Viral News: ಸಂಗಾತಿಯಿಲ್ಲದೆ ಗರ್ಭ ಧರಿಸಿ 14 ಮರಿಗಳಿಗೆ ಜನ್ಮ ನೀಡಿದ ಹೆಬ್ಬಾವು

ಇಂಗ್ಲೆಂಡಿನ 13 ವರ್ಷದ ಹೆಬ್ಬಾವೊಂದು ಸಂಗಾತಿಯಿಲ್ಲದೆ ಗರ್ಭ ಧರಿಸಿ 14ಮರಿಗಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ವರದಿಯ ಪ್ರಕಾರ, ಈ ರೀತಿಯ ಸಂತಾನೋತ್ಪತ್ತಿಯನ್ನು ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುತ್ತದೆ. ಇದು ಅಲೈಂಗಿಕ ಸಂತಾನೋತ್ಪತ್ತಿಯ ನೈಸರ್ಗಿಕ ರೂಪವಾಗಿದೆ.

Viral News: ಸಂಗಾತಿಯಿಲ್ಲದೆ ಗರ್ಭ ಧರಿಸಿ 14 ಮರಿಗಳಿಗೆ ಜನ್ಮ ನೀಡಿದ ಹೆಬ್ಬಾವು
14 ಮರಿಗಳಿಗೆ ಜನ್ಮ ನೀಡಿದ ಹೆಬ್ಬಾವು
Follow us
|

Updated on: Jun 26, 2024 | 4:22 PM

ಇಂಗ್ಲೆಂಡಿನಲ್ಲಿ ಹೆಬ್ಬಾವೊಂದು ಸಂಗಾತಿಯಿಲ್ಲದೆ ಗರ್ಭ ಧರಿಸಿ 14ಮರಿಗಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಈ ಹೆಬ್ಬಾವು ಗಂಡಿನ ಸಂಪರ್ಕಕ್ಕೆ ಬಾರದೆ ಮಗುವಿಗೆ ಜನ್ಮ ನೀಡಿದ್ದು ಹೇಗೆ ಎಂಬುದು ಈಗ ಪ್ರಶ್ನೆಯಾಗಿದೆ. ಒಂಬತ್ತು ವರ್ಷಗಳ ಹಿಂದೆ ಇಂಗ್ಲೆಂಡ್‌ನ ಪೋರ್ಟ್ಸ್‌ಮೌತ್ ಕಾಲೇಜಿನಲ್ಲಿ ಸೆರೆಯಲ್ಲಿ ತಂದು ಬಿಡಲಾಗಿದ್ದ ಈ ಹಾವಿಗೆ ಶ್ರೇಷ್ಠ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಹೆಸರಿಡಲಾಗಿತ್ತು. ಆದರೆ ಇದೀಗ ಮರಿಗಳಿಗೆ ಜನ್ಮ ನೀಡಿದ ಬಳಿಕ ಇದು ಗಂಡಲ್ಲ, ಹೆಣ್ಣು ಹಾವು ಎಂದು ತಿಳಿದುಬಂದಿದೆ.

ಸ್ಕೈ ನ್ಯೂಸ್ ವರದಿಯ ಪ್ರಕಾರ, 13 ವರ್ಷದ ರೊನಾಲ್ಡೊ 6 ಅಡಿ (1.8 ಮೀಟರ್) ಉದ್ದದ ಬ್ರೆಜಿಲಿಯನ್ ರೈನ್ಬೋ ಬೋವಾ ಕನ್‌ಸ್ಟ್ರಿಕ್ಟರ್, ಇದು ಹೆಬ್ಬಾವಿನ ಒಂದು ಜಾತಿಯಾಗಿದೆ. ಪ್ರಾಣಿ ಸಂರಕ್ಷಣಾಧಿಕಾರಿ ಪೀಟ್ ಕ್ವಿನ್ಲಾನ್ ಪ್ರಕಾರ, ಒಂಬತ್ತು ವರ್ಷಗಳ ಹಿಂದೆ ಪಶುವೈದ್ಯರು ಹೆಬ್ಬಾವನ್ನು ಗಂಡು ಎಂದು ಘೋಷಿಸಿದ್ದರು, ಅದರಂತೆ ಈ ಹಾವನ್ನು ಗಂಡು ಎಂದು ಭಾವಿಸಲಾಗಿತ್ತು. ಆದರೆ ಈ ಆಶ್ಚರ್ಯಕರ ಘಟನೆಯ ನಂತರ ಅದು ಗಂಡಲ್ಲ ಹೆಣ್ಣು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:   ಇಳಿ ವಯಸ್ಸಿನಲ್ಲೂ ಕುಂದದ ಜೀವನೋತ್ಸಾಹ… ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿ ಸ್ವಾವಲಂಬಿ ಬದುಕು ನಡೆಸುತ್ತಿರುವ ಗಟ್ಟಿಗಿತ್ತಿ

ವರದಿಯ ಪ್ರಕಾರ, ಈ ರೀತಿಯ ಸಂತಾನೋತ್ಪತ್ತಿಯನ್ನು ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುತ್ತದೆ. ಇದು ಅಲೈಂಗಿಕ ಸಂತಾನೋತ್ಪತ್ತಿಯ ನೈಸರ್ಗಿಕ ರೂಪವಾಗಿದೆ, ಅಲ್ಲಿ ಫಲೀಕರಣವಿಲ್ಲದೆ ಮೊಟ್ಟೆಯಿಂದ ಭ್ರೂಣವು ಬೆಳವಣಿಗೆಯಾಗುತ್ತದೆ. ಇದು ಸಸ್ಯಗಳು, ಪಾಚಿಗಳು ಮತ್ತು ಕೆಲವು ಅಕಶೇರುಕಗಳು (ಬೆನ್ನುಹುರಿಗಳಿಲ್ಲದವುಗಳು) ಮತ್ತು ಕಶೇರುಕ ಪ್ರಾಣಿಗಳಲ್ಲಿ ಸಂಭವಿಸಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ