Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೈಕ್‌ ಸವಾರನಿಗೆ ಗುದ್ದಿದ ಟ್ಯಾಂಕರ್;‌ ಇಲ್ಲಿ ತಪ್ಪು ಯಾರದ್ದು?

ಪ್ರತಿನಿತ್ಯ ಅಲ್ಲೊಂದು ಇಲ್ಲೊಂದರಂತೆ ಹತ್ತಾರು ಅಪಘಾತ ಪ್ರಕರಣಗಳ ಸುದ್ದಿ ಕೇಳಿ ಬರುತ್ತಿರುತ್ತವೆ. ವಾಹನ ಸವಾರರ ಸಂಚಾರ ನಿಯಮ ಪಾಲನೆಯ ಉದಾಸಿನತೆಯಿಂದಲೇ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಇಲ್ಲೊಂದು ಅಂತಹದ್ದೇ ಭೀಕರ ಅಪಘಾತ ಸಂಭವಿಸಿದ್ದು, ಸೀದಾ ಬಂದಂತಹ ಟ್ಯಾಂಕರ್‌ ಬೈಕ್‌ ಸವಾರನಿಗೆ ಗುದ್ದಿದೆ. ಈ ಭೀಕರ ಆಕ್ಸಿಡೆಂಟ್‌ ದೃಶ್ಯ ವೈರಲ್‌ ಆಗುತ್ತಿದ್ದು, ಇಲ್ಲಿ ತಪ್ಪು ಯಾರದ್ದು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

Viral: ಬೈಕ್‌ ಸವಾರನಿಗೆ ಗುದ್ದಿದ ಟ್ಯಾಂಕರ್;‌ ಇಲ್ಲಿ ತಪ್ಪು ಯಾರದ್ದು?
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 21, 2025 | 4:13 PM

ವರ್ಷದಿಂದ ವರ್ಷಕ್ಕೆ ರಸ್ತೆ ಅಪಘಾತಗಳ (Road Accident) ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರತಿವರ್ಷ ಸಾವಿರಾರು ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಸಂಚಾರ ನಿಯಮ (Traffic rules) ಉಲ್ಲಂಘನೆಯಿಂದ, ಅಜಾಗರೂಕತೆಯಿಂದ ವಾಹನ ಓಡಿಸುವುದರಿಂದ ಹೆಚ್ಚಿನ ಅಪಘಾತಗಳು (accidents) ಸಂಭವಿಸುತ್ತವೆ. ಇದೀಗ ಇಲ್ಲೊಂದು ಅಪಘಾತದ ದೃಶ್ಯ ವೈರಲ್‌ ಆಗುತ್ತಿದ್ದು, ಸೀದಾ ಬಂದಂತಹ ಟ್ಯಾಂಕರ್‌ (tanker) ಬೈಕ್‌ (bike) ಸವಾರನಿಗೆ ಗುದ್ದಿದೆ. ಸೋಷಿಯಲ್‌ ಮೀಡಿಯಾಲ್ಲಿ ಇಲ್ಲಿ ತಪ್ಪು ಯಾರದ್ದು ಎಂಬ ಚರ್ಚೆ ಜೋರಾಗಿದ್ದು, ಹೆಚ್ಚಿನವರು ಟ್ಯಾಂಕರ್‌ ಮುಂಭಾಗದಲ್ಲಿದ್ದ ಟ್ಯಾಕ್ಸಿಯವನಿಂದಲೇ ಈ ಅಪಘಾತ ಸಂಭವಿಸಿದ್ದು ಎಂದು ಹೇಳಿದ್ದಾರೆ.

ಈ ಭೀಕರ ಅಪಘಾತ ಕೇರಳದಲ್ಲಿ ನಡೆದಿದ್ದು, ರಸ್ತೆ ತಿರುವಿನಲ್ಲಿ ಬೈಕ್‌ ಸವಾರ ತನ್ನ ಪಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಮುಂಬದಿಯಿಂದ ಬಂದಂತಹ ಟ್ಯಾಂಕರ್‌ ಸವಾರನಿಗೆ ಗುದ್ದಿದೆ. ಈ ಭೀಕರ ಅಪಘಾತದ ಸಿಸಿ ಟಿವಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
Image
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
Image
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
Image
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
Image
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

DriveSmart_IN ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದ್ದು, “ಭಾರತದಲ್ಲಿ ರಸ್ತೆ ಸಂಚಾರದ ವೇಲೆ ನಾವೇಕೆ ಜೋಪಾನವಾಗಿರಬೇಕು? ಏಕೆಂದರೆ ಪ್ರತಿಯೊಬ್ಬರಿಗೆ ಅವರಿಗೆ ಎಲ್ಲಿ ಹೋಗಬೇಕೆಂದು ಗೊತ್ತಿದೆ, ಆದ್ರೆ ದಾರಿ ಮಧ್ಯೆ ಏನಾಗುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಟ್ಯಾಕ್ಸಿ ಡ್ರೈವರ್‌ ಕ್ರಾಸ್‌ ಆಗುವ ಸಲುವಾಗಿ ವಾಹನವನ್ನು ಸ್ಲೋ ಮಾಡಿದಾಗ ಓವರ್‌ಟೇಕ್‌ ಮಾಡಲು ಬಂದ ಟ್ಯಾಂಕರ್‌ ಸೀದಾ ಹೋಗಿ ಬೈಕ್‌ ಸವಾರನಿಗೆ ಗುದ್ದುವಂತಹ ಭೀಕರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮಿಮ್ಸ್ ಮೆಡಿಕಲ್‌ ಕಾಲೇಜು ಆವರಣದೊಳಗೆ ಬಂದ ಬುಸ್‌ ಬುಸ್‌ ನಾಗಪ್ಪ

ಮಾರ್ಚ್‌ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಮುಂಬದಿಯಲ್ಲಿದ್ದ ಟ್ಯಾಕ್ಸಿಯವನದ್ದೇ ತಪ್ಪುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತಿರುವ ರಸ್ತೆಯಲ್ಲಿ ವಾಹನಗಳ ವೇಗ ಮಿತಿಯಲ್ಲಿರಲಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಕಡೆಗಳಲ್ಲಿ ಸ್ಪೀಡ್‌ ಬ್ರೇಕರ್‌ ಹಾಕುವ ಮೂಲಕ ಅಪಘಾತಗಳನ್ನು ತಪ್ಪಿಸಬಹುದಲ್ಲವೇʼ ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ