AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಗ್ರಾಹಕನಿಗೆ ಯೂಸರ್‌ ಮಾನ್ಯುಯಲ್‌ ಕೊಡದ ಮೊಬೈಲ್‌ ಕಂಪೆನಿಗೆ 5 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಮೊಬೈಲ್‌ ಖರೀದಿಸಿದಾಗ ಯೂಸರ್‌ ಮಾನ್ಯುಯಲ್‌ ನೀಡದ ಮೊಬೈಲ್‌ ಕಂಪೆನಿಯ ವಿರುದ್ಧ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಗ್ರಾಹಕರ ನ್ಯಾಯಾಲಯವು ಗ್ರಾಹಕನಿಗೆ ಕೈಪಿಡಿ ನೀಡದ ಒನ್‌ ಪ್ಲಸ್‌ ಇಂಡಿಯಾಗೆ 5 ಸಾವಿರ ರೂ. ದಂಡ ವಿಧಿಸಿದೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ಗ್ರಾಹಕನಿಗೆ ಯೂಸರ್‌ ಮಾನ್ಯುಯಲ್‌ ಕೊಡದ ಮೊಬೈಲ್‌ ಕಂಪೆನಿಗೆ 5 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Dec 09, 2024 | 4:22 PM

Share

ಯಾವುದೇ ಎಲೆಕ್ಟ್ರಾನಿಕ್‌ ವಸ್ತು ಅಥವಾ ಗ್ಯಾಜೆಟ್‌ಗಳನ್ನು ಕೊಂಡಾಗ ಆ ಕಂಪೆನಿಯು ಬಳಕೆದಾರರ ಕೈ ಪಿಡಿ ಅಂದರೆ ಯೂಸರ್‌ ಮಾನ್ಯುಯಲ್‌ ಅನ್ನು ಕೊಟ್ಟಿರುತ್ತಾರೆ. ಯಾಕಂದ್ರೆ ಕೈ ಪಿಡಿಯ ಸಹಾಯದಿಂದ ಖರೀದಿಸಿದ ಉಪಕರಣದಲ್ಲಿ ಯಾವುದೇ ಸಮಸ್ಯೆ ಅಥವಾ ಲೋಪದೋಷಗಳು ಕಂಡು ಬಂದಾಗ ಅದರ ಪರಿಹಾರವನ್ನು ಕಂಡುಕೊಳ್ಳಬಹುದು. ಅಷ್ಟೇ ಅಲ್ಲದೆ ಆ ಉಪಕರಣದ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಕೂಡಾ ತಿಳಿದುಕೊಳ್ಳಬಹುದು. ಆದ್ರೆ ಇಲ್ಲೊಂದು ಮೊಬೈಲ್‌ ಕಂಪೆನಿ ಫೋನ್‌ ಖರೀದಿಸಿದ ಗ್ರಾಹಕನಿಗೆ ಯಾವುದೇ ರೀತಿಯ ಕೈಪಿಡಿ ನೀಡಿಲ್ಲ. ಈ ಬಗ್ಗೆ ಆ ವ್ಯಕ್ತಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಮೊಬೈಲ್‌ ಕಂಪೆನಿಗೆ ಬರೋಬ್ಬರಿ 5 ಸಾವಿರ ರೂ. ದಂಡ ವಿಧಿಸಿದೆ.

ವರದಿಗಳ ಪ್ರಕಾರ ಬೆಂಗಳೂರಿನ ಸಂಜಯ್‌ ನಗರದ ನಿವಾಸಿ ಎಸ್.ಎಂ ರಮೇಶ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ 24,598 ರೂ. ಗಳ ಒನ್‌ಪ್ಲಸ್‌ ನಾರ್ಡ್‌ ಸಿಇ 3 ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಿದ್ದರು. ಮೊಬೈಲ್‌ ಖರೀದಿಸಿದ ಸಂದರ್ಭದಲ್ಲಿ ಕಂಪೆನಿ ಇವರಿಗೆ ಯೂಸರ್‌ ಮಾನ್ಯುಯಲ್‌ ಅನ್ನು ನೀಡಿರಲಿಲ್ಲ. ಇದರಿಂದಾಗಿ ಅವರು ಫೋನ್‌ನ ವಾರಂಟಿ ಮಾಹಿತಿ ಮತ್ತು ಕಂಪೆನಿಯ ವಿಳಾಸವನ್ನು ಕಂಡುಹಿಡಿಯಲು ಪರದಾಡಬೇಕಾಯಿತು. ಈ ಬಗ್ಗೆ ಕಂಪೆನಿಯನ್ನು ಪದೇ ಪದೇ ಸಂಪರ್ಕಿಸಿದಾಗ ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಅಂದರೆ ಏಪ್ರಿಲ್‌ನಲ್ಲಿ ಕೈಪಿಡಿಯನ್ನು ಕಳುಹಿಸಿಕೊಟ್ಟಿತು. ಗ್ರಾಹಕರ ಸಮಸ್ಯೆಗಳಿಗೆ ಸರಿಯಾದ ಸಮಯಕ್ಕೆ ಸ್ಪಂದಿಸದಿದ್ದ ಕಾರಣಕ್ಕೆ ಬೇಸರಗೊಂಡು ಹಾಗೂ ಮಾನಸಿಕ ಯಾತನೆ ಅನುಭವಿಸಿದ ರಮೇಶ್‌ ಜೂನ್‌ನಲ್ಲಿ ಈ ಬಗ್ಗೆ ಬೆಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸ್ಯಾಂಡ್‌ವಿಚ್‌ ಮಾರಾಟ ಮಾಡಿ ವರ್ಷಕ್ಕೆ 50 ಕೋಟಿ ರೂ. ಗಳಿಸುತ್ತಿರುವ ಫ್ರೆಂಚ್‌ ವ್ಯಕ್ತಿ

ನವೆಂಬರ್‌ 29 ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ “ಇದು ಒನ್‌ ಪ್ಲಸ್‌ ಇಂಡಿಯಾದ ಪರಿಪೂರ್ಣ ನಿರ್ಲಕ್ಷ್ಯ ಮತ್ತು ಉದಾಸೀನತೆಯಾಗಿದೆ, ಗ್ರಾಹಕರಿಗೆ ಅಗತ್ಯ ದಾಖಲೆಗಳನ್ನು ಒದಗಿಸುವುದು ಯಾವುದೇ ಕಂಪೆನಿಯ ಕರ್ತವ್ಯವಾಗಿದೆ ಎಂದು ಹೇಳಿ ಗ್ರಾಹಕನಿಗೆ ಮಾನಸಿಕ ಯಾತನೆ ನೀಡಿದ್ದಕ್ಕೆ 5,000 ದಂಡ ಮತ್ತು ಆ ಗ್ರಾಹಕನ ಕಾನೂನು ಹೋರಾಟದ ವೆಚ್ಚಕ್ಕಾಗಿ 1, ಸಾವಿರ ರೂ. ಪರಿಹಾರ ನಿಡುವಂತೆ ಒನ್‌ ಪ್ಲಸ್‌ ಇಂಡಿಯಾಗೆ ಆದೇಶಿಸಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!