Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್

Giraffe : ಇನ್ನೇನು ಹೈನಾ ಬಾಯಿಗೆ ಜಿರಾಫೆ ಮರಿ ಈಡಾಗುವುದೋ ಎಂದು ಭಯವಾಗಿತ್ತು. ಸದ್ಯ ತಾಯಿ ಅದನ್ನು ಬದುಕಿಸಿತು. ಈ ಅಮ್ಮ ಮಗು ಸುಖವಾಗಿ ಬಾಳಲಿ ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್
ಹೈನಾದಾಳಿಯಿಂದ ತನ್ನ ಮರಿಯನ್ನು ರಕ್ಷಿಸುತ್ತಿರುವ ಜಿರಾಫೆ
Follow us
|

Updated on: Jun 23, 2023 | 10:20 AM

Animals: ತಾಯಿಯಾದವಳು (Mother) ತನ್ನ ಮಗುವಿನ ರಕ್ಷಣೆಗಾಗಿ, ಏಳ್ಗೆಗಾಗಿ ತನ್ನ ಪ್ರಾಣದ ಹಂಗು ತೊರೆದು ಹೋರಾಡಬಲ್ಲಳು ಎನ್ನುವುದನ್ನು ನೀವೆಲ್ಲ ಕೇಳುತ್ತಲೇ ಬಂದಿದ್ದೀರಿ. ಅನೇಕ ನಿದರ್ಶನಗಳು ನಿಮ್ಮ ಎದುರಿಗೇ ಇವೆ ಅಲ್ಲದೆ ಅಂಥ ತಾಯಂದಿರ ಮಕ್ಕಳು ನೀವಾಗಿರಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಜಿರಾಫೆ (Giraffe) ತನ್ನ ಮರಿಯೊಂದಿಗೆ ವಿಹರಿಸುತ್ತಿದೆ. ಅಲ್ಲಿಗೆ ಬಂದ ಹೈನಾ (Hyena) ಮರಿಯ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದೆ. ತಾಯಿಜಿರಾಫೆ ಆ ಹೈನಾದಿಂದ ತನ್ನ ಮರಿಯನ್ನು ಕಾಪಾಡಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು, ತಾಯಿಗೆ ತನ್ನ ಮಗುವನ್ನು ಒಳಗೂ ಹೊರಗೂ ಹೇಗೆ ರಕ್ಷಿಸಬೇಕು ಎನ್ನುವುದು ನಿಸರ್ಗದತ್ತವಾಗಿ ಬಂದಿದೆ ಎನ್ನುತ್ತಿದ್ದಾರೆ. ಜಿರಾಫೆಗಳು ಬೆದರಿದಾಗ ಇವು ಹೈನಾದ ಪಾಲಾಗುತ್ತವೆ ಎಂದು ಮೊದಲಿಗೆ ಅಂದುಕೊಂಡೆ. ಆದರೆ ತಾಯಿಜಿರಾಫೆ ಅದನ್ನು ಓಡಿಸಿತು ಎಂದಿದ್ದಾರೆ ಒಬ್ಬರು. ತಾಯಿ ಎಂದಿಗೂ ಮೈಯೆಲ್ಲ ಕಣ್ಣಾಗಿ ಇರುತ್ತಾಳೆ ಎನ್ನುವುದು ಇದಕ್ಕೇ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ಮೊಬೈಲ್​ಭೂತ; ನಿದ್ದೆಯಲ್ಲೂ ಅಳುತ್ತ ​ಸ್ಕ್ರೀನ್ ಮೇಲೆ ಬೆರಳಾಡಿಸುತ್ತಿರುವ ಚೀನಾದ ಮಗು

ಈತನಕ ಈ ವಿಡಿಯೋ ಅನ್ನು 4,30,000ಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಸಾವಿರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅಮ್ಮನ ಕಾಲುಗಳ ನಡುವೆ ಎಷ್ಟು ಚೆಂದ ನಿಂತಿದೆಯಲ್ಲ ಆ ಮರಿಜಿರಾಫೆ. ನಾನದನ್ನು ಬಹಳ ಪ್ರೀತಿಸುತ್ತಿದ್ದೇಬೆ ಎಂದಿದ್ದಾರೆ ಒಬ್ಬರು. ದುಷ್ಟ ಹೈನಾ ಇದು ಸರಿಯಲ್ಲ ಎಂದು ಎಚ್ಚರಿಸಿದ್ಧಾರೆ ಇನ್ನೊಬ್ಬರು. ಆ ಮಗು ನಾನೇ, ಆ ಜಿರಾಫೆ ನನ್ನಮ್ಮ ಎಂದು ಮತ್ತೊಬ್ಬರು ಹೇಳಿದ್ದಾರೆ. ಜಿರಾಫೆಯಮ್ಮನ ಸಾಹಸ ಪ್ರಶಂಸನಾರ್ಹ ಎಂದು ಮಗದೊಬ್ಬರು ಹೇಳಿದ್ದಾರೆ.

ತಾಯಿ ಆಗುವುದೆಂದರೆ ಎಂದರೆ ಸುಮ್ಮನೇ ಅಲ್ಲವಲ್ಲ? ವೀಕೆಂಡ್​ ಮೂಡ್​ನಲ್ಲಿರುವ ನಿಮಗೀಗ ನಿಮ್ಮ ನಿಮ್ಮ ತಾಯಂದಿರು ನೆನಪಾಗುತ್ತಿದ್ದಾರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ