AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗಾರ್ಡನ್​ನಲ್ಲಿ ಮೊಬೈಲ್ ನೋಡುತ್ತಾ ವ್ಯಕ್ತಿ ಮಲಗಿದ್ದಾಗ ಕರಡಿ ಎಂಟ್ರಿ, ಒಮ್ಮೆ ಜೀವವೇ ಬಾಯಿಗೆ ಬಂದಂಗಾಗಿರ್ಬೇಕು

ನೀವು ಮನೆಯ ಹೊರಗೆ ಕುಳಿತಿರುವಾಗ ಒಮ್ಮೆಲೆ ಕರಡಿಯೋ, ಆನೆಯೋ ಬಂದರೆ ಹೇಗಾಗುತ್ತೆ ಹೇಳಿ. ಅಟ್ಯಾಕ್ ಮಾಡೋಕೆ ಸುಪಾರಿ ತೆಗೆದುಕೊಂಡು ಬಂದು ಹೋಯ್ ಅದು ನೀನೇನಾ ಎಂದು ಕೇಳಿದಂಗಿರುತ್ತೆ.

Viral Video: ಗಾರ್ಡನ್​ನಲ್ಲಿ ಮೊಬೈಲ್ ನೋಡುತ್ತಾ ವ್ಯಕ್ತಿ ಮಲಗಿದ್ದಾಗ ಕರಡಿ ಎಂಟ್ರಿ, ಒಮ್ಮೆ ಜೀವವೇ ಬಾಯಿಗೆ ಬಂದಂಗಾಗಿರ್ಬೇಕು
ಕರಡಿ
ನಯನಾ ರಾಜೀವ್
|

Updated on: Apr 21, 2023 | 3:15 PM

Share

ನೀವು ಮನೆಯ ಹೊರಗೆ ಕುಳಿತಿರುವಾಗ ಒಮ್ಮೆಲೆ ಕರಡಿಯೋ, ಆನೆಯೋ ಬಂದರೆ ಹೇಗಾಗುತ್ತೆ ಹೇಳಿ. ಅಟ್ಯಾಕ್ ಮಾಡೋಕೆ ಸುಪಾರಿ ತೆಗೆದುಕೊಂಡು ಬಂದು ಹೋಯ್ ಅದು ನೀನೇನಾ ಎಂದು ಕೇಳಿದಂಗಿರುತ್ತೆ. ಸಾಕು ಪ್ರಾಣಿಗಳೇ ಬೇರೆ ಕಾಡು ಪ್ರಾಣಿಗಳೇ ಬೇರೆ, ಪ್ರಾಣಿಗಳು ಎಂದರೆ ಎಷ್ಟೇ ಇಷ್ಟವಿದ್ದರೂ ಕಾಡು ಪ್ರಾಣಿಗಳೆಂದರೆ ತುಸು ಭಯ ಹೆಚ್ಚು. ಮನೆಯಲ್ಲಿ ಸಾಮಾನ್ಯವಾಗಿ, ನಾಯಿ, ಬೆಕ್ಕು, ಮೊಲ ಇನ್ನಿತರೆ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ ವ್ಯಕ್ತಿಯೊಬ್ಬ ಆರಾಮ ಕುರ್ಚಿಯಲ್ಲಿ ತಮ್ಮ ಗಾರ್ಡನ್​ ಅಲ್ಲಿ ಆರಾಮವಾಗಿ ಮಲಗಿರುವಾಗ ಕರಡಿಯೊಂದು ಎಂಟ್ರಿ ಕೊಟ್ಟೇ ಬಿಟ್ಟಿತ್ತು, ಕರಡಿ ಹಾಗೂ ವ್ಯಕ್ತಿ ಒಬ್ಬರನ್ನೊಬ್ಬರು ನೋಡಿದ್ದಾರೆ, ಇಬ್ಬರೂ ಹೆದರಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದೆ. @ChadBlue83 ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ತನ್ನ ಮನೆಯ ಗಾರ್ಡನ್​ನಲ್ಲಿ ಆರಾಮದಾಯಕವಾದ ಕುರ್ಚಿಯ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದಾಗ, ಇದ್ದಕ್ಕಿದ್ದಂತೆ ಕರಡಿ ಅವರ ಪಕ್ಕದಲ್ಲಿ ಬಂದು ನಿಂತಿತ್ತು,  ಒಂದು ಸಲ ವ್ಯಕ್ತಿಯನ್ನು ಗಾಬರಿಗೊಳಿಸಿತು, ಆದರೆ, ಸ್ವತಃ ಹೆದರಿದ ಕರಡಿ ವ್ಯಕ್ತಿಯನ್ನು ನೋಡಿ ಭಯದಿಂದ ಓಡಿ ಹೋಯಿತು. ವೈರಲ್ ಆಗಿರುವ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಮತ್ತಷ್ಟು ಓದಿ: Blind Snake: ಇದು ಎರೆಹುಳುವಲ್ಲ ಹಾವು, ಈ ಬ್ಲೈಂಡ್ ಸ್ನೇಕ್ ಎಷ್ಟು ಅಪಾಯಕಾರಿ?

ಗಾಬರಿಯಲ್ಲಿದ್ದ ವ್ಯಕ್ತಿಯನ್ನು ನೋಡಿ ಕರಡಿ ಓಡಿ ಹೋಗಿದ್ದು, ವೈರಲ್ ಆಗಿರುವ ವಿಡಿಯೋ ನೋಡಿದವರೆಲ್ಲ ಅಚ್ಚರಿಗೊಂಡಿದ್ದಾರೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಜನವಸತಿ ಪ್ರದೇಶದಲ್ಲಿನ ಯಾರೊಬ್ಬರ ಮನೆಗೆ ಕರಡಿ ಹೇಗೆ ಇದ್ದಕ್ಕಿದ್ದಂತೆ ಪ್ರವೇಶಿಸಿತು. ಮನೆಯ ಹೊರಗೆ ಸ್ವಲ್ಪ ಸಮಯ ಕಳೆಯುವುದೂ ಕಷ್ಟ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?