AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಗೆ ಹೆಸರಿಟ್ಟು, ತೊಟ್ಟಿಲು ತೂಗಿದ ಮನೆಗೆ 15 ವರ್ಷಗಳ ನಂತರ ಭೇಟಿ, ಹೇಗಿತ್ತು ನೋಡಿ ಈ ವ್ಯಕ್ತಿಯ ಅನುಭವ

ತನ್ನ ಹುಟ್ಟೂರು, ಆಡಿ ಬೆಳೆದ ಸ್ಥಳವನ್ನು ಕಂಡಾಗ ಪ್ರತಿಯೊಬ್ಬರು ಕೂಡ ಭಾವುಕರಾಗುವುದು ಸಹಜ. ತನ್ನ ಬಾಲ್ಯದಲ್ಲಿ ಕಳೆದ ಆ ದಿನಗಳು ಹಾಗೂ ಸ್ಥಳಗಳು ನೋಡಿದಾಗ ಎಂತಹವರ ಕಣ್ಣಂಚಲಿ ನೀರು ತರಿಸುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿಗನೊಬ್ಬನು ಹದಿನೈದು ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದು, ಈ ವೇಳೆ ತಾನು ಆಡಿ ಬೆಳೆದ ಮನೆ ಹಾಗೂ ಬಾಲ್ಯದ ಆ ಸುಂದರ ನೆನಪುಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ತನಗೆ ಹೆಸರಿಟ್ಟು, ತೊಟ್ಟಿಲು ತೂಗಿದ ಮನೆಗೆ 15 ವರ್ಷಗಳ ನಂತರ ಭೇಟಿ, ಹೇಗಿತ್ತು ನೋಡಿ ಈ ವ್ಯಕ್ತಿಯ ಅನುಭವ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: May 01, 2025 | 5:49 PM

Share

ಎಲ್ಲರಿಗೂ ಕೂಡ ತಮ್ಮ ಬಾಲ್ಯ (childhood) ಹಾಗೂ ಬಾಲ್ಯದ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತಾರೆ. ತಾವು ಆಟವಾಡಿ ಬೆಳೆದ ಮನೆಯ ವಾತಾವರಣವನ್ನು ಕಂಡಾಗ ಮತ್ತೆ ಆ ಸ್ನೇಹಿತರು ಹಾಗೂ ಬಾಲ್ಯವು ಮರಳಿ ಬರಬಾರದೆ ಎಂದೇನಿಸುತ್ತದೆ. ಕೆಲವರು ಅನಿವಾರ್ಯ ಕಾರಣಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಬೇಕಾಗುತ್ತದೆ. ಈ ವೇಳೆಯಲ್ಲಿ ಹೊಸ ಊರಿನಲ್ಲಿ ಒಳ್ಳೆಯ ಸ್ನೇಹಿತರು ಸಿಕ್ಕರೂ ಕೂಡ ತನ್ನ ಹಳೆಯ ಸ್ನೇಹಿತರು, ಅಲ್ಲಿನ ವಾತಾವರಣ ಮಾತ್ರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ. ಇದೀಗ ಇಂಗ್ಲೆಂಡಿ (england) ನ ವ್ಯಕ್ತಿಯೊಬ್ಬನು ತನ್ನ ಸುಂದರ ಬಾಲ್ಯವನ್ನು ಕಳೆದ ಭಾರತ (india) ದಲ್ಲಿರುವ ಮನೆಗೆ ಹದಿನೈದು ವರ್ಷಗಳ ಬಳಿಕ ಭೇಟಿ ನೀಡಿದ್ದು, ಈ ವೇಳೆಯಲ್ಲಿ ಭಾವುಕನಾಗಿದ್ದಾನೆ.

ralphleng ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ರಾಲ್ಫ್ ಲೆಂಗ್ ವಿದೇಶಿಗನು ಸುದೀರ್ಘ ವರ್ಷಗಳ ಬಳಿಕ ಭಾರತಕ್ಕೆ ಮರಳುವ ಕ್ಷಣವನ್ನು ವಿಡಿಯೋ ಮಾಡಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ತನ್ನ ಬಾಲ್ಯದಲ್ಲಿ ಕಳೆದ ಆ ಸುಂದರ ಮನೆಗೆ ಭೇಟಿ ನೀಡಿದ್ದು, ಮನೆಯ ಗೇಟ್ ವ್ಯಕ್ತಿಯೊಬ್ಬರು ಓಪನ್ ಮಾಡುವುದನ್ನು ನೀವಿಲ್ಲಿ ನೋಡಬಹುದು. ಅಲ್ಲಿರುವ ವಾತಾವರಣ ನೋಡುತ್ತಿದ್ದಂತೆ ತನ್ನ ಬಾಲ್ಯದ ಸುಂದರ ಚಿತ್ರಣವು ಆತನ ಕಣ್ಣ ಮುಂದೆ ಬಂದಂತಿದೆ. ಆ ನೆನಪುಗಳನ್ನು ಮೆಲುಕು ಹಾಕುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ನೋಡಬಹುದು. ಈ ವಿಡಿಯೋದಲ್ಲಿ ಬಾಲ್ಯದ ಆ ದಿನಗಳು ಹೇಗಿತ್ತು ಎನ್ನುವುದನ್ನು ಹೇಳಿದ್ದಾರೆ. ಅದಲ್ಲದೇ, ಇಲ್ಲಿಂದ ಹೋಗುವಾಗ ತನ್ನ ಸ್ನೇಹಿತರು, ಈ ಮನೆಯನ್ನು ಬಿಟ್ಟು ಹೋಗಬೇಕಾಯಿತು ಎಂದಿರುವುದನ್ನು ನೀವಿಲ್ಲಿ ಗಮನಿಸಬಹುದು.

ಇದನ್ನೂ ಓದಿ
Image
ದುಡಿಯುವ ಕೈಗೆ ಆಸರೆಯಾದ, ಹಸಿದ ಗೋವಿಗೆ ಅನ್ನದಾತನಾದ, ನಿಜವಾದ ಪರಮಾತ್ಮ
Image
ಗಂಡ ಗಡ್ಡ ಶೇವ್​ ಮಾಡಿಲ್ಲ ಎಂದು ಮೈದುನನ ಜತೆ ಓಡಿ ಹೋದ ಮಹಿಳೆ
Image
ಕರಡಿ ಘರ್ಜನೆಗೆ ಬೆದರಿದ ಹುಲಿರಾಯ
Image
ಮದುವೆ ಆಮಂತ್ರಣ ಪತ್ರಿಕೆಯಲ್ಲಿ ತನ್ನ ಅರ್ಹತೆ ತಿಳಿಸಿದ ವರ

ಇದನ್ನೂ ಓದಿ : ಇಬ್ಬರಿಗೂ ಹಸಿವು, ದೇವರಂತೆ ಬಂದು ಅಜ್ಜಿ, ಗೋವಿನ ಹಸಿವು ನೀಗಿಸಿದ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಇಪ್ಪತ್ತೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡುವ ಮೂಲಕ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ಬಳಕೆದಾರರೊಬ್ಬರು, ಎಲ್ಲವು ಬದಲಾಗುತ್ತಿರುತ್ತದೆ, ಎಲ್ಲವೂ ಒಂದೇ ರೀತಿ ಇರುವುದಿಲ್ಲ ಎಂದಿದ್ದಾರೆ. ಇನ್ನೊರ್ವರು, ಈ ವ್ಯಕ್ತಿಯೂ ಅಳುವಾಗ ಮುಖವೆಲ್ಲವು ಟೊಮೊಟೊದಂತೆ ಕೆಂಪಾಗೆ ಆಗುತ್ತದೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ದಯವಿಟ್ಟು ಅಳಬೇಡಿ, ನನಗೆ ನೀವು ಅಳುವುದನ್ನು ನೋಡಲು ಆಗುವುದಿಲ್ಲ. ಸದಾ ನಗುತ್ತೀರಿ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು