Viral : ‘ಬಾರ್ಬಿ ನೊಬೆಲ್ ಪುರಸ್ಕಾರ ಹೊಂದಿದ್ದಾಳೆ, ಅದುವೇ ಕೆನ್’ ಮಲಾಲಾ ಟ್ವೀಟ್

Malala Yousafzai : 'ಸಿನೆಮಾ ನೋಡಿದ್ದು ಸಂತೋಷ. ಆದರೆ ಪಾಕಿಸ್ತಾನದ ಸಾವಿರಾರು ಹುಡುಗಿಯರ, ಮಹಿಳೆಯರ ದೌರ್ಜನ್ಯ ಪ್ರಕರಣಗಳನ್ನೊಮ್ಮೆ ನೋಡಿ. ನ್ಯಾಯಾಧೀಶರ ಪತ್ನಿಯಿಂದ ದೌರ್ಜನ್ಯಕ್ಕೆ ಒಳಗಾದ ಈ ಹೆಣ್ಣುಮಗುವಿಗೂ ನ್ಯಾಯ ಕೊಡಿಸಿ'

Viral : 'ಬಾರ್ಬಿ ನೊಬೆಲ್ ಪುರಸ್ಕಾರ ಹೊಂದಿದ್ದಾಳೆ, ಅದುವೇ ಕೆನ್' ಮಲಾಲಾ ಟ್ವೀಟ್
ಬಾರ್ಬ ಸಿನೆಮಾ ನೋಡಲು ಗಂಡನೊಂದಿಗೆ ಹೋಗಿದ್ದ ಮಲಾಲಾ ಯುಸೂಫ್​
Follow us
|

Updated on:Jul 31, 2023 | 4:54 PM

Barbie : ಎಐ ಕಲಾವಿದರು ಮಲಾಲಾಗೂ ಪಿಂಕ್​ ಫಿವರ್ ಅಂಟಿಸಿದರೋ ಏನೋ? ಖಂಡಿತ ಇಲ್ಲ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯುಸೂಫ್​ (Malala Yousafzai) ವಾರಾಂತ್ಯದಲ್ಲಿ ತಮ್ಮ ಪತಿ ಅಸರ್ ಮಲಿಕ್​ರೊಂದಿಗೆ ಬಾರ್ಬಿ ಸಿನೆಮಾ ನೋಡಿಬಂದಿದ್ದಾರೆ; ‘ಬಾರ್ಬಿ ನೊಬೆಲ್ ಪುರಸ್ಕಾರ ಹೊಂದಿದ್ದಾಳೆ, ಅದುವೇ ಕೆನ್’ ಎಂದು ಟ್ವೀಟ್ ಮಾಡಿದ್ದಾರೆ ಆಕೆ. ಈ ಪೋಸ್ಟ್ ಅನ್ನುಈತನಕ 31.2 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 9 ಲಕ್ಷ ಜನರು ಲೈಕ್ ಮಾಡಿದ್ದಾರೆ. 85,000 ಜನರು ರೀಟ್ವೀಟ್ ಮಾಡಿದ್ದಾರೆ.

ಸಾವಿರಾರು ಜನರು ಈ ಟ್ವೀಟಿನಡಿ ಪ್ರತಿಕ್ರಿಯಿಸಿದ್ದಾರೆ. ನಾನು ಕೆನಫ್​ ಎಂದು ತಮಾಷೆ ಮಾಡಿದ್ದಾರೆ ಒಬ್ಬರು.  ಈತನ ನೋಡಿದ ಬಾರ್ಬಿ ವರ್ಷನ್​ಗಳಿಗಿಂತ ಇದು ಭಿನ್ನವಾಗಿದೆ ಎಂದಿದ್ದಾರೆ ಇನ್ನೊಬ್ಬರು. ನಿಮ್ಮಿಬ್ಬರ ಈ ಫೋಟೋ ಅದ್ಭುತ ಎಂದಿದ್ಧಾರೆ ಕೆಲವರು. ಹೌದು ಈ ಸಿನೆಮಾ ನನಗೂ ಇಷ್ಟವಾಯಿತು ಎಂದು ಅನೇಕರು ಹೇಳಿದ್ದಾರೆ. ‘ಮಲಾಲಾ ಬಾರ್ಬಿ’ ಯನ್ನೂ ಸೃಷ್ಟಿಸಬೇಕು ಎಂದಿದ್ದಾರೆ ಮತ್ತೊಬ್ಬರು. ನೀವೀಗ ನೊಬೆಲ್ ಬ್ರೈಡ್​ ಎಂದಿದ್ದಾರೆ ಇನ್ನೊಬ್ಬರು. ಈ ಹೊಗಳಿಕೆಯ ಥ್ರೆಡ್​ನಲ್ಲಿಯೇ ಒಬ್ಬರು ಈ ಕೆಳಗಿನ ಬಾರ್ಬಿಗೆ ನ್ಯಾಯ ಬೇಕು, ಅದನ್ನು ನೀವು ಕೊಡಿಸಿ ಮಲಾಲಾ ಎಂದಿದ್ದಾರೆ ಒಬ್ಬರು.

ಪಾಕಿಸ್ತಾನದ ನ್ಯಾಯಾಧೀಶರ ಪತ್ನಿ ಅಸೀಮ್ ಹಫೀಜ್ 14 ವರ್ಷದ ತನ್ನ ಮನೆಗೆಲಸದಾಕೆ ರಿಜ್ವಾನಾಳನ್ನು ಚಿನ್ನಾಭರಣ ಕದ್ದಿದ್ದಕ್ಕಾಗಿ ಚಿತ್ರಹಿಂಸೆ ನೀಡಿದ್ದಾಳೆ. ಹೀಗೆ ಪಾಕಿಸ್ತಾನದಾದ್ಯಂತ ಸಾವಿರಾರು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳಿವೆ. ಆದರೂ ಸರ್ಕಾರ ದುರ್ಬಲರಿಗೆ ನ್ಯಾಯ ಒದಗಿಸುವುದನ್ನು ನಿರಾಕರಿಸುತ್ತಾರೆ. ಮಲಾಲಾ ನೀವು ಈ ಮಗುವಿಗೆ ದಯವಿಟ್ಟು ಸಹಾಯ ಮಾಡಿ ಎಂದಿದ್ದಾರೆ. ಈ ಟ್ವೀಟ್ ಬಗ್ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿ ಮಲಾಲಾ ಈ ವಿಷಯವಾಗಿ ಗಮನ ಹರಿಸಬೇಕು ಎಂದಿದ್ದಾರೆ.

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:51 pm, Mon, 31 July 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್