AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ

ಸಹದೇವ್​ ‘ಬಚ್ಪನ್​ ಕಾ ಪ್ಯಾರ್..’​ ಹಾಡನ್ನು ಹಾಡಿದ್ದ. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್​ ಸೃಷ್ಟಿಮಾಡಿತ್ತು.

‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ
‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Aug 12, 2021 | 5:11 PM

Share

 ಸೋಶಿಯಲ್​ ಮೀಡಿಯಾ ಇಂದು ಪವರ್​ಫುಲ್​ ಮಾಧ್ಯಮವಾಗಿ ಮಾರ್ಪಟ್ಟಿದೆ. ಯಾವುದೇ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಖ್ಯಾತಿ ಪಡೆದುಕೊಳ್ಳಬಹುದು. ಅದೇ ರೀತಿ, ಹಲವು ವರ್ಷಗಳಿಂದ ಗಳಿಸಿದ ಖ್ಯಾತಿ ರಾತ್ರಿ ಕಳೆಯುವರೊಳಗೆ  ಮಣ್ಣು ಪಾಲಾಗಬಹುದು. ಅಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಬೆಳೆದುಕೊಂಡಿದೆ. ಇದಕ್ಕೆ ತಾಜಾ ಉದಾಹರಣೆ ಚತ್ತೀಸ್​ಗಢದ ಹುಡುಗ ಸುಹ್​ದೇವ್​ ಡಿರ್ಡೋ. ಈತ ‘ಬಚ್ಪನ್​ ಕಾ ಪ್ಯಾರ್..’ ಹಾಡಿನ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಶನ್​ ಸೃಷ್ಟಿ ಮಾಡಿದ್ದ. ಸಹದೇವ್​ಗೆ ಎಂಜಿ ಹೆಕ್ಟರ್​ ಕಂಪನಿಯವರು ಕಾರು ನೀಡಿದ್ದಾರೆ ಎನ್ನಲಾದ ಫೋಟೋ ಒಂದು ಇತ್ತೀಚೆಗೆ ವೈರಲ್​ ಆಗಿತ್ತು. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.

ಸಹದೇವ್​ ‘ಬಚ್ಪನ್​ ಕಾ ಪ್ಯಾರ್..’​ ಹಾಡನ್ನು ಹಾಡಿದ್ದ. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್​ ಸೃಷ್ಟಿಮಾಡಿತ್ತು. ಅನೇಕರು ಬಾಲಕನ ಕಂಠವನ್ನು ಮೆಚ್ಚಿಕೊಂಡಿದ್ದರು. ರ್ಯಾಪರ್​ ಬಾದ್​ಶಾ ಕೂಡ ಸಹದೇವ್​ ಹಾಡಿಗೆ ತಲೆದೂಗಿದ್ದರು. ಸಹದೇವ್​​ನನ್ನು​ ಒಳಗೊಂಡ ‘ಬಚ್ಪನ್​ ಕ ಪ್ಯಾರ್​’ ಹೊಸ ಹಾಡನ್ನು ಕೂಡ ರಿಲೀಸ್​ ಮಾಡಿದ್ದರು ಬಾದ್​ಶಾ.

ಇದಾದ ಬೆನ್ನಲ್ಲೇ ಸಹದೇವ್​ ಎಂಜಿ ಹೆಕ್ಟರ್​ ಕಾರಿನ ಎದುರು ನಿಂತಿರುವ ಫೋಟೋ ವೈರಲ್​ ಆಗಿತ್ತು. ಅನೇಕರು ಸಹದೇವ್​ಗೆ 23 ಲಕ್ಷದ ಕಾರ್ ಗಿಫ್ಟ್​ ಆಗಿ ಸಿಕ್ಕಿದೆ ಎಂದು ಭಾವಿಸಿದ್ದರು. ಆದರೆ, ಅಸಲಿಯತ್ತು ಬೇರೆಯೇ ಇದೆ. ಸಹದೇವ್​ ಎಂಜಿ ಹೆಕ್ಟರ್​ ಶೋರೂಮ್​ಗೆ ಬಂದಿದ್ದು ನಿಜ. ಆದರೆ, ಆತನಿಗೆ ಕಾರು ಗಿಫ್ಟ್​ ಆಗಿ ಸಿಕ್ಕಿಲ್ಲ. ಬದಲಿಗೆ ಆತನಿಗೆ ಶೋರೂಮ್​ನಲ್ಲಿ 21 ಸಾವಿರ ರೂಪಾಯಿಯ ಚೆಕ್​ ವಿತರಣೆ ಮಾಡಲಾಗಿದೆ. ಈ ವಿಚಾರವನ್ನು ಎಂಜಿ ಹೆಕ್ಟರ್​ ಬ್ರ್ಯಾಂಚ್​ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ಸಹದೇವ್​ ಚತ್ತೀಸ್​ಗಢದ ಸುಕ್ಮಾ ಜಿಲ್ಲೆಯವನು. ರಾತ್ರಿ ಬೆಳಗಾಗುವುದರೊಳಗೆ ಈತ ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿದ್ದ. ರಾನು ಮಂಡಲ್​ ಕೂಡ ಇದೇ ರೀತಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ