ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ

ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ
ಹೀನಾ - ಹರ್ಷ್ ಮಾಂಡವೀಯ
Edited By:

Updated on: May 08, 2021 | 4:13 PM

ಕೊರೊನಾ ವೈರಸ್​ ಕಾರಣದಿಂದಾಗಿ ದೇಶಾದ್ಯಂತ ಜನರು ಕಷ್ಟದಲ್ಲಿದ್ದಾರೆ. ಉದ್ಯೋಗ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಜನರ ಸಂಖ್ಯೆ ದೊಡ್ಡದಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಕೊವಿಡ್​ 2ನೇ ಅಲೆ ಆರಂಭ ಆದಾಗಿನಿಂದ ಅಮ್ಮ-ಮಗ ಸೇರಿಕೊಂಡು ಮುಂಬೈನಲ್ಲಿ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.   

ಈ ರೀತಿ ಸಮಾಜಸೇವೆ ಮಾಡುತ್ತಿರುವುದು ಹರ್ಷ್ ಮಾಂಡವೀಯ ಮತ್ತು ಅವರು ತಾಯಿ ಹೀನಾ ಮಾಂಡವೀಯ. ಅವರಿಬ್ಬರು ಈಗ ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವುದಕ್ಕೆ ಅವರ ಜೀವನದಲ್ಲಿ ಈ ಹಿಂದೆ ನಡೆದ ಒಂದು ಘಟನೆಯೇ ಕಾರಣ. ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

‘ಆಂಟಿಯೊಬ್ಬರು ನಮ್ಮಿಂದ ಮೊದಲು ಊಟ ತೆಗೆದುಕೊಂಡರು. ಆಗ ಅವರು 35 ರೂ. ನೀಡಿದ್ದರು. ಅದು ನಮ್ಮ ಮೊದಲ ಆದಾಯ. ಬಾಯಿ ಮಾತಿನಿಂದಾಗಿ ನಮ್ಮ ಬಗ್ಗೆ ಎಲ್ಲರಿಗೂ ಗೊತ್ತಾಯಿತು. ಬ್ಯುಸಿನೆಸ್​ ಬೆಳೆಯುತ್ತ ಸಾಗಿತು. ಅಮ್ಮ ಅಡುಗೆ ಮಾಡುತ್ತಿದ್ದರು. ನಾನು ಮನೆಮನೆಗೆ ಹೋಗಿ ಕೊಟ್ಟುಬರುತ್ತಿದೆ. 2003ರಲ್ಲಿ ನಮ್ಮ ಬ್ಯುಸಿನೆಸ್​ ವಿಸ್ತರಿಸಲು ಒಬ್ಬರು ಸಹಾಯ ಮಾಡಿದರು. 70 ಸಾವಿರ ಮುಂಗಡ ಹಣ ಮತ್ತು ಬಾಡಿಗೆ ಜಾಗವನ್ನು ನೀಡಿದರು’ ಎನ್ನುತ್ತಾರೆ ಹರ್ಷ್​.

ಶಿಕ್ಷಣ ಮುಗಿಸಿದ ಬಳಿಕ ಹರ್ಷ್​ ಪೂರ್ಣ ಪ್ರಮಾಣದಲ್ಲಿ ಅಮ್ಮನ ಜೊತೆ ಸೇರಿಕೊಂಡು ಬ್ಯುಸಿನೆಸ್​ ಕಡೆಗೆ ಗಮನ ನೀಡಿದರು. ಆನ್​ಲೈನ್​ ಮೂಲಕ ವ್ಯಾಪಾರ ವೃದ್ಧಿಸಿದರು. ಅಂದು ತಮಗೆ ಸಹಾಯ ಮಾಡಿದವರಿಗೆ ಹಣ ಹಿಂದಿರುಗಿಸಲು ಹೋದಾಗ, ‘ನಮಗೆ ಹಣ ಬೇಡ. ನೀವೂ 10 ಜನಕ್ಕೆ ಸಹಾಯ ಮಾಡಿ’ ಎಂದು ಅವರು ಹೇಳಿದರಂತೆ. ಆ ಮಾತಿನ ಪ್ರಕಾರವಾಗಿ, 2020ರಲ್ಲಿ ಲಾಕ್​ಡೌನ್​ ಆದಾಗ ಉಚಿತವಾಗಿ ಊಟ ನೀಡುವ ಕಾಯಕವನ್ನು ಹರ್ಷ್​ ಮತ್ತು ಹೀನಾ ಆರಂಭಿಸಿದರು.

ಈ ಕೆಲಸದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಅವರಿಗೆ ಅನೇಕರು ಬೆಂಬಲ ನೀಡಲು ಪ್ರಾರಂಭಿಸಿದರು. ‘ಕೊವಿಡ್​ ಎರಡನೇ ಅಲೆ ಆರಂಭ ಆದಾಗ ನಮಗೆ 1.5 ಲಕ್ಷ ರೂ. ದೇಣಿಗೆ ಸಿಕ್ಕಿತು. ಅದರಿಂದ ಈವರೆಗೆ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಲು ಸಾಧ್ಯವಾಗಿದೆ’ ಎಂದಿದ್ದಾರೆ ಹರ್ಷ್​ ಮಾಂಡವೀಯ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us