ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಏಷ್ಯಾದ ಅನೇಕ ದೇಶಗಳಲ್ಲಿ ಕೋಳಿಗಳು, ಹಂದಿಗಳು ಮತ್ತು ಜಾನುವಾರುಗಳಂತಹ ಸಾಂಪ್ರದಾಯಿಕ ಜಾನುವಾರುಗಳಿಗೆ ಹೋಲಿಸಿದರೆ ಆಹಾರವಾಗಿ ಹಾವಿನ ಮಾಂಸದ ತೂಕವೇ ಮೇಲುಗೈ ಸಾಧಿಸಿದೆ. ಸಾಕಣೆ ಮಾಡಲಾದ ಹೆಬ್ಬಾವುಗಳಿಗೆ ಸರಿಯಾಗಿ ಆಹಾರ ನೀಡದಿದ್ದರೂ ಅವು ವೇಗವಾಗಿ ಬೆಳೆಯುತ್ತವಂತೆ. ಇನ್ನು ದೀರ್ಘಕಾಲದವರೆಗೆ ಆಹಾರ ಪೂರೈಕೆ ಸರಪಳಿಗೆ ಅಡ್ಡಿಯುಂಟಾದಾಗ ಹಾವಿನ ಮಾಂಸವು ಸುಸ್ಥಿರ ಆಹಾರ ಮೂಲವನ್ನು ಒದಗಿಸಬಲ್ಲದು ಎಂದು ತಿಳಿದುಬಂದಿದೆ.

ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ
ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ!
Follow us
|

Updated on:Jun 11, 2024 | 5:36 PM

ನಮ್ಮಲ್ಲಿ ಬಹುತೇಕ ಶಾಕಾಹಾರಿಗಳಿಗೆ Snake gourd ಅಂದರೆ ಹಾವಿನಂತೆ ಬಳಕುವ ಉದ್ದುದ್ದ ಪಡವಲಕಾಯಿಯ ಸುಂದರ ಚಿತ್ರಣ ಮೂಡುತ್ತದೆ! ಈ ಪಡವಲಕಾಯಿಯನ್ನು ಪವಿತ್ರವಾದುದು ಎಂದೂ ಪರಿಗಣಿಸುತ್ತಾರೆ. ನಾಗ ಷಷ್ಠಿ ಜೊತೆ ಹಾವಿನಂತೆ ತಳಕು ಹಾಕಿಕೊಳ್ಳುವ ಈ ತರಕಾರಿಯನ್ನು ಕೆಲವರು ತಿನ್ನುವುದಿಲ್ಲ. ಆದರೆ ಅದರ ರುಚಿ ಹತ್ತಿಸಿಕೊಂಡವರು ಪಡವಲಕಾಯಿಯನ್ನು ಬಿಡುವ ಮಾತೇ ಇಲ್ಲ. ಇದು ಶಾಕಾಹಾರಿಗಳ ಆಹಾರ ಕ್ರಮವಾಗಿದ್ದರೆ ಮತ್ತೊಂದು ವರ್ಗದ ಜನರಿದ್ದಾರೆ – ಅವರೇ ಮಾಂಸಾಹಾರಿಗಳು. ಅವರು ನಿಜವಾಗಿಯೂ ಈ snake ಅನ್ನುವುದನ್ನು garden ನಲ್ಲಿ ಬೆಳೆಸುತ್ತಾರೆ. ಅವರಿಗೆ snake garden ಜೀವನದ ದೊಡ್ಡ ಭಾಗವಾಗಿದೆ. ಅಂದರೆ ಹಾವುಗಳನ್ನು ದೊಡ್ಡ ದೊಡ್ಡ ಗಾರ್ಡನ್ ಗಳಲ್ಲಿ ಬೆಳೆಸುವ ಕೃಷಿ ಮಾಡುತ್ತಾರೆ. ಮಾಂಸಾಹಾರಿಗಳ ಆಹಾರದ ಭಾಗವಾಗಿ ಹಾವುಗಳನ್ನು ಸಾಕುತ್ತಾರೆ. ಅದರ ಮಾಂಸವನ್ನು ತಿನ್ನುತ್ತಾರೆ. ಅಂದರೆ ಇತ್ತೀಚೆಗೆ ಮಾಂಸಾಹಾರಿಗಳ ಮಾಂಸದ ಅವಶ್ಯಕತೆಯನ್ನು ಹಾವುಗಳು ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತಿವೆ! ಹಾವುಗಳನ್ನು ಸಾಕುವ ಉದ್ಯಮ ಯಾವ ಮಟ್ಟಕ್ಕೆ ಬೆಳೆದು ನಿಂತಿದೆಯೆಂದರೆ ಒಟ್ಟಾರೆ ಮಾಂಸಾಹಾರಿ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹಾವಿನ ಮಾಂಸ ಸುಸ್ಥಿರವಾದ ಮೂಲವಾಗಿದೆ.

ಅಂದಹಾಗೆ ಇತ್ತೀಚಿನ ಎಣಿಕೆಯ ಪ್ರಕಾರ 3789 ಹಾವು ಪ್ರಭೇದಗಳಿವೆ. ಇದು ಹಲ್ಲಿಗಳ ನಂತರ ಸರೀಸೃಪಗಳ ಜಾತಿಯಲ್ಲಿ ಎರಡನೇ ದೊಡ್ಡ ಗುಂಪಾಗಿದೆ. ದಿನಾ ಚೀನಾ, ಇಂಡೋನೇಷ್ಯಾ, ಮಲೇಷಿಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಕನಿಷ್ಠ ಲಕ್ಷಾಂತರ ಹೆಬ್ಬಾವುಗಳನ್ನು ಕೊಲ್ಲಲಾಗುತ್ತಿದೆ. ಇದು ಮಾಂಸಾಹಾರಕ್ಕಾಗಿ ಅಷ್ಟೇ ಅಲ್ಲ; ಫ್ಯಾಶನ್ ವಸ್ತುಗಳ ತಯಾರಿಕೆಗಾಗಿಯೂ ಇವುಗಳನ್ನು ಬೆಳೆಸಿ, ಕೊಲ್ಲಲಾಗುತ್ತದೆ. ಇಲ್ಲಿ ಮಾಂಸಾಹಾರಕ್ಕಾಗಿ ಹೆಬ್ಬಾವುಗಳ ಸಾಕಣೆ ವಿಷಯದ ಬಗ್ಗೆ ಸವಿಸ್ತಾರವಾಗಿ ಹೇಳಲಾಗಿದೆ. ಏಕೆಂದರೆ ಹೆಬ್ಬಾವು ಸಾಕಣೆಯು ಸುಸ್ಥಿರವಾಗಿ ಹೆಚ್ಚು ಹೆಚ್ಚು ಮಾಂಸವನ್ನು ಒದಗಿಸುತ್ತಿದೆ.

ಈ ನಿಟ್ಟಿನಲ್ಲಿ ಹಾವು ಸಾಕಣೆ ತೋಟಗಳಲ್ಲಿ ಹಾವುಗಳು ಪಡವಲಕಾಯಿಯಂತೆ ನೇತಾಡುವುದನ್ನು ಕಾಣಬಹುದಾಗಿದೆ. ಹಾವಿನ ಚರ್ಮ, ಹಾವಿನ ಸೂಪ್ ಮತ್ತು ಹಾವಿನ ಮಾಂಸಕ್ಕಾಗಿ ಹಾವುಗಳ ಸಾಕುವುದನ್ನು ಇಲ್ಲಿ ಕಾಣಬಹುದಾಗಿದೆ. ಇನ್ನು ಜಗತ್ತಿನ ಅತಿದೊಡ್ಡ ಸ್ನೇಕ್ ಫಾರ್ಮ್ ಚೈನಾದಲ್ಲಿದೆ. ಇದು ಕೋಟ್ಯಂತರ ಡಾಲರುಗಳ ಉದ್ಯಮವಾಗಿ ಬೆಳೆದಿದೆ.

ಸಂಶೋಧಕರ ಗುಂಪೊಂದು ಇತ್ತೀಚೆಗೆ ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ 12 ತಿಂಗಳುಗಳ ಕಾಲ ಎರಡು ದೊಡ್ಡ ಹೆಬ್ಬಾವು ಜಾತಿಗಳ ಬಗ್ಗೆ ಅಧ್ಯಯನ ನಡೆಸಿದೆ. ಅಧ್ಯಯನದ ಸಾರವೆಂದರೆ ಅಲ್ಲಿ ಹಾವಿನ ಮಾಂಸವನ್ನು ಸವಿಯಾದ ಪದಾರ್ಥವೆಂದು ಪರಿಗಣಿಸಲಾಗಿದೆ! ಮಾಂಸಕ್ಕಾಗಿ ಇತರ ಜಾನುವಾರುಗಳನ್ನು ಸಾಕುವಂತೆ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಕಲಾಗುತ್ತಿದೆ ಎಂದು ತಿಳಿದುಬಂದಿದೆ.

Also Read: ಪೂಜಾ ಕೋಣೆಯ ನಿರ್ಮಾಣದಲ್ಲಿ ಈ 6 ತಪ್ಪುಗಳನ್ನು ಮಾಡಬೇಡಿ -ವಾಸ್ತು ತಜ್ಞರ ಸಲಹೆಗಳನ್ನು ಪಾಲಿಸಿ

4600 ಕ್ಕೂ ಹೆಚ್ಚು ಹೆಬ್ಬಾವುಗಳನ್ನು ಅಧ್ಯಯನ ಮಾಡಿದ ಸಂಶೋಧಕರು, ಬರ್ಮೀಸ್ ಮತ್ತು ರೆಟಿಕ್ಯುಲೇಟೆಡ್ ಹೆಬ್ಬಾವುಗಳೆರಡೂ ತಮ್ಮ ಜೀವನದ ಮೊದಲ ವರ್ಷದಲ್ಲಿ ವೇಗವಾಗಿ ಬೆಳೆಯುತ್ತವೆ ಮತ್ತು ಅವುಗಳಿಗೆ ಕಡಿಮೆ ಆಹಾರದ ಅಗತ್ಯವಿದೆ. ಸಾಕಿದ ಹೆಬ್ಬಾವುಗಳು ಜಾಗತಿಕ ಆಹಾರ ಭದ್ರತೆಯನ್ನು ಪೂರೈಸಲು ಸಹಾಯ ಮಾಡುತ್ತಿವೆ. ಹಾಗಾದರೆ ಹಾವುಗಳು ಉತ್ತಮ ಪ್ರೋಟೀನ್ ಪೌಷ್ಟಿಕಾಂಶಗಳನ್ನು ಒದಗಿಸುತ್ತವೆಯೇ?

ಆಗ್ನೇಯ ಏಷ್ಯಾದ ಎರಡು ವಾಣಿಜ್ಯ ಹೆಬ್ಬಾವು ಸಾಕಣೆ ಕೇಂದ್ರಗಳಲ್ಲಿ ಅಂತರರಾಷ್ಟ್ರೀಯ ಸಂಶೋಧಕರ ತಂಡ ನಡೆಸಿದ ಅಧ್ಯಯನದ ಸಾರ ಹೀಗಿದೆ: ಕೋಳಿಗಳು, ಹಂದಿಗಳು ಮತ್ತು ಜಾನುವಾರುಗಳಂತಹ ಸಾಂಪ್ರದಾಯಿಕ ಜಾನುವಾರುಗಳಿಗೆ ಹೋಲಿಸಿದರೆ ಆಹಾರವಾಗಿ ಹಾವಿನ ಮಾಂಸದ ತೂಕವೇ ಮೇಲುಗೈ ಸಾಧಿಸಿದೆಯಂತೆ. ಇದಲ್ಲದೆ, ಸಾಕಣೆ ಮಾಡಲಾದ ಹೆಬ್ಬಾವುಗಳಿಗೆ ಸರಿಯಾಗಿ ಆಹಾರವನ್ನು ನೀಡದಿದ್ದರೂ ಅವು ವೇಗವಾಗಿ ಬೆಳೆಯುತ್ತವಂತೆ.

ಆಹಾರ ಮತ್ತು ಪ್ರೊಟೀನ್ ಅನುಪಾತಗಳ ವಿಷಯದಲ್ಲಿ ಹೆಬ್ಬಾವುಗಳು ಇಲ್ಲಿಯವರೆಗೆ ಅಧ್ಯಯನ ಮಾಡಿದ ಎಲ್ಲಾ ಮುಖ್ಯವಾಹಿನಿಯ ಕೃಷಿ ಪ್ರಭೇದಗಳನ್ನು ಮೀರಿಸುತ್ತದೆ ಎಂದು ಅಧ್ಯಯನದ ಪ್ರಧಾನ ಲೇಖಕ, ಸರೀಸೃಪ ಜೀವಶಾಸ್ತ್ರಜ್ಞ ಡೇನಿಯಲ್ ನ್ಯಾಟುಶ್ ಅವರು ಹೇಳಿದ್ದಾರೆ. ಹೆಬ್ಬಾವುಗಳು ಮೊಟ್ಟೆಯೊಡೆದ ನಂತರ ಮೊದಲ ವರ್ಷದಲ್ಲಿಯೇ ಮಾಂಸದ ತೂಕವನ್ನು ವೇಗವಾಗಿ ಹೆಚ್ಚಿಸಿಕೊಂಡು ಬೆಳೆಯುತ್ತವಂತೆ.

ಹಾವಿನ ಮಾಂಸವು ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಅಧಿಕ ಪ್ರೋಟಿನ್‌ ಹೊಂದಿರುತ್ತದೆ:

ಅಧ್ಯಯನ ವರದಿಯ ಪ್ರಕಾರ ಡಾ. ನ್ಯಾಟುಶ್ ತಂಡವು ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ವಾಣಿಜ್ಯಿಕವಾಗಿ ಸಾಕಣೆ ಮಾಡಲಾದ ಒಟ್ಟು 4,600 ಹೆಬ್ಬಾವುಗಳನ್ನು ಅಧ್ಯಯನ ಮಾಡಿದೆ. ತುಲನಾತ್ಮಕವಾಗಿ ವಿವಿಧ ಆಹಾರ ಪದ್ಧತಿಗಳ ಪರಿಣಾಮಗಳನ್ನು ಪರೀಕ್ಷಿಸಿದ್ದಾರೆ. ಸ್ಥಳೀಯ ಆಹಾರ, ಕಾಡು ಹೆಗ್ಗಣಗಳು, ಹಂದಿ ಮಾಂಸ, ಮತ್ತು ಮೀನಿನ ಉಂಡೆಗಳ ಮಿಶ್ರಣವನ್ನು ಹಾವುಗಳಿಗೆ ವಾರಕ್ಕೊಮ್ಮೆ ಆಹಾರವಾಗಿ ನೀಡಲಾಗುತ್ತಿತ್ತು. ಮಾಂಸ ಬೆಳವಣಿಗೆ ಪರೀಕ್ಷಿಸಲು 12 ತಿಂಗಳ ಅಧ್ಯಯನದ ಅವಧಿಯಲ್ಲಿ ನಿಯಮಿತವಾಗಿ ಅದರ ತೂಕವನ್ನು ಅಳೆಯಲಾಗುತ್ತಿತ್ತು.

ತಮ್ಮ ಅಧ್ಯಯನದಲ್ಲಿ ಡಾ. ನ್ಯಾಟುಶ್ ಮತ್ತು ಸಹಯೋಗಿಗಳು ಹೇಳುವಂತೆ ಹಾವಿನ ಕೃಷಿಯಲ್ಲಿ ರೆಟಿಕ್ಯುಲೇಟೆಡ್ ಹೆಬ್ಬಾವುಗಳು, ಮಲಯೋಪೈಥಾನ್ ರೆಟಿಕ್ಯುಲಾಟಸ್ ಮತ್ತು ಬರ್ಮೀಸ್ ಹೆಬ್ಬಾವುಗಳಾದ ಪೈಥಾನ್ ಬಿವಿಟ್ಟಾಟಸ್ ಅವುಗಳ ಜೀವನದ ಮೊದಲ ವರ್ಷದಲ್ಲಿ ವೇಗವಾಗಿ ಬೆಳೆಯುತ್ತವೆ – ದಿನಕ್ಕೆ 46 ಗ್ರಾಂ ನಷ್ಟು ಮಾಂಸ ಹೊಂದುತ್ತವೆ – ಹೆಣ್ಣು ಹಾವುಗಳು ಹೆಚ್ಚು ಬೆಳವಣಿಗೆಯನ್ನು ನೀಡಿದರೆ ಪುರುಷ ಹಾವುಗಳ ಬೆಳವಣಿಗೆಯು ನಿಧಾನ ಗತಿಯಲ್ಲಿ ಇದ್ದವು.

ಹೆಬ್ಬಾವುಗಳು ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಾಲ ಆಹಾರವಿಲ್ಲದೆ ಬದುಕಬಲ್ಲವು. ಹಾಗಂತ ಅವುಗಳ ಮಾಂಸದ ತೂಕ ಕಡಿಮೆಯಾಗುವುದಿಲ್ಲ. ಅದೇ ವೇಳೆ ಆಹಾರವನ್ನು ಮರುಪ್ರಾರಂಭಿಸುತ್ತಿದ್ದಂತೆ ತಕ್ಷಣ ಬೆಳವಣಿಗೆಯನ್ನು ತ್ವರಿತವಾಗಿ ಪುನರಾರಂಭಿಸುತ್ತವೆ. ಇದರಿಂದಾಗಿ ಮಾಂಸಕ್ಕಾಗಿ ಸಾಂಪ್ರದಾಯಿಕವಾಗಿ ಸಾಕುವ ಜಾನುವಾರುಗಳಿಗಿಂತ ಇದು ಕಡಿಮೆ ಶ್ರಮ ಹಾಕಿದಂತಾಗುತ್ತದೆ. ಅಂದರೆ ಹವಾಮಾನ ವೈಪರೀತ್ಯಗಳಿಂದ ದೀರ್ಘಕಾಲದವರೆಗೆ ಆಹಾರ ಪೂರೈಕೆ ಸರಪಳಿಗೆ ಅಡ್ಡಿಯಾದಾಗ ಹಾವಿನ ಮಾಂಸವು ಸುಸ್ಥಿರ ಆಹಾರ ಮೂಲವನ್ನು ಒದಗಿಸಬಲ್ಲದು ಎಂದು ತಿಳಿದುಬಂದಿದೆ.

ಡಾ ನ್ಯಾಟುಶ್ ಮತ್ತು ಸಹಯೋಗಿಗಳ ಪ್ರಕಾರ ಇಂದಿನ ಫಾಸ್ಟ್​​ ಫುಡ್​​ ದಿನಗಳಲ್ಲಿ ಕ್ಷಿಪ್ರವಾಗಿ ಹಾವಿನ ಮಾಂಸ ಬೇಡಿಕೆಯನ್ನು ಪೂರೈಸಲು ಅವುಗಳಿಗೆ ಬಲವಂತವಾಗಿ ಆಹಾರ ತಿನ್ನಿಸುವುದಿಲ್ಲವಂತೆ. ಆದರೆ ಹೆಬ್ಬಾವುಗಳಿಗೆ ಹೆಚ್ಚು ಹೆಚ್ಚು ಆಹಾರ ನೀಡಿದಾಗ ಅವು ತ್ವರಿತ ಬೆಳವಣಿಗೆಯನ್ನು ಕಂಡಿವೆ. ಅವು ಅತ್ಯಂತ ಪರಿಣಾಮಕಾರಿ ಮತ್ತು ದೃಢವಾದ ಜೀರ್ಣಕಾರಿ ವ್ಯವಸ್ಥೆಯನ್ನು ಹೊಂದಿವೆ. ಮೂಳೆಗಳನ್ನು ಕಡಿದು ತಿನ್ನುವಷ್ಟು ಅದರ ಜೀರ್ಣ ಕ್ರಿಯೆ ಬಲಿಷ್ಠವಾಗಿದೆ. ಕುತೂಹಲಕಾರಿ ಸಂಗತಿಯೆಂದರೆ ಇಷ್ಟೆಲ್ಲ ಆಹಾರ ಸೇವನೆ ಮತ್ತು ಚಯಾಪಚಯ ವ್ಯವಸ್ಥೆ ಹೊಂದಿದ್ದರೂ ಇತರೆ ಸಸ್ತನಿಗಳಂತೆ ಅವು ನಿರಂತರವಾಗಿ, ಹೆಚ್ಚು ಹೆಚ್ಚು ಮಲ ಮೂತ್ರ ತ್ಯಾಜ್ಯವನ್ನು ಉತ್ಪಾದಿಸುವುದಿಲ್ಲವಂತೆ! ಹಂದಿಗಳನ್ನು ಸಾಕುವುದಕ್ಕಿಂತ ಹೆಚ್ಚಾಗಿ ಹೆಬ್ಬಾವುಗಳನ್ನು ಸಾಕುವುದು ರೈತರಿಗೆ ಹೆಚ್ಚು ಹಣ ತಂದುಕೊಡುತ್ತದೆ.

ಸ್ಥಿರವಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ಪಕ್ಷಿಗಳು ಮತ್ತು ಸಸ್ತನಿಗಳು ಅವು ಸೇವಿಸುವ ಆಹಾರದಿಂದ ಶೇ. 90 ರಷ್ಟು ಶಕ್ತಿಯನ್ನು ವ್ಯರ್ಥ ಮಾಡುತ್ತವೆ. ಸ್ಥಿರವಾದ ದೇಹದ ಉಷ್ಣತೆಯನ್ನು ಕಾಪಾಡಲು ಅವುಗಳಿಗೆ ಅದು ಅನಿವಾರ್ಯವಾಗಿವೆ. ಆದರೆ ಸರೀಸೃಪಗಳಂತಹ ಶೀತ ರಕ್ತದ ಪ್ರಾಣಿಗಳು ಮೈ ಬೆಚ್ಚಗಾಗಲು ಸೂರ್ಯನ ಬೆಳಕಿಗೆ ಮೈಯನ್ನು ಒಡ್ಡಿಕೊಳ್ಳುತ್ತವೆ ಅಷ್ಟೆ. ಯಾವುದೇ ಬೆಚ್ಚಗಿನ ರಕ್ತದ ಜೀವಿಗಳಿಗಿಂತ ಸರೀಸೃಪಗಳು ಅವು ತಿನ್ನುವ ಆಹಾರವನ್ನು ತನ್ನ ಮಾಂಸ ಮತ್ತು ದೇಹದ ಅಂಗಾಂಶಗಳ ಬೆಳವಣಿಗೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತವೆ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಕೋಳಿ, ಗೋಮಾಂಸ, ಹಂದಿಮಾಂಸ, ಸಾಲ್ಮನ್ ಮೀನು, ಮಿಡತೆಗಳು, ಇತರೆ ಸಾಕು ಪ್ರಾಣಿಗಳನ್ನು ಮಾಂಸಕ್ಕಾಗಿ ಸಾಕುವುದಕ್ಕಿಂತ ಹೆಬ್ಬಾವುಗಳಿಗೆ ಕಡಿಮೆ ಆಹಾರ ನೀಡಿ ಹೆಚ್ಚು ಹೆಚ್ಚು ಮಾಂಶ ಬೆಳೆಸಬಹುದು. ಎಳೆ ಹಾವುಗಳ ಸಾಕಣೆಯು ಹೆಚ್ಚು ಫಲದಾಯಕವಾಗಿದ್ದವು. ಜೊತೆಗೆ ಅಂತಹವುಗಳಿಗೆ ವಿಶೇಷ ಆರೈಕೆಯ ಅಗತ್ಯವೂ ಇರುವುದಿಲ್ಲ. ಅಂದರೆ ಎಳೆ ಹಾವುಗಳು ತ್ವರಿತ ಬೆಳವಣಿಗೆಯನ್ನು ಸಾಧಿಸುತ್ತವೆ. ಇದಲ್ಲದೆ ಜಾನುವಾರುಗಳಿಗಿಂತ ಭಿನ್ನವಾಗಿ, ಹೆಬ್ಬಾವುಗಳಿಗೆ ಬಹಳ ಕಡಿಮೆ ನೀರಿನ ಅಗತ್ಯ ಬೀಳುತ್ತದೆ. ಹಾವುಗಳಿಗೆ ಕನಿಷ್ಟ ನೀರಿನ ಅಗತ್ಯವಿರುತ್ತದೆ. ಎಷ್ಟರಮಟ್ಟಿಗೆ ಅಂದರೆ ಬೆಳಿಗ್ಗೆ ಅವುಗಳ ದೇಹದ ಮೇಲೆ ನೆಲೆಗೊಳ್ಳುವ ಇಬ್ಬನಿಯಿಂದ ಕೂಡ ಅವು ಬದುಕಬಲ್ಲವು ಎಂದು ಡಾ ನ್ಯಾಟುಶ್ ಮತ್ತು ಸಹಯೋಗಿಗಳು ಅಧ್ಯಯನದ ವೇಳೆ ಗಮನಿಸಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ ಹೆಬ್ಬಾವುಗಳು ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಮೌಲ್ಯವನ್ನು ಕೊಡುವುದರಲ್ಲಿ ಯಶಸ್ವಿಯಾಗಿವೆ. ಹಾವಿನ ಮಾಂಸವು ಸುಸ್ಥಿರವಾದುದು. ಹೆಚ್ಚು ಪ್ರೋಟೀನ್ ನಿಂದ ಕೂಡಿದೆ. ಅದು ಕಡಿಮೆ-ಸ್ಯಾಚುರೇಟೆಡ್ ಕೊಬ್ಬಿನಂಶವನ್ನು ಹೊಂದಿದೆ. ಆಗ್ನೇಯ ಏಷ್ಯಾ ಮತ್ತು ಚೀನಾದಾದ್ಯಂತ ಹಾವಿನ ಮಾಂಸವನ್ನು ವ್ಯಾಪಕವಾಗಿ ಸೇವಿಸಲ್ಪಡುತ್ತದೆ. ವಾಸ್ತವವಾಗಿ, ಇದು ಆಗ್ನೇಯ ಏಷ್ಯಾದ ಅನೇಕ ಭಾಗಗಳಲ್ಲಿ ಒಂದು ಸವಿಯಾದ ಪದಾರ್ಥವಾಗಿದೆ.

ಆದರೆ ಪಾಶ್ಚಿಮಾತ್ಯ ಕೃಷಿಯಲ್ಲಿ ಹೆಬ್ಬಾವು ಕೃಷಿ ಅಪರೂಪವಾಗಿದೆ. ಅದೇ ಏಷ್ಯಾದಲ್ಲಿ ದೊಡ್ಡ ಪ್ರಮಾಣದ ಹೆಬ್ಬಾವು ಕೃಷಿಯು ಉತ್ತಮವಾಗಿ ನೆಲೆಕಂಡಿದೆ. ಇದು ಮುಖ್ಯವಾಹಿನಿಯ ಕೃಷಿ ವಿಜ್ಞಾನಿಗಳ ಗಮನ ಸೆಳೆದಿಲ್ಲ. ಹೆಬ್ಬಾವು ಸಾಕಣೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂಬುದು ಗಮನಾರ್ಹ.

ಅನೇಕ ದೊಡ್ಡ ದೊಡ್ಡ ಸಾಕಣೆ ಕೇಂದ್ರಗಳು ಸ್ಥಳೀಯ ಗ್ರಾಮಸ್ಥರಿಗೆ ಮರಿ ಹೆಬ್ಬಾವುಗಳ ಸಾಕಣೆಯನ್ನು ಹೊರಗುತ್ತಿಗೆಗೆ ನೀಡುತ್ತಿವೆ. ಸ್ಥಳೀಯರು ತಮ್ಮ ಶಕ್ತ್ಯಾನುಸಾರ ಒಂದು ವರ್ಷದ ಮಟ್ಟಿಗೆ ಅವುಗಳನ್ನು ದೊಡ್ಡದು ಮಾಡಿ, ಬೆಳೆಸಿದ ನಂತರ ವಾಪಸ್​ ಮಾಡುತ್ತಾರೆ. ತನ್ಮೂಲಕ ಸ್ಥಳೀಯರು ಉತ್ತಮ ಆದಾಯ ಮೂಲವನ್ನು ಕಂಡುಕೊಂಡಿದ್ದಾರೆ.

Also Read: ಕಡಿಮೆ ಕೊಬ್ಬು ಎಂದು ಲೇಬಲ್ ಹಾಕಲಾದ ಉತ್ಪನ್ನವು ಆರೋಗ್ಯಕರ ಎಂದು ಹೇಳಲಾಗುವುದಿಲ್ಲ, ಬದಲಿಗೆ ಅದು ಅಪಾಯಕಾರಿ! ಹೇಗೆ?

ಇನ್ನು ಹಾವುಗಳ ಸಂತಾನೋತ್ಪತ್ತಿ ಸಾಮರ್ರ್ಥಯದ ಬಗ್ಗೆ ಹೇಳುವುದಾದರೆ ಅತಿ ಕಡಿಮೆ ಸಮಯದಲ್ಲಿ ಅವು ಸಾಕಷ್ಟು ಸಂತತಿಯನ್ನು ಉತ್ಪಾದಿಸಬಲ್ಲವು. ಉದಾಹರಣೆಗೆ, ಹೆಣ್ಣು ಹೆಬ್ಬಾವು ಒಂದು ವರ್ಷದಲ್ಲಿ 50 ರಿಂದ 100 ಮೊಟ್ಟೆಗಳನ್ನು ಇಡುತ್ತದೆ. ಇದು ಸರಾಸರಿ 0.8 ಕರುಗಳನ್ನು ಉತ್ಪಾದಿಸುವ ಹಸುಗಿಂತ ಹೆಚ್ಚಾಗಿದೆ. ಹಂದಿ ಸರಾಸರಿ 25 ಮರಿಗಳನ್ನು ಹಾಕಬಲ್ಲವು. ಒಟ್ಟಾರೆಯಾಗಿ ಹೆಬ್ಬಾವು ಕೃಷಿಯು ಜಾಗತಿಕ ಆಹಾರ ಅಭದ್ರತೆಗೆ ಪೂರಕವಾಗಿದೆ.

ಸಂಸ್ಕರಿಸಿದಾಗ, ಹೆಬ್ಬಾವಿನ ದೇಹ ತೂಕದಲ್ಲಿ ಸುಮಾರು 82 % ಅಂಶ ಮಾನವ ಬಳಕೆಗೆ ಲಭ್ಯವಾಗುತ್ತದೆ. ಅಧಿಕ ಪ್ರೋಟೀನ್ ಯುಕ್ತ ಮಾಂಸ, ಚರ್ಮೋತ್ಪನ್ನಗಳಿಗಾಗಿ ಅಮೂಲ್ಯವಾದ ಚರ್ಮ ಮತ್ತು ಔಷಧೀಯ ಗುಣದ ಕೊಬ್ಬು (ಹಾವಿನ ಎಣ್ಣೆ) ಮತ್ತು ಹಾವಿನ ಪಿತ್ತರಸ ಸೇರಿದಂತೆ ಹಾವುಗಳು ಬಹೂಪಯೋಗಿ ಉತ್ಪನ್ನಗಳನ್ನು ನೀಡುತ್ತದೆ.

ಬಹುತೇಕ ಹೆಬ್ಬಾವುಗಳು ಕಾಡಿನಲ್ಲಿರುವಾಗ ಕೇವಲ ಮಾಂಸಾಹಾರಿಗಳಾಗಿದ್ದರೂ, ಸಾಕಣೆ ಕೇಂದ್ರಗಳಲ್ಲಿ ಅವು ಸೋಯಾ ಮತ್ತು ಇತರ ತರಕಾರಿ ಪ್ರೋಟಿನ್‌ಗಳನ್ನು ಸಹ ಜೀರ್ಣಿಸಿಕೊಳ್ಳಬಲ್ಲವು. ಇದರಿಂದ ಹಾವಿನ ಮಾಂಸದಲ್ಲಿ 10 % ತರಕಾರಿ ಪ್ರೋಟಿನ್ ಒಳಗೊಂಡಿರುತ್ತದೆ!

ಸರೀಸೃಪಗಳು ಸಸ್ತನಿಗಳಿಗಿಂತ ಕಡಿಮೆ ಹಸಿರುಮನೆ ಅನಿಲಗಳನ್ನು ಉತ್ಪಾದಿಸುತ್ತವೆ ಎಂಬುದು ಗಮನಕ್ಕೆ ಬಂದಿದೆ. ಜಾಗತಿಕವಾಗಿ ಹವಾಮಾನ ಬದಲಾವಣೆ ಪರಿಣಾಮಗಳು ಹದಗೆಡುತ್ತಲೇ ಇರುವುದರಿಂದ ಇದು ಮುಖ್ಯವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಹವಾಮಾನ ಬದಲಾವಣೆ, ಕೊರೊನಾದಂತಹ ಮಾರಕ ರೋಗಗಳು ಮತ್ತು ಕಡಿಮೆಯಾಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳು, ಸಾಂಪ್ರದಾಯಿಕ ಜಾನುವಾರು ಮತ್ತು ಆಹಾರ ಬೆಳೆಗಳ ಮೇಲೆ ಒತ್ತಡವನ್ನು ಹೆಚ್ಚುತ್ತಿದೆ. ಇದೆಲ್ಲಾ, ಕಡಿಮೆ ಆದಾಯದ ದೇಶಗಳಲ್ಲಿ ಈಗಾಗಲೇ ತೀವ್ರವಾದ ಪ್ರೋಟಿನ್ ಕೊರತೆಯಿಂದ ಬಳಲುತ್ತಿರುವ ಅನೇಕ ಜನರ ಮೇಲೆ ಭೀಕರ ಪರಿಣಾಮ ಬೀರುತ್ತಿದೆ ಎಂಬುದು ಶೋಚನೀಯ ಸಂಗತಿ. ಕೃಷಿ ಉತ್ಪನ್ನಗಳ ಕೊರತೆಯು ಆಹಾರ ಭದ್ರತೆಗೆ ತೊಡಕಾಗಿದೆ. ಇವುಗಳ ಸಮ್ಮುಖದಲ್ಲಿ ಪರ್ಯಾಯ ಆಹಾರ ಉತ್ಪನ್ನಗಳಾಗಿ ಹಾವಿನ ಮಾಂಸಕ್ಕೆ ಮನ್ನಣೆ ಮತ್ತು ಬೇಡಿಕೆ ದೊರಕುತ್ತಿರುವುದು ಸಮಾಧಾನಕರವಾಗಿದೆ.

ಅದೇನೇ ಇದ್ದರೂ, ಹೆಬ್ಬಾವು ಕೃಷಿ ಮತ್ತು ಮಾಂಶ ಸೇವನೆಯಿಂದ ಅನೇಕ ಪ್ರಯೋಜನಗಳಿವೆ ಎಂದು ಸಾದರಪಡಿಸಲಾಗಿದೆ. ಆದರೆ ಈ ಪ್ರಯೋಜನಗಳ ಹೊರತಾಗಿಯೂ ಅಮೆರಿಕನ್ನರು, ಆಸ್ಟ್ರೇಲಿಯನ್ನರು ಮತ್ತು ಯುರೋಪಿಯನ್ನರು ವಾಡಿಕೆಯಂತೆ ಪ್ರಾಣಿಗಳನ್ನು ಕೊಂದು ತಿನ್ನುವುದಕ್ಕೆ ಪರ್ಯಾಯವಾಗಿ ಈ ನಿರ್ದಿಷ್ಟ ಮಾಂಸವನ್ನು ಸ್ವೀಕರಿಸುತ್ತಾರಾ? ಎಂಬುದು ಮಿಲಿಯನ್ ಡಾಲರ್​ ಪ್ರಶ್ನೆಯಾಗಿದೆ.

ಈ ಬೆಳವಣಿಗೆಗಳ ಸಮ್ಮುಖದಲ್ಲಿ ಸದ್ಯದಲ್ಲೇ ನಿಮ್ಮ ನೆಚ್ಚಿನ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಪೈಥಾನ್ ಬರ್ಗರ್‌ ಆರ್ಡರ್​​ ಕೊಡುವ ಪ್ರಸಂಗ ಎದುರಾದರೆ ಅಚ್ಚರಿಯೇನೂ ಇಲ್ಲ.

Published On - 5:32 pm, Tue, 11 June 24

ತಾಜಾ ಸುದ್ದಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!