AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರು ಗೆದ್ದ

ಗ್ರಾಮೀಣ ಜನರ ಬದುಕಿನೊಂದಿಗೆ ಬೆಸೆದುಕೊಂಡಿದೆ ಈ ಎತ್ತಿನ ಗಾಡಿ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಮನೋರಂಜನೆಯೊಂದಿಗೆ ಹೊಸ ಚೈತನ್ಯ ನೀಡುವ ಈ ಎತ್ತಿನ ಗಾಡಿ ಸ್ಪರ್ಧೆಯನ್ನು ಆಯೊಜಿಸುವುದನ್ನು ನೀವು ನೋಡಿರುತ್ತೀರಿ. ಆದರೆ ವ್ಯಕ್ತಿಯೊಬ್ಬರು ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಫಾರ್ಚೂನರ್ ಕಾರನ್ನು ಗೆದ್ದುಕೊಂಡಿದ್ದಾನೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರು ಗೆದ್ದ
ಎತ್ತಿನಗಾಡಿ ಸ್ಪರ್ಧೆImage Credit source: Social Media
ಸಾಯಿನಂದಾ
|

Updated on:Nov 11, 2025 | 1:08 PM

Share

ಮಹಾರಾಷ್ಟ್ರ, ನವೆಂಬರ್ 11: ಹಳ್ಳಿ ಬದುಕು ನೋಡೋದಕ್ಕೆ ಮಾತ್ರವಲ್ಲ ಅನುಭವಿಸುವುದಕ್ಕೂ ಚಂದ. ಇಲ್ಲಿನ ಆಚಾರ ವಿಚಾರ, ದೇಸಿ ಕ್ರೀಡೆಗಳನ್ನು ಆನಂದಿಸಿದವರೇ ಅದರ ಖುಷಿಯನ್ನು ಬಲ್ಲರು. ಹಳ್ಳಿ ಬದುಕು ಎಂದಾಗ ಎತ್ತಿನ ಗಾಡಿ ಕಣ್ಣ ಮುಂದೇ ಬರುತ್ತದೆ. ಹೌದು, ಮಹಾರಾಷ್ಟ್ರದ ಸಾಂಗ್ಲಿಯ ಬೋರ್ಗಾಂವ್‌ನಲ್ಲಿ (Borgaon, Sangli of Maharashtra) ಇತಿಹಾಸದಲ್ಲಿಯೇ ಅತಿದೊಡ್ಡ ಎತ್ತಿನಗಾಡಿ ಓಟದ (Bullock cart race) ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ವ್ಯಕ್ತಿಯೊಬ್ಬ ಜೋಡಿ ಎತ್ತಿನ ಗಾಡಿಯನ್ನು ಓಡಿಸಿ ಕಾರು ಗೆದ್ದುಕೊಂಡಿದ್ದಾನೆ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಜೋಡೆತ್ತನ್ನು ಮುನ್ನಡೆಸಿ ಕಾರು ಗೆದ್ದ ವ್ಯಕ್ತಿ

ಡಬಲ್ ಮಹಾರಾಷ್ಟ್ರ ಕೇಸರಿ ಚಂದ್ರಹರ್ ಪಾಟೀಲ್ ಅವರು ದೇಶದ ಅತಿದೊಡ್ಡ ಜೋಡಿ ಎತ್ತಿನಗಾಡಿ ಓಟವನ್ನು ಆಯೋಜಿಸಿದ್ದು, ಪ್ರತಿಷ್ಠಿತ ಫಾರ್ಚೂನರ್ ಗೆಲ್ಲಲು ಸಾವಿರಾರು ಎತ್ತಿನ ಗಾಡಿಗಳು ಬೋರ್ಗಾಂವ್‌ನ ಕೊಡ್ಯದಲ್ಲಿರುವ ಮಲ್ರಾನಾಗೆ ಆಗಮಿಸಿದ್ದವು. ಆದರೆ ಹೆಲಿಕಾಪ್ಟರ್ ಬೈಜ್ಯಾ ಮತ್ತು ಬ್ರೇಕ್ ಫೇಲ್ ಎತ್ತಿನ ಜೋಡಿಯು ಉಳಿದ ಜೋಡಿ ಎತ್ತುಗಳನ್ನು ಸೋಲಿಸಿ ಪ್ರತಿಷ್ಠಿತ ಫಾರ್ಚೂನರ್ ಕಾರನ್ನು ಗೆದ್ದಿದೆ. ಜೋಡಿ ಎತ್ತನ್ನು ಮುನ್ನಡೆಸಿದ್ದು ಶ್ರೀನಾಥ್ ಕೇಸರಿ. ದೇಶದ ಅತಿದೊಡ್ಡ ಜೋಡಿ ಎತ್ತಿನಗಾಡಿ ರೇಸ್‌ನಲ್ಲಿ ಶ್ರೀನಾಥ್ ಕೇಸರಿ ವಿಜೇತರಾಗಿ ಹೊರಹೊಮ್ಮಿದ್ದು, ಫಾರ್ಚೂನರ್ ಕಾರು ಕೈ ಸೇರಿದೆ.

ಇದನ್ನೂ ಓದಿ:ಒಂದು ಕೋಟಿ ಲಾಟರಿ ಗೆದ್ದವನನ್ನ ಡೋಲು ಬಾರಿಸಿ ಹುಡುಕುತ್ತಿದ್ದಾರೆ ಇಲ್ಲಿ

ಪ್ರಮುಖ ಆಕರ್ಷಣೆಯಾಗಿದ್ದ ಮಹಿಳೆಯರ ಎತ್ತಿನಗಾಡಿ ಓಟ

ಈ ಓಟದಲ್ಲಿ ರಾಜ್ಯ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಾಜಿ ಶಾಸಕ ಶಹಾಜಿಬಾಪು ಪಾಟೀಲ್ ಸೇರಿದಂತೆ ಇನ್ನಿತ್ತರರು ಉಪಸ್ಥಿತರಿದ್ದರು. ಮಹಿಳೆಯರ ಎತ್ತಿನಗಾಡಿ ಓಟ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಹಸು ತಳಿಯ ಪ್ರಚಾರಕ್ಕಾಗಿ 100 ಮಹಿಳೆಯರಿಗೆ ಹಸುಗಳನ್ನು ನೀಡಲಾಗಿತ್ತು. ವಿಜೇತರಿಗೆ ಥಾರ್, ಫಾರ್ಚೂನರ್, 150 ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್‌ಗಳಂತಹ ಕೋಟ್ಯಂತರ ರೂಪಾಯಿಗಳ ಬಹುಮಾನಗಳನ್ನು ಇಡಲಾಗಿತ್ತು. ಎತ್ತಿನಗಾಡಿ ರೇಸ್ ನಲ್ಲಿ ಬಿಎಂಡಬ್ಲ್ಯು ಕಾರು ಇರುವುದಾಗಿ ಚಂದ್ರಹರ್ ಪಾಟೀಲ್ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Tue, 11 November 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ