಾಗಮಯೀ, ಕ್ಷಮಯಾಧರಿತ್ರೀ ಅಂತೆಲ್ಲ ಹೇಳಿದ್ದೆಲ್ಲ ಎಲ್ಲಿ ಹೋಯಿತು ಮತ್ತೆ?

ಇದನ್ನೂ ಓದಿ : Viral:’ಸರಳ’ ಸಜ್ಜನಿಕೆಯ ಸುಧಾ ಮೂರ್ತಿ ಟ್ರೋಲ್ ಆಗುತ್ತಿರುವುದೇಕೆ? ಆ್ಯನ್ಸರ್ ಈಸ್ ಸೋ ಸಿಂಪಲ್!

ಹುಟ್ಟುತ್ತ ಮಕ್ಕಳು ಮಕ್ಕಳೇ. ಬೆಳೆಸುತ್ತ ನೀ ಹೆಣ್ಣು, ನೀ ಗಂಡು ಎಂದು ಬೇರೆ ಬೇರೆ ಅಚ್ಚಿನಲ್ಲಿ ಹಾಕುವುದು ನಾವೇ ಅಲ್ಲವೆ? ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ಎಂದು ಹೇಳಿದ ದಾಸಿಮಯ್ಯ ಈ ವಿಡಿಯೋದ ಒಕ್ಕಣೆ ನೋಡಿದ್ದರೆ ಮತ್ತಿನೇನು ವಚನ ಬರೆಯುತ್ತಿದ್ದನೋ. ನೆಟ್ಟಿಗರಂತೂ ಇಂಥ ಒಣವಾದಕ್ಕೆ ಬೀಳದೆ ಆ್ಯಟಿಟ್ಯೂಡ್!​ ಎಂದು ಸಂಭ್ರಮಿಸುತ್ತಿದ್ದಾರೆ.

ಏನಂತೀರಿ ನೀವು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:56 am, Sat, 27 May 23

Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ