AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ನಿಮಿಷದಲ್ಲಿ ಥಾಲಿ ಊಟವನ್ನು ತಿಂದು 5 ಸಾವಿರ ಬಹುಮಾನ ಗೆದ್ದ ಯುವಕ; ನಂತರ ಮಾಡಿದ್ದೇನು ಗೊತ್ತಾ?

ಇಲ್ಲೊಬ್ಬ ಫುಡ್ ಬ್ಲಾಗರ್ ರಾಜಸ್ಥಾನ ಥಾಲಿ ಊಟವನ್ನು 10 ನಿಮಿಷದಲ್ಲಿ ತಿಂದು ಮುಗಿಸಿ 5,100 ರೂ ಬಹುಮಾನ ಗೆದ್ದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

10 ನಿಮಿಷದಲ್ಲಿ ಥಾಲಿ ಊಟವನ್ನು ತಿಂದು 5 ಸಾವಿರ ಬಹುಮಾನ ಗೆದ್ದ ಯುವಕ; ನಂತರ ಮಾಡಿದ್ದೇನು ಗೊತ್ತಾ?
ಥಾಲಿ ತಿಂದು ಬಹುಮಾನ ಗೆದ್ದ ವ್ಯಕ್ತಿ
TV9 Web
| Edited By: |

Updated on:Jan 30, 2022 | 5:16 PM

Share

ಇಷ್ಟು ದಿನ ಹೊಸ ಹೊಸ ರುಚಿಯ ತಿನಿಸನ್ನು ತಿಂದು ಫುಡ್​ ಬ್ಲಾಗರ್​ಗಳು ನೆಟ್ಟಿಗರಿಗೆ ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿತ್ತು. ಇಲ್ಲೊಬ್ಬ ಫುಡ್ ಬ್ಲಾಗರ್ (Food Blogger)​ ರಾಜಸ್ಥಾನ ಥಾಲಿ (Thali) ಊಟವನ್ನು 10 ನಿಮಿಷದಲ್ಲಿ ತಿಂದು ಮುಗಿಸಿ 5,100 ರೂ ಬಹುಮಾನ ಗೆದ್ದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ದೆಹಲಿ (Dehli)ಯ ಚಾಪ್​ ಪ್ಯಾಕ್ಟರಿ (Chaap Factory )ಎನ್ನುವ ಹೊಟೇಲನಲ್ಲಿ ವಿಡಿಯೋವನ್ನು ಶೂಟ್​ ಮಾಡಲಾಗಿದೆ. ಈ ವಿಡಿಯೊವನ್ನು ಲೈವ್​ ಲಿಮಿಟ್​ಲೆಸ್​ ಎನ್ನುವ ಪೇಸ್ಬುಕ್​ ಖಾತೆ ಹಂಚಿಕೊಂಡಿದೆ.

ವಿಡಿಯೋದಲ್ಲಿ ಸ್ಪರ್ಧೆಯನ್ನು ವಿವರಿಸಲಾಗಿದೆ. ಸಸ್ಯಾಹಾರಿ ಹೊಟೇಲ್​ನಲ್ಲಿ 499 ರೂಗಳ ಥಾಲಿಯನ್ನು ನೀಡಿ ಅದನ್ನು 10 ನಿಮಿಷದಲ್ಲಿ ತಿಂದು ಮುಗಿಸಿದವರೆಗೆ ಬಹುಮಾನವನ್ನು ನೀಡುವುದಾಗಿ ಘೋಷಿಸಲಾಗಿತ್ತು. ಥಾಲಿಯಲ್ಲಿ ಬೆಣ್ಣೆ ಸವರಿದ ಬಾಹುಬಲಿ ನಾನ್​ ಅನ್ನು ನೀಡಲಾಗಿತ್ತು. ಇದರಲ್ಲಿ ರುಮಾಲ್​ ರೋಟಿ, ವೆಜಿಟೇರಿಯನ್​ ಚಾಪ್​, ದಾಲ್​ ಮತ್ತು ಪನ್ನೀರ್​ಅನ್ನು ನೀಡಲಾಗಿತ್ತು. ವ್ಯಕ್ತಿಯೊಬ್ಬ ಈ ಚಾಲೆಂಜ್​ ಅನ್ನು ಸ್ವೀಕರಿಸಿ 10 ನಿಮಿಷದಲ್ಲಿ ಥಾಲಿಯನ್ನು ಸಂಪೂರ್ಣವಾಗಿ ತಿಂದು ಮುಗಿಸಿ 5,100ರೂ ಬಹುಮಾನ ಗೆದ್ದಿದ್ದನು. ಬಳಿಕ ಆತ ಮಾಡಿದ ಕೆಲಸ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಹೌದು, ಥಾಲಿಯನ್ನು ತಿಂದ ಬಳಿಕ ಆತ ಬಹುಮಾನವಾಗಿ ಗೆದ್ದ ಹಣವನ್ನು ಅದೇ ಅಂಗಡಿಯ ಮಾಲೀಕನಿಗೆ ವಾಪಸ್​ ನೀಡಿದ್ದಾನೆ. ತಿನಿಸು ರುಚಿಕರವಾಗಿತ್ತು ಎಂದು ಆತ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಜ.11ರಂದು ವಿಡಿಯೋ ಹಂಚಕೊಳ್ಳಲಾಗಿದ್ದು ಈವರೆಗೆ 3.2 ಮಿಲಿಯನ್​ ವೀಕ್ಷಣೆ ಪಡೆದಿದದೆ. ವ್ಯಕ್ತಿಯು ಹಣವನ್ನು ಹಿಂದಿರುಗಿಸಿದ್ದನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಪರ್ಧೆಯನ್ನು ಗೆದ್ದಿದ್ದಕ್ಕೆ ಅಭಿನಂದಿಸಿದ್ದಾರೆ.

ಇದನ್ನೂ ಓದಿ:

ಗುಜರಿಯಿಂದ ₹ 500 ಕೊಟ್ಟು ಖರೀದಿಸಿದ್ದ ಕುರ್ಚಿ ಹರಾಜಾಗಿದ್ದು ಬರೋಬ್ಬರಿ ₹ 16 ಲಕ್ಷಕ್ಕೆ! ಅಂಥದ್ದೇನಿತ್ತು ಅದರಲ್ಲಿ?

Published On - 5:13 pm, Sun, 30 January 22

Follow Us
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್