AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ

ಸಹದೇವ್​ ‘ಬಚ್ಪನ್​ ಕಾ ಪ್ಯಾರ್..’​ ಹಾಡನ್ನು ಹಾಡಿದ್ದ. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್​ ಸೃಷ್ಟಿಮಾಡಿತ್ತು.

‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ
‘ಬಚ್ಪನ್​ ಕಾ ಪ್ಯಾರ್​‘ ಹುಡುಗನಿಗೆ 23 ಲಕ್ಷದ ಕಾರು ಗಿಫ್ಟ್​ ಸಿಕ್ಕಿದೆ ಎಂಬ ಸುದ್ದಿಯ ಅಸಲಿಯತ್ತೇ ಬೇರೆ
TV9 Web
| Edited By: |

Updated on: Aug 12, 2021 | 5:11 PM

Share

 ಸೋಶಿಯಲ್​ ಮೀಡಿಯಾ ಇಂದು ಪವರ್​ಫುಲ್​ ಮಾಧ್ಯಮವಾಗಿ ಮಾರ್ಪಟ್ಟಿದೆ. ಯಾವುದೇ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಖ್ಯಾತಿ ಪಡೆದುಕೊಳ್ಳಬಹುದು. ಅದೇ ರೀತಿ, ಹಲವು ವರ್ಷಗಳಿಂದ ಗಳಿಸಿದ ಖ್ಯಾತಿ ರಾತ್ರಿ ಕಳೆಯುವರೊಳಗೆ  ಮಣ್ಣು ಪಾಲಾಗಬಹುದು. ಅಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಬೆಳೆದುಕೊಂಡಿದೆ. ಇದಕ್ಕೆ ತಾಜಾ ಉದಾಹರಣೆ ಚತ್ತೀಸ್​ಗಢದ ಹುಡುಗ ಸುಹ್​ದೇವ್​ ಡಿರ್ಡೋ. ಈತ ‘ಬಚ್ಪನ್​ ಕಾ ಪ್ಯಾರ್..’ ಹಾಡಿನ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಶನ್​ ಸೃಷ್ಟಿ ಮಾಡಿದ್ದ. ಸಹದೇವ್​ಗೆ ಎಂಜಿ ಹೆಕ್ಟರ್​ ಕಂಪನಿಯವರು ಕಾರು ನೀಡಿದ್ದಾರೆ ಎನ್ನಲಾದ ಫೋಟೋ ಒಂದು ಇತ್ತೀಚೆಗೆ ವೈರಲ್​ ಆಗಿತ್ತು. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.

ಸಹದೇವ್​ ‘ಬಚ್ಪನ್​ ಕಾ ಪ್ಯಾರ್..’​ ಹಾಡನ್ನು ಹಾಡಿದ್ದ. ಈ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್​ ಸೃಷ್ಟಿಮಾಡಿತ್ತು. ಅನೇಕರು ಬಾಲಕನ ಕಂಠವನ್ನು ಮೆಚ್ಚಿಕೊಂಡಿದ್ದರು. ರ್ಯಾಪರ್​ ಬಾದ್​ಶಾ ಕೂಡ ಸಹದೇವ್​ ಹಾಡಿಗೆ ತಲೆದೂಗಿದ್ದರು. ಸಹದೇವ್​​ನನ್ನು​ ಒಳಗೊಂಡ ‘ಬಚ್ಪನ್​ ಕ ಪ್ಯಾರ್​’ ಹೊಸ ಹಾಡನ್ನು ಕೂಡ ರಿಲೀಸ್​ ಮಾಡಿದ್ದರು ಬಾದ್​ಶಾ.

ಇದಾದ ಬೆನ್ನಲ್ಲೇ ಸಹದೇವ್​ ಎಂಜಿ ಹೆಕ್ಟರ್​ ಕಾರಿನ ಎದುರು ನಿಂತಿರುವ ಫೋಟೋ ವೈರಲ್​ ಆಗಿತ್ತು. ಅನೇಕರು ಸಹದೇವ್​ಗೆ 23 ಲಕ್ಷದ ಕಾರ್ ಗಿಫ್ಟ್​ ಆಗಿ ಸಿಕ್ಕಿದೆ ಎಂದು ಭಾವಿಸಿದ್ದರು. ಆದರೆ, ಅಸಲಿಯತ್ತು ಬೇರೆಯೇ ಇದೆ. ಸಹದೇವ್​ ಎಂಜಿ ಹೆಕ್ಟರ್​ ಶೋರೂಮ್​ಗೆ ಬಂದಿದ್ದು ನಿಜ. ಆದರೆ, ಆತನಿಗೆ ಕಾರು ಗಿಫ್ಟ್​ ಆಗಿ ಸಿಕ್ಕಿಲ್ಲ. ಬದಲಿಗೆ ಆತನಿಗೆ ಶೋರೂಮ್​ನಲ್ಲಿ 21 ಸಾವಿರ ರೂಪಾಯಿಯ ಚೆಕ್​ ವಿತರಣೆ ಮಾಡಲಾಗಿದೆ. ಈ ವಿಚಾರವನ್ನು ಎಂಜಿ ಹೆಕ್ಟರ್​ ಬ್ರ್ಯಾಂಚ್​ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.

ಸಹದೇವ್​ ಚತ್ತೀಸ್​ಗಢದ ಸುಕ್ಮಾ ಜಿಲ್ಲೆಯವನು. ರಾತ್ರಿ ಬೆಳಗಾಗುವುದರೊಳಗೆ ಈತ ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿದ್ದ. ರಾನು ಮಂಡಲ್​ ಕೂಡ ಇದೇ ರೀತಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದರು.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್​ ಸಿರೀಸ್​ ಟ್ರೇಲರ್​ನಲ್ಲಿ ಘಟಾನುಘಟಿಗಳ ಸಂಗಮ

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ