AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರ ವಿನಂತಿ ಮೇರೆಗೆ ಕೈಬರಹದಲ್ಲಿ ಕ್ರಿಕೆಟ್​ ಮ್ಯಾಚ್​ ಸ್ಕೋರ್ ​ಬರೆದುಕೊಟ್ಟ ಪೈಲಟ್

Cricket Match’s Score : ಕ್ರಿಕೆಟ್​ ಸ್ಕೋರ್​ ಅಪ್​ಡೇಟ್ ಪ್ಲೀಸ್​ ಅಂತ ಪೈಲಟ್​ಗೆ ಕೇಳಿದ್ದಾರೆ ಈ ಪ್ರಯಾಣಿಕರು. ಇಂಡಿಗೋ ನ್ಯಾಪ್​ಕಿನ್​ ಮೇಲೆ ಕೈಯಿಂದ ಬರೆದು ಕೊಟ್ಟಿದ್ದಾರೆ ಪೈಲಟ್. ನೆಟ್ಟಿಗರು ಫುಲ್​ ಖುಷ್!

ಪ್ರಯಾಣಿಕರ ವಿನಂತಿ ಮೇರೆಗೆ ಕೈಬರಹದಲ್ಲಿ ಕ್ರಿಕೆಟ್​ ಮ್ಯಾಚ್​ ಸ್ಕೋರ್ ​ಬರೆದುಕೊಟ್ಟ ಪೈಲಟ್
Passenger receives handwritten note from IndiGo pilot after requesting cricket match’s score.
TV9 Web
| Edited By: |

Updated on:Oct 31, 2022 | 6:17 PM

Share

Viral : ಕ್ರಿಕೆಟ್​ನ ಹುಚ್ಚುಪ್ರೇಮ, ಇದೊಂಥರಾ ನಶಾ ಇದ್ದಹಾಗೆ. ಆಗಾಗ ಕೊನೇಪಕ್ಷ ಸ್ಕೋರ್​ ಅನ್ನಾದರೂ ತಿಳಿದುಕೊಂಡರೆ ಚೂರುಪಾರು ಉಸಿರುಬರುತ್ತಿರುತ್ತದೆ ಕ್ರಿಕೆಟ್​ ಪ್ರೇಮಿಗಳಿಗೆ. ಇಲ್ಲದೇ ಹೋದಲ್ಲಿ ಪೂರ್ತಿ ಹುಚ್ಚೇ! ಅಲ್ಲೆಲ್ಲೋ ಮ್ಯಾಚ್ ನಡೆಯುತ್ತಿದ್ದು ಈ ಪ್ರೇಮಿಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರಂತೂ ಕಥೆ ಅಷ್ಟೇ ಎಂದು ನಾವೆಲ್ಲಾ ಅಂದುಕೊಳ್ಳಬಹುದು. ಆದರೆ ಈಗ ಕಾಲ ಬದಲಾಗಿದೆ. ವಿಮಾನ ಸಿಬ್ಬಂದಿ ಪ್ರಯಾಣಿಕರ ನಿರೀಕ್ಷೆಯನ್ನು ಪೂರೈಸುವಲ್ಲಿ ಹೆಚ್ಚು ಶ್ರಮಿಸುತ್ತಿದೆ ಎನ್ನುವುದಕ್ಕೆ ಈ ಟ್ವೀಟ್​ ಉದಾಹರಣೆ. ವಿಮಾನ ಪ್ರಯಾಣದ ಮಧ್ಯೆಯೇ ಕ್ರಿಕೆಟ್​ ಪ್ರೇಮಿಯೊಬ್ಬರು ಇಂಡಿಗೋ ಪೈಲಟ್​ಗೆ ವಿನಂತಿಸಿಕೊಂಡು ಕ್ರಿಕೆಟ್​ ಸ್ಕೋರ್ ಅನ್ನು ಕೇಳಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಇದು ಸ್ವಲ್ಪ ಜಾಸ್ತಿಯೇ ಆಯಿತಲ್ಲವಾ ಹುಚ್ಚು? ನಿನ್ನೆ ಆಸ್ಟ್ರೇಲಿಯಾದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ (ICC T20) ಮ್ಯಾಚ್​ ನಡೆದಿತ್ತು. ಆಗ ವಿಕ್ರಮ ಗರ್ಗ ಎಂಬ ಪ್ರಯಾಣಿಕರು ಪೈಲಟ್​ಗೆ ಸ್ಕೋರ್ ತಿಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಪೈಲಟ್​ ವಿಮಾನ ಚಾಲನೆ ಮಾಡುತ್ತಲೇ ಕ್ರಿಕೆಟ್​ ಸ್ಕೋರ್​ ಅನ್ನು ತಮ್ಮ ಕೈಬರಹದಲ್ಲಿ ಅವರಿಗೆ ತಲುಪಿಸಿದ್ಧಾರೆ. ಪ್ರಯಾಣ ಮುಗಿದ ನಂತರ ವಿಕ್ರಮ ಗರ್ಗ, ‘ಮ್ಯಾಚ್​ನಲ್ಲಿ ಇಂಡಿಯಾ ಸೋತಿತು ನಿಜ. ಆದರೆ @IndiGo6E ನನ್ನ ಹೃದಯ ಗೆದ್ದಿದೆ.’ ಎಂದು ಪೈಲಟ್​ಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ಧಾರೆ.

ಸಾಕಷ್ಟು ಜನರು ರೀಟ್ವೀಟ್ ಮಾಡಿದ್ದಾರೆ ಈ ಪೋಸ್ಟ್​ ಅನ್ನು. ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ ಪೈಲಟ್​ನ ಸಹಕಾರಕ್ಕೆ. ಹಾಗೆಯೇ ಇಂಡಿಗೋ ಸಂಸ್ಥೆಯು, ಆದಷ್ಟು ಬೇಗ ಇಂಡಿಗೋ ವಿಮಾನದಲ್ಲಿ ನಿಮ್ಮನ್ನು ಮತ್ತೆ ನೋಡಲು ಇಚ್ಛಿಸುತ್ತೇವೆ ಎಂದು ಪ್ರತಿಕ್ರಿಯಿಸಿದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:14 pm, Mon, 31 October 22

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್