AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 10 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳ ಕಲರವದಿಂದ ತುಂಬಿದ ಒಡಿಶಾದ ಚಿಲಿಕಾ ಸರೋವರ

ಕಳೆದ ಬಾರಿ 190 ಜಾತಿಯ 11 ಲಕ್ಷ ಪಕ್ಷಿಗಳು ಚಿಲಿಕಾ ಸರೋವರಕ್ಕೆ ವಲಸೆ ಬಂದಿದ್ದವು. ಈ ಬಾರಿ 183 ಜಾತಿಯ 10.4 ಲಕ್ಷ  ಪಕ್ಷಿಗಳು ವಲಸೆ ಬಂದಿವೆ. ಈ ಬಾರಿ ವಿಶೇಷವಾಗಿ  ಮಾಂಗೋಲಿಯನ್​ ಗುಲ್​ ಎನ್ನುವ ಅಪರೂಪದ ಪಕ್ಷಿಯನ್ನು ಗುರುತಿಸಲಾಗಿದೆ ಎಂದಿದ್ದಾರೆ.

Viral Video: 10 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳ ಕಲರವದಿಂದ ತುಂಬಿದ ಒಡಿಶಾದ ಚಿಲಿಕಾ ಸರೋವರ
TV9 Web
| Edited By: |

Updated on: Jan 06, 2022 | 4:34 PM

Share

ಭುವನೇಶ್ವರ: ಚಳಿಗಾಲದಲ್ಲಿ ಎಲ್ಲೆಡೆ ವಲಸೆ ಹಕ್ಕಿಗಳದೇ ಕಲವರ. ಲಕ್ಷಾಂತರ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ವಲಸೆ ಹಕ್ಕಿಗಳು ಹಿಂಡು ಹಿಂಡಾಗಿ ತೆರಳುವುದನ್ನು ನೋಡುವುದೇ ಒಂದು ಸುಂದರ ಅನುಭವ.  ಅಂತಹ ಸುಂದರ ದೃಶ್ಯಕ್ಕೆ ಇದೀಗ ಒಡಿಶಾದ ಚಿಲಿಕಾ ಸರೋವರ ಸಾಕ್ಷಿಯಾಗಿದೆ. ಏಷ್ಯಾದ ಅತೀ ದೊಡ್ಡ ಉಪ್ಪುನೀರಿನ ಸರೋವರ ಎಂದು ಖ್ಯಾತಿ ಪಡೆದ ಒಡಿಶಾದ ಚಿಲಿಕಾ ಸರೋವರದಲ್ಲೀಗ 10 ಲಕ್ಷಕ್ಕೂ ಹೆಚ್ಚು ಪಕ್ಷಿಗಳು ವಲಸೆ ಬಂದಿವೆ.  ಈ ಕುರಿತು ಒಡಿಶಾದ ಸಿಡಿಎ ಮುಖ್ಯ ನಿರ್ವಾಹಕ ಸುಸಾಂತ್​ ನಂದಾ ಎನ್ನುವವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಬಾರಿ 190 ಜಾತಿಯ 11 ಲಕ್ಷ ಪಕ್ಷಿಗಳು ಚಿಲಿಕಾ ಸರೋವರಕ್ಕೆ ವಲಸೆ ಬಂದಿದ್ದವು. ಈ ಬಾರಿ 183 ಜಾತಿಯ 10.4 ಲಕ್ಷ  ಪಕ್ಷಿಗಳು ವಲಸೆ ಬಂದಿವೆ. ಈ ಬಾರಿ ವಿಶೇಷವಾಗಿ  ಮಾಂಗೋಲಿಯನ್​ ಗುಲ್​ ಎನ್ನುವ ಅಪರೂಪದ ಪಕ್ಷಿಯನ್ನು ಗುರುತಿಸಲಾಗಿದೆ ಎಂದಿದ್ದಾರೆ. ಚಿಲಿಕಾ ಸರೋವರವು ಪೂರಿ,  ಗಂಜಮ್​ ಮತ್ತು ಖೋರಡಾ ಜಿಲ್ಲೆಗಳಲ್ಲಿ ಸುಮಾರು 1,100 ಚದರ ಕಿಮೀ ವರೆಗೆ ವಿಸ್ತಾರವಾಗಿದೆ. ಹೀಗಾಗಿ ಲಕ್ಷಾಂತರ ಪಕ್ಷಿಗಳು ಬಂದು ಹಾರಾಟ ನಡೆಸುತ್ತವೆ.

ಈ ಬಾರಿ ಪಿಂಟೈಲ್​, ಗಡ್ವಾಲ್​,  ಯುರೇಷಿಯನ್​ ವೆಗಾನ್​  ಸೇರಿದಂತೆ ಹಲವು ಪಕ್ಷಿಗಳ ಸಂಖ್ಯೆ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಿಲಿಕಾ ಸರೋವರದಲ್ಲಿ ಪಕ್ಷಿಗಳ ಹಾರಾಟದ ವಿಡಿಯೋ, ಫೋಟೋಗಳು ವೈರಲ್ ಆಗಿವೆ. ಚಿಲಿಕಾ ಸರೋವರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ, ನೂರಾರು ಹಕ್ಕಿಗಳು ಒಂದೇ ಸಲಕ್ಕೆ ಹಾರುವ ವೀಡಿಯೋಗಳು, ಪಕ್ಷಿಗಳು ಏಕಾಂತದಲ್ಲಿ ಕುಳಿತ ಫೋಟೋಗಳು ನೋಡುಗರ ಮನ ಸೆಳೆದಿದೆ.

ಇದನ್ನೂ ಓದಿ:

ನಾಯಿಯ ಮುಖದಂತೆ ಕಾಣುವ ಪ್ರಾಣಿಯ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು: ವಿಡಿಯೋದಲ್ಲೇನಿದೆ?

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು