AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 10 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳ ಕಲರವದಿಂದ ತುಂಬಿದ ಒಡಿಶಾದ ಚಿಲಿಕಾ ಸರೋವರ

ಕಳೆದ ಬಾರಿ 190 ಜಾತಿಯ 11 ಲಕ್ಷ ಪಕ್ಷಿಗಳು ಚಿಲಿಕಾ ಸರೋವರಕ್ಕೆ ವಲಸೆ ಬಂದಿದ್ದವು. ಈ ಬಾರಿ 183 ಜಾತಿಯ 10.4 ಲಕ್ಷ  ಪಕ್ಷಿಗಳು ವಲಸೆ ಬಂದಿವೆ. ಈ ಬಾರಿ ವಿಶೇಷವಾಗಿ  ಮಾಂಗೋಲಿಯನ್​ ಗುಲ್​ ಎನ್ನುವ ಅಪರೂಪದ ಪಕ್ಷಿಯನ್ನು ಗುರುತಿಸಲಾಗಿದೆ ಎಂದಿದ್ದಾರೆ.

Viral Video: 10 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳ ಕಲರವದಿಂದ ತುಂಬಿದ ಒಡಿಶಾದ ಚಿಲಿಕಾ ಸರೋವರ
TV9 Web
| Edited By: |

Updated on: Jan 06, 2022 | 4:34 PM

Share

ಭುವನೇಶ್ವರ: ಚಳಿಗಾಲದಲ್ಲಿ ಎಲ್ಲೆಡೆ ವಲಸೆ ಹಕ್ಕಿಗಳದೇ ಕಲವರ. ಲಕ್ಷಾಂತರ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ವಲಸೆ ಹಕ್ಕಿಗಳು ಹಿಂಡು ಹಿಂಡಾಗಿ ತೆರಳುವುದನ್ನು ನೋಡುವುದೇ ಒಂದು ಸುಂದರ ಅನುಭವ.  ಅಂತಹ ಸುಂದರ ದೃಶ್ಯಕ್ಕೆ ಇದೀಗ ಒಡಿಶಾದ ಚಿಲಿಕಾ ಸರೋವರ ಸಾಕ್ಷಿಯಾಗಿದೆ. ಏಷ್ಯಾದ ಅತೀ ದೊಡ್ಡ ಉಪ್ಪುನೀರಿನ ಸರೋವರ ಎಂದು ಖ್ಯಾತಿ ಪಡೆದ ಒಡಿಶಾದ ಚಿಲಿಕಾ ಸರೋವರದಲ್ಲೀಗ 10 ಲಕ್ಷಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬಂದಿವೆ.  ಈ ಕುರಿತು ಒಡಿಶಾದ ಸಿಡಿಎ ಮುಖ್ಯ ನಿರ್ವಾಹಕ ಸುಸಾಂತ್​ ನಂದಾ ಎನ್ನುವವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಬಾರಿ 190 ಜಾತಿಯ 11 ಲಕ್ಷ ಪಕ್ಷಿಗಳು ಚಿಲಿಕಾ ಸರೋವರಕ್ಕೆ ವಲಸೆ ಬಂದಿದ್ದವು. ಈ ಬಾರಿ 183 ಜಾತಿಯ 10.4 ಲಕ್ಷ  ಪಕ್ಷಿಗಳು ವಲಸೆ ಬಂದಿವೆ. ಈ ಬಾರಿ ವಿಶೇಷವಾಗಿ  ಮಾಂಗೋಲಿಯನ್​ ಗುಲ್​ ಎನ್ನುವ ಅಪರೂಪದ ಪಕ್ಷಿಯನ್ನು ಗುರುತಿಸಲಾಗಿದೆ ಎಂದಿದ್ದಾರೆ. ಚಿಲಿಕಾ ಸರೋವರವು ಪೂರಿ,  ಗಂಜಮ್​ ಮತ್ತು ಖೋರಡಾ ಜಿಲ್ಲೆಗಳಲ್ಲಿ ಸುಮಾರು 1,100 ಚದರ ಕಿಮೀ ವರೆಗೆ ವಿಸ್ತಾರವಾಗಿದೆ. ಹೀಗಾಗಿ ಲಕ್ಷಾಂತರ ಪಕ್ಷಿಗಳು ಬಂದು ಹಾರಾಟ ನಡೆಸುತ್ತವೆ.

ಈ ಬಾರಿ ಪಿಂಟೈಲ್​, ಗಡ್ವಾಲ್​,  ಯುರೇಷಿಯನ್​ ವೆಗಾನ್​  ಸೇರಿದಂತೆ ಹಲವು ಪಕ್ಷಿಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿಲಿಕಾ ಸರೋವರದಲ್ಲಿ ಪಕ್ಷಿಗಳ ಹಾರಾಟದ ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಚಿಲಿಕಾ ಸರೋವರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ, ನೂರಾರು ಹಕ್ಕಿಗಳು ಒಂದೇ ಸಲಕ್ಕೆ ಹಾರುವ ವೀಡಿಯೋಗಳು, ಪಕ್ಷಿಗಳು ಏಕಾಂತದಲ್ಲಿ ಕುಳಿತ ಫೋಟೋಗಳು ನೋಡುಗರ ಮನ ಸೆಳೆದಿದೆ.

ಇದನ್ನೂ ಓದಿ:

ನಾಯಿಯ ಮುಖದಂತೆ ಕಾಣುವ ಪ್ರಾಣಿಯ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು: ವಿಡಿಯೋದಲ್ಲೇನಿದೆ?

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್