AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾಯ್ ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಬುದ್ಧನ ಪ್ರತಿಮೆ ಹತ್ತಿದ ಮಹಿಳೆ

ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಮಹಿಳೆಯೊಬ್ಬಳು ಬುದ್ಧನ ಪ್ರತಿಮೆ ಹತ್ತಿರುವ ವಿಚಾರ ಇದೀಗ ಆಕ್ರೋಶವನ್ನು ಹುಟ್ಟುಹಾಕಿದೆ. ಚೂಡಿ ಹಾಕಿರುವ ಮಹಿಳೆ ಮತ್ತೊಬ್ಬಳು ಮಹಿಳೆ ಜತೆ ಸೇರಿ ಸಾಹಸ ಮಾಡಿದ್ದಾರೆ. ಬಿಳಿ ಸಲ್ವಾರ್ ಹಾಕಿರುವ ಮಹಿಳೆ ಮತ್ತೊಬ್ಬಳ ಸಹಾಯದಿಂದ ಪ್ರತಿಮೆಯನ್ನು ಹತ್ತಿ ಅಲ್ಲಿಂದ ಮಾವಿನ ಹಣ್ಣು ಕಿತ್ತಿದ್ದಾರೆ. ಟಿಕ್​ಟಾಕ್​ನಲ್ಲಿ ಈ ವಿಡಿಯೋ ಪ್ರಸಾರ ಮಾಡಲಾಗಿತ್ತು

ಥಾಯ್ ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಬುದ್ಧನ ಪ್ರತಿಮೆ ಹತ್ತಿದ ಮಹಿಳೆ
ಥೈಯ್ಲೆಂಡ್
ನಯನಾ ರಾಜೀವ್
|

Updated on: Mar 09, 2025 | 2:01 PM

Share

ಥಾಯ್ಲೆಂಡ್​, ಮಾರ್ಚ್​ 09: ದೇವಸ್ಥಾನದಲ್ಲಿ ಮಾವಿನ ಹಣ್ಣು ಕೀಳಲು ಮಹಿಳೆಯೊಬ್ಬಳು ಬುದ್ಧನ ಪ್ರತಿಮೆ ಹತ್ತಿರುವ ವಿಚಾರ ಇದೀಗ ಆಕ್ರೋಶವನ್ನು ಹುಟ್ಟುಹಾಕಿದೆ. ಚೂಡಿ ಹಾಕಿರುವ ಮಹಿಳೆ ಮತ್ತೊಬ್ಬಳು ಮಹಿಳೆ ಜತೆ ಸೇರಿ ಸಾಹಸ ಮಾಡಿದ್ದಾರೆ. ಬಿಳಿ ಸಲ್ವಾರ್ ಹಾಕಿರುವ ಮಹಿಳೆ ಮತ್ತೊಬ್ಬಳ ಸಹಾಯದಿಂದ ಪ್ರತಿಮೆಯನ್ನು ಹತ್ತಿ ಅಲ್ಲಿಂದ ಮಾವಿನ ಹಣ್ಣು ಕಿತ್ತಿದ್ದಾರೆ. ಟಿಕ್​ಟಾಕ್​ನಲ್ಲಿ ಈ ವಿಡಿಯೋ ಪ್ರಸಾರ ಮಾಡಲಾಗಿತ್ತು.

ಅನೇಕ ಮಂದಿ ಇದನ್ನು ಖಂಡಿಸಿದ್ದಾರೆ. ಇಬ್ಬರು ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆ ಮಹಿಳೆಯರು ಎಲ್ಲಿಯವರು ಎಂದು ಇದುವರೆಗೂ ತಿಳಿಯದಿದ್ದರೂ ಅವರು ಭಾರತದವರಿರಬಹುದು ಎಂದು ಅಂದಾಜಿಸಿದ್ದಾರೆ. ಮಾವಿನ ಹಣ್ಣು ಕೀಳಲು ಮಹಿಳೆ ಥಾಯ್ ದೇವಾಲಯದ ಪ್ರತಿಮೆಯನ್ನು ಹತ್ತಿದ ವಿಡಿಯೋ ಆಕ್ರೋಶಕ್ಕೆ ಕಾರಣವಾಗಿದೆ.

View this post on Instagram

A post shared by BaliBatman (@balibatmann)

ಒಬ್ಬರು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ದೇವಾಲಯದ ಕೆಳಗೆ ನಿಂತಿದ್ದಾರೆ, ಇನ್ನೊಬ್ಬರು ಮಾವಿನ ಹಣ್ಣು ಕಿತ್ತು ಕೆಳಗಿರುವ ಮಹಿಳೆಗೆ ಕೊಡುತ್ತಿರುವ ವಿಡಿಯೋ ಇದಾಗಿದೆ.

ವಿಯೆಟ್ನಾಂಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರೊಬ್ಬರು ತಮ್ಮ ದೇಶದ ಮರ್ಯಾದೆಯನ್ನು ಕಳೆದಿದ್ದಕ್ಕೆ ಇಬ್ಬರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿಯೊಬ್ಬ ಭಾರತೀಯನು ತಮ್ಮ ಖ್ಯಾತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅದನ್ನು ನೀವು ಹಾಳು ಮಾಡುತ್ತಿದ್ದೀರಾ ಎಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!