AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಸಲ ವಿಮಾನದಲ್ಲಿ ಪ್ರಯಾಣಿಸಿದ ವೃದ್ಧದಂಪತಿಗೆ ಊಟ ಕೊಡಿಸಿದ ಸಹಪ್ರಯಾಣಿಕ

Flight Journey : ಗಗನಸಖಿ ಅವರಿಗೆ ಫುಡ್​ ಪ್ಯಾಕ್​ ಕೊಡಲು ಹೋದಾಗ ಅವರದನ್ನು ನಿರಾಕರಿಸಿದರು. ಇದು ಅದೃಷ್ಟವಂತ ಗ್ರಾಹಕರಿಗೆ ಕೊಡುತ್ತಿರುವ ಉಚಿತ ಆಹಾರ ಎಂದು ತಿಳಿಸಲು ಹೇಳಿದೆ. ನಂತರ ಅವರಿಗೆ ತಿಳಿಯದಂತೆ ಹಣ ಪಾವತಿಸಿದೆ.

ಮೊದಲ ಸಲ ವಿಮಾನದಲ್ಲಿ ಪ್ರಯಾಣಿಸಿದ ವೃದ್ಧದಂಪತಿಗೆ ಊಟ ಕೊಡಿಸಿದ ಸಹಪ್ರಯಾಣಿಕ
Man buys food for an elderly couple from UP who boarded a flight for the first time
TV9 Web
| Updated By: ಶ್ರೀದೇವಿ ಕಳಸದ|

Updated on:Nov 03, 2022 | 4:16 PM

Share

Viral Video : ಬದುಕು ಸುಂದರವಾಗುವುದು ಪರಸ್ಪರ ಸಹಾಯದಿಂದ. ಸಹಾಯದಿಂದ ಮನಸ್ಸು ಸಮಾಧಾನಗೊಳ್ಳುತ್ತದೆ, ಖುಷಿಯನ್ನು ಅನುಭವಿಸುತ್ತದೆ. ಪರರ ಬಗ್ಗೆ ಯೋಚಿಸುವಂತಹ ಗುಣಸ್ವಭಾವದವರಿಗೆ ಈ  ಬಗ್ಗೆ ಖಂಡಿತ ಇದು ಅನುಭವಕ್ಕೆ ಬಂದಿರುತ್ತದೆ. ಉತ್ತರಪ್ರದೇಶದ ಈ ವೃದ್ಧ ದಂಪತಿ ಮೊದಲ ಸಲ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಹಳ್ಳಿಗಾಡಿನಿಂದ ಬಂದ ಇವರು ಈ ವಾತಾವರಣದಲ್ಲಿ ಸ್ವಲ್ಪ ಕಂಗಾಲಾಗಿದ್ದಾರೆ. ಆಗ ಸಹಪ್ರಯಾಣಿಕರು ಇವರಿಗೆ ಪ್ರಯಾಣದುದ್ದಕ್ಕೂ ಸಹಾಯ ಮಾಡಿದ್ದಾರೆ.

ಅಮಿತಾಬ್ ಷಾ ಎನ್ನುವವರೇ ಇವರ ಸಹಪ್ರಯಾಣಿಕರು. ಅವರು ಇವರನ್ನು ಬೋರ್ಡಿಂಗ್​ನಲ್ಲಿದ್ದಾಗಲೇ ಗಮನಿಸಿದ್ದಾರೆ. ಇವರಿಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದಲೇ ಅವರತ್ತ ನೋಡಿ ನಗು ಚೆಲ್ಲಿದ್ದಾರೆ. ನಂತರ ಏನಾಯಿತು? ಎನ್ನುವುದನ್ನು ಅವರು ಲಿಂಕ್​ಡಿನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನಿನ್ನೆ ನಾನು ದೆಹಲಿಯಿಂದ ಕಾನ್ಪುರಕ್ಕೆ ಹೊರಟಿದ್ದೆ. ಪ್ರಯಾಣದಲ್ಲಿ ಈ ವೃದ್ಧ ದಂಪತಿಗಳನ್ನು ನೋಡಿದೆ. ಪಾಪ ಅವರು ಬಹಳ ಸುಸ್ತಾದಂತೆ ತೋರುತ್ತಿದ್ದರು. ಮಾತನಾಡಿಸಿದಾಗ, ಅವರು ಉತ್ತರ ಪ್ರದೇಶದ ಹಳ್ಳಿಯಿಂದ ಬಂದಿರುವುದಾಗಿ ಹೇಳಿದರು. ದೆಹಲಿ ವಿಮಾನ ನಿಲ್ದಾಣ ತಲುಪಲು ಅವರು 8 ಗಂಟೆಗಳ ಕಾಲ ಬಸ್​ ಪ್ರಯಾಣ ಮಾಡಿ ಬಂದಿದ್ದರು. ಇಂಗ್ಲಿಷ್​ ಅವರಿಗೆ ಅರ್ಥವಾಗುವುದಿಲ್ಲವೆನ್ನುವುದು ಖಾತ್ರಿ ಇತ್ತು. ನಾನು ಅವರ ಬಳಿ ಹೋಗಿ ಮಾತನಾಡಿಸಿ ನನ್ನನ್ನು ಹಿಂಬಾಲಿಸಿ ಎಂದು ಹೇಳಿದೆ. ಅವರು ಹಾಗೇ ಮುಂದುವರಿದರು. ನನ್ನನ್ನು ಅವರು ವಿಮಾನ ಸಂಸ್ಥೆಯ ಸಿಬ್ಬಂದಿ ಎಂದು ಭಾವಿಸಿದರು.’

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ಸ್ವಲ್ಪ ಹೊತ್ತಿನ ನಂತರ ಈ ಮಹಿಳೆ, ತಮ್ಮಿಬ್ಬರ ಫೋಟೋ ತೆಗೆಯಲು ಕೇಳಿಕೊಂಡರು. ‘ದಯವಿಟ್ಟು ನೀವು ನಮ್ಮಿಬ್ಬರ ಫೋಟೋ ತೆಗೆಯಬಹುದೆ? ಮತ್ತು ಈ ಫೋಟೋ ಅನ್ನು ನಮ್ಮ ಮಗಳ ವಾಟ್ಸಪ್​ಗೆ ಕಳಿಸಬಹುದೆ? ಈ ಫೋಟೋ ನೋಡಿದರೆ, ನಾವು ಆರಾಮಾಗಿದ್ದೇವೆ ಎನ್ನುವುದು ಆಕೆಗೂ ತಿಳಿದಂತಾಗುತ್ತದೆ’. ಆ ಪ್ರಕಾರ ಅವರ ಮಗಳಿಗೆ ಫೋಟೋ ಕಳಿಸಿದೆ.’

‘ನಂತರ ಅವರಿಬ್ಬರಿಗೂ ಪನೀರ್ ಸ್ಯಾಂಡ್ವಿಚ್​ ಮತ್ತು ಜ್ಯೂಸ್​ ಕೊಡಬೇಕೆಂದು ಗಗನಸಖಿಗೆ ತಿಳಿಸಿದೆ. ಗಗನಸಖಿ ಅವರಿಗೆ ಫುಡ್​ ಪ್ಯಾಕ್​ ಕೊಡಲು ಹೋದಾಗ ಅವರು ಅದನ್ನು ನಿರಾಕರಿಸಿದರು. ಆಗ ಇದು ಅದೃಷ್ಟವಂತ ಗ್ರಾಹಕರಿಗೆ ಕೊಡುತ್ತಿರುವ ಉಚಿತವಾದ ತಿಂಡಿ ಎಂದು ಅವರಿಗೆ ತಿಳಿಸಲು ಹೇಳಿದೆ. ಆಗ ಅವರು ಅದನ್ನು ಸ್ವೀಕರಿಸಿದರು. ಅಷ್ಟೊಂದು ದೂರದಿಂದ ಪ್ರಯಾಣಿಸಿದ ಅವರ ಮುಖದಲ್ಲಿ ಹಸಿವು, ನೀರಡಿಕೆ ಎದ್ದು ಕಾಣುತ್ತಿತ್ತು. ನಂತರ ಗಗನಸಖಿಗೆ ನಾನು ಹಣ ಪಾವತಿಸಿದೆ.’

‘ಪ್ರಯಾಣ ಮುಗಿದ ನಂತರ ನಮ್ಮ ನಮ್ಮ ದಾರಿಯಲ್ಲಿ ನಾವು ಹೊರಟಾಗ ಅವರು ನನ್ನನ್ನು ನೋಡಿ ಸಮಾಧಾನದಿಂದ ಮುಗುಳುನಗೆ ಚೆಲ್ಲಿದರು. ಈ ಒಂದು ಪ್ರತಿಕ್ರಿಯೆ ನನ್ನನ್ನು ಆರ್ದ್ರಗೊಳಿಸಿತು.’

ಈ ಪೋಸ್ಟ್​ ಓದಿದ ನೆಟ್ಟಿಗರಲ್ಲಿ ಕೆಲವರು ಷಾ ಅವರನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು, ಅನುಕಂಪವನ್ನು ಗಳಿಸಿಕೊಳ್ಳಲು ಮಾಡಿದ ಸಹಾಯವನ್ನು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಳ್ಳಬಾರದು ಎಂದು ಹೇಳಿದ್ದಾರೆ.

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 4:08 pm, Thu, 3 November 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?