AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್

Giraffe : ಇನ್ನೇನು ಹೈನಾ ಬಾಯಿಗೆ ಜಿರಾಫೆ ಮರಿ ಈಡಾಗುವುದೋ ಎಂದು ಭಯವಾಗಿತ್ತು. ಸದ್ಯ ತಾಯಿ ಅದನ್ನು ಬದುಕಿಸಿತು. ಈ ಅಮ್ಮ ಮಗು ಸುಖವಾಗಿ ಬಾಳಲಿ ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ತನ್ನ ಮರಿಯನ್ನು ಹೈನಾದಿಂದ ರಕ್ಷಿಸಿದ ಜಿರಾಫೆಯ ವಿಡಿಯೋ ವೈರಲ್
ಹೈನಾದಾಳಿಯಿಂದ ತನ್ನ ಮರಿಯನ್ನು ರಕ್ಷಿಸುತ್ತಿರುವ ಜಿರಾಫೆ
ಶ್ರೀದೇವಿ ಕಳಸದ
|

Updated on: Jun 23, 2023 | 10:20 AM

Share

Animals: ತಾಯಿಯಾದವಳು (Mother) ತನ್ನ ಮಗುವಿನ ರಕ್ಷಣೆಗಾಗಿ, ಏಳ್ಗೆಗಾಗಿ ತನ್ನ ಪ್ರಾಣದ ಹಂಗು ತೊರೆದು ಹೋರಾಡಬಲ್ಲಳು ಎನ್ನುವುದನ್ನು ನೀವೆಲ್ಲ ಕೇಳುತ್ತಲೇ ಬಂದಿದ್ದೀರಿ. ಅನೇಕ ನಿದರ್ಶನಗಳು ನಿಮ್ಮ ಎದುರಿಗೇ ಇವೆ ಅಲ್ಲದೆ ಅಂಥ ತಾಯಂದಿರ ಮಕ್ಕಳು ನೀವಾಗಿರಬಹುದು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಜಿರಾಫೆ (Giraffe) ತನ್ನ ಮರಿಯೊಂದಿಗೆ ವಿಹರಿಸುತ್ತಿದೆ. ಅಲ್ಲಿಗೆ ಬಂದ ಹೈನಾ (Hyena) ಮರಿಯ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದೆ. ತಾಯಿಜಿರಾಫೆ ಆ ಹೈನಾದಿಂದ ತನ್ನ ಮರಿಯನ್ನು ಕಾಪಾಡಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು, ತಾಯಿಗೆ ತನ್ನ ಮಗುವನ್ನು ಒಳಗೂ ಹೊರಗೂ ಹೇಗೆ ರಕ್ಷಿಸಬೇಕು ಎನ್ನುವುದು ನಿಸರ್ಗದತ್ತವಾಗಿ ಬಂದಿದೆ ಎನ್ನುತ್ತಿದ್ದಾರೆ. ಜಿರಾಫೆಗಳು ಬೆದರಿದಾಗ ಇವು ಹೈನಾದ ಪಾಲಾಗುತ್ತವೆ ಎಂದು ಮೊದಲಿಗೆ ಅಂದುಕೊಂಡೆ. ಆದರೆ ತಾಯಿಜಿರಾಫೆ ಅದನ್ನು ಓಡಿಸಿತು ಎಂದಿದ್ದಾರೆ ಒಬ್ಬರು. ತಾಯಿ ಎಂದಿಗೂ ಮೈಯೆಲ್ಲ ಕಣ್ಣಾಗಿ ಇರುತ್ತಾಳೆ ಎನ್ನುವುದು ಇದಕ್ಕೇ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ಮೊಬೈಲ್​ಭೂತ; ನಿದ್ದೆಯಲ್ಲೂ ಅಳುತ್ತ ​ಸ್ಕ್ರೀನ್ ಮೇಲೆ ಬೆರಳಾಡಿಸುತ್ತಿರುವ ಚೀನಾದ ಮಗು

ಈತನಕ ಈ ವಿಡಿಯೋ ಅನ್ನು 4,30,000ಕ್ಕೂ ಹೆಚ್ಚು ಜನರು ನೋಡಿದ್ಧಾರೆ. ಸಾವಿರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅಮ್ಮನ ಕಾಲುಗಳ ನಡುವೆ ಎಷ್ಟು ಚೆಂದ ನಿಂತಿದೆಯಲ್ಲ ಆ ಮರಿಜಿರಾಫೆ. ನಾನದನ್ನು ಬಹಳ ಪ್ರೀತಿಸುತ್ತಿದ್ದೇಬೆ ಎಂದಿದ್ದಾರೆ ಒಬ್ಬರು. ದುಷ್ಟ ಹೈನಾ ಇದು ಸರಿಯಲ್ಲ ಎಂದು ಎಚ್ಚರಿಸಿದ್ಧಾರೆ ಇನ್ನೊಬ್ಬರು. ಆ ಮಗು ನಾನೇ, ಆ ಜಿರಾಫೆ ನನ್ನಮ್ಮ ಎಂದು ಮತ್ತೊಬ್ಬರು ಹೇಳಿದ್ದಾರೆ. ಜಿರಾಫೆಯಮ್ಮನ ಸಾಹಸ ಪ್ರಶಂಸನಾರ್ಹ ಎಂದು ಮಗದೊಬ್ಬರು ಹೇಳಿದ್ದಾರೆ.

ತಾಯಿ ಆಗುವುದೆಂದರೆ ಎಂದರೆ ಸುಮ್ಮನೇ ಅಲ್ಲವಲ್ಲ? ವೀಕೆಂಡ್​ ಮೂಡ್​ನಲ್ಲಿರುವ ನಿಮಗೀಗ ನಿಮ್ಮ ನಿಮ್ಮ ತಾಯಂದಿರು ನೆನಪಾಗುತ್ತಿದ್ದಾರಾ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ