AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಾಲೆಯಲ್ಲಿ ಕಲಿತ ಕಾಗಕ್ಕನ ಬುದ್ಧಿವಂತಿಕೆ ಪಾಠ ಇಲ್ಲಿ ನಿಜವಾಗಿದೆ ನೋಡಿ

ಕಾಗೆಗಳು ಎಷ್ಟು ಬುದ್ದಿವಂತ ಪಕ್ಷಿಗಳು ಎಂಬುದಕ್ಕೆ ಸಂಬಂಧಿಸಿದ  ಹಲವು ಜಾನಪದ ಕಥೆಗಳನ್ನು ನೀವು ಕೇಳಿರಬಹುದು. ಅಷ್ಟೇ ಅಲ್ಲದೆ ಬಹುತೇಕ ನಾವೆಲ್ಲರೂ ನಮ್ಮ ಶಾಲಾ ದಿನಗಳಲ್ಲಿ ಬಾಯಾರಿದ ಕಾಗೆಯೊಂದು ತನ್ನ ಬುದ್ಧಿವಂತಿಕೆಯಿಂದ  ಕೊಡದಿಂದ ನೀರು ಕುಡಿಯುವ ನೀತಿ ಪಾಠವನ್ನು ಸಹ ಕೇಳಿರುತ್ತೇವೆ.  ಈಗ ಆ ಪಾಠದಲ್ಲಿರುವ ಕಾಗಕ್ಕನ ಕಥೆಯನ್ನು ನೀವು ನಿಜವಾಗಿಯೂ ನೋಡಬಹುದು. ಆ ಕುರಿತ ವಿಡಿಯೋ ಇಲ್ಲಿದೆ.

Viral Video: ಶಾಲೆಯಲ್ಲಿ ಕಲಿತ ಕಾಗಕ್ಕನ ಬುದ್ಧಿವಂತಿಕೆ ಪಾಠ ಇಲ್ಲಿ ನಿಜವಾಗಿದೆ ನೋಡಿ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Dec 01, 2023 | 5:38 PM

Share

ಒಂದಾನೊಂದು ಊರಲ್ಲಿ ಸುಡು ಬೇಸಿಗೆಯ  ಸಮಯದಲ್ಲಿ  ಕಾಗೆಯೊಂದು ತನ್ನ ಬಾಯಾರಿಕೆಯನ್ನು ನೀಗಿಸಲು, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬರುವಾಗ ಎಲ್ಲೂ  ನೀರು ಸಿಗದೆ ಕೊನೆಗೆ ಸುಸ್ತಾಗಿ ಮರವೊಂದರ ಕೊಂಬೆಯ ಮೇಲೆ ಕುಳಿತು ಬಿಡುತ್ತದೆ. ಹೀಗೆ ಕುಳಿತಿರುವಾಗ ಕಾಗೆಗೆ ಸ್ವಲ್ಪ ದೂರದಲ್ಲಿ ನೀರಿನ ಕೊಡವೊಂದು ಕಾಣಿಸುತ್ತದೆ. ಥಟ್ಟನೆ ಆ ಕಾಗೆ ಕೊಡದ ಬಳಿ ಹಾರಿ ಹೋಗುತ್ತದೆ,  ಆದರೆ ನೀರು ತಳ ಭಾಗದಲ್ಲಿದ್ದ ಕಾರಣ,  ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಕಾಗೆ ತನ್ನ ಬುದ್ಧಿವಂತಿಕೆಯಿಂದ ಅಲ್ಲಿದ್ದ ಕಲ್ಲುಗಳನ್ನೆಲ್ಲಾ ಆ ಕೊಡದೊಳಗೆ ತುಂಬಿಸುತ್ತದೆ,  ಆಗ ನೀರು ಮೇಲೆ ಬರಲಾರಂಭಿಸುತ್ತದೆ. ನಂತರ ಆ ನೀರು ಕುಡಿದು ಕಾಗೆ ಅಲ್ಲಿಂದ ಹಾರಿ ಹೋಗುತ್ತದೆ.  ಕಾಗೆಯ ಬುದ್ಧಿವಂತಿಕೆಗೆ ಸಂಬಂಧಿಸಿದ ಈ ನೀತಿ ಕಥೆಯನ್ನು ಬಹುತೇಕ  ನಾವೆಲ್ಲರೂ ಶಾಲಾದಿನಗಳಲ್ಲಿ ಓದಿರುತ್ತೇವೆ. ಇದನ್ನೆಲ್ಲಾ   ಕಥೆಗಳಲ್ಲಿ ಕೇಳಲು ಚೆನ್ನಾಗಿರುತ್ತದೆ, ಆದರೆ ನಿಜಜೀವನದಲ್ಲಿ  ಕಾಗೆಗಳು ಇಷ್ಟೆಲ್ಲಾ ಬುದ್ಧಿವಂತಿಕೆಯನ್ನು ಉಪಯೋಗಿಸಲು ಸಾಧ್ಯನಾ… ಎಂದು ಹಲವರು ಯೋಚಿಸಬಹುದು. ನೀವು ಕೂಡಾ ಅದೇ ರೀತಿ  ಭಾವಿಸಿದ್ದೀರಾ?  ಹಾಗಾದರೆ ಅದು ನಿಮ್ಮ ತಪ್ಪು ಕಲ್ಪನೆ, ಏಕೆಂದರೆ ಇಲ್ಲೊಂದು ಕಾಗೆ ಈ ಕಥೆಯನ್ನು ನಿಜವೆಂದು ಸಾಬೀತು ಪಡಿಸಿದೆ ಆ ಕುರಿತ ವಿಡಿಯೋ ಇಲ್ಲಿದೆ ನೋಡಿ.

@byari_rockers_ ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು,  ʼಸ್ಕೂಲ್ ಪಾಠದಲ್ಲಿದ್ದ ಕಾಗೆ ಸಿಕ್ತುʼ ಎಂಬ ಶೀರ್ಷಿಕೆಯನ್ನು ಕೂಡಾ ಬರೆಯಲಾಗಿದೆ.  ವಿಡಿಯೋದಲ್ಲಿ ಬಾಯಾರಿದ  ಕಾಗೆಯೊಂದು ಬಾಟಲಿಯೊಳಗೆ ಕಲ್ಲುಗಳನ್ನು ಹಾಕುತ್ತಾ, ಆ ನೀರು ಮೇಲೆ ಬಂದಾಗ ಕಾಗೆ ನೀರನ್ನು ಕುಡಿಯುವ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ಕಾಗೆಯೊಂದು ಬಾಯಾರಿರುತ್ತೆ. ಅಲ್ಲೇ ಒಂದು ಬಾಟಲಿಯಲ್ಲಿ ನೀರು ಸಹ ಇರುತ್ತೆ. ಆದರೆ ಕಾಗೆಗೆ ನೀರನ್ನು ಕುಡಿಯಲು ಸಾಧ್ಯವಾಗುವುದಿಲ್ಲ, ಏಕೆಂದರೆ ನೀರು ತಳಭಾಗದಲ್ಲಿತ್ತು. ಆಗ ಕಾಗೆ ಹೀಗೆ ಕುಳಿತರೆ ನಾವು ಬಾಯಾರಿಕೆಯಿಂದಲೇ ಸಾಯಬೇಕಾಗುತ್ತದೆ ಎಂದು ತನ್ನ ಬುದ್ಧಿವಂತಿಕೆಯಿಂದ ಅಲ್ಲೇ ಹತ್ತಿರದಲ್ಲಿದ್ದ, ಸಣ್ಣ ಸಣ್ಣ ಕಲ್ಲುಗಳನ್ನು ಬಾಯಲ್ಲಿ ಹೆಕ್ಕಿ ತಂದು  ಬಾಟಲಿಯೊಳಗೆ ಹಾಕುತ್ತದೆ. ಹೀಗೆ ಒಂದೊಂದೆ ಕಲ್ಲುಗಳನ್ನು ಬಾಟಲಿಯೊಳಗೆ ಹಾಕಿದಾಗ ತಳಭಾಗದಲ್ಲಿದ್ದ ನೀರು ಮೇಲೆ ಬರಲಾರಂಭಿಸುತ್ತದೆ, ಆಗ ಕಾಗೆ ತೃಪ್ತಿಯಿಂದ ನೀರನ್ನು ಕುಡಿಯುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: Viral Video: ಅಯ್ಯೋ ಇದು ಯಾರು? ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ನೋಡಿ ಹೌಹಾರಿದ ಕರಡಿ

ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿರುವ ಈ ವಿಡಿಯೋ 1.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 59.5K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಈ ವಿಡಿಯೋ ಬಗ್ಗೆ ಅನೇಕರು ಕಮೆಂಟ್​​​ ಕೂಡ ಮಾಡಿದ್ದಾರೆ.  ಒಬ್ಬ ಬಳಕೆದಾರರು ʼಇಷ್ಟು ದಿನ ಈ ಕಾಗೆ ಎಲ್ಲಿಗೆ ಹೋಗಿತ್ತುʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಸ್ಕೂಲ್ ಪಾಠದಲ್ಲಿ ಓದಿದ್ದ ಕಾಗೆಯನ್ನು ಕೊನೆಗೂ ನಿಜ ಜೀವನದಲ್ಲಿ ತೋರಿಸಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ.  ಇನ್ನೊಬ್ಬ ಬಳಕೆದಾರರು ʼನಾವು  ಪಾಠದಲ್ಲಿ ಓದಿದ್ದ ಆ ಕಾಗೆ ಇನ್ನೂ ಬದುಕಿದ್ಯಾʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ