AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಣ್ಣಾ, ನಿಮ್ಮ ಲ್ಯಾಪ್​ಟಾಪ್​ ಕದ್ದಿದ್ದಕ್ಕೆ ಕ್ಷಮಿಸಿ’ ಇಮೇಲ್​ ಕಳಿಸಿದ ಕಳ್ಳ, ಅನುಕಂಪದ ಹೊಳೆ ಹರಿಸುತ್ತಿರುವ ನೆಟ್ಟಿಗರು

Laptop Thief : ಈ ವ್ಯಕ್ತಿಗೆ ಹೇಗೆ ಕಳ್ಳನೆಂದು ಹೇಳುವುದು? ಹೀಗೆ ಮೇಲ್​ ಹಾಕಿದ್ದಾನೆಂದರೆ ಶಿಕ್ಷಣದ ಮಹತ್ವ, ಪ್ರಾಮಾಣಿಕತೆ, ತಿಳಿವಳಿಕೆ ಎಲ್ಲವೂ ಇದೆ ಎನ್ನುತ್ತಿದೆ ನೆಟ್​ಮಂದಿ. ಲ್ಯಾಪ್​ಟಾಪ್​ ಮಾಲೀಕ ಕಳ್ಳನ ಒಳ್ಳೆಯತನದಿಂದ ಸಂದಿಗ್ಧಕ್ಕೆ ಬಿದ್ದಿದ್ದಾನೆ!

‘ಅಣ್ಣಾ, ನಿಮ್ಮ ಲ್ಯಾಪ್​ಟಾಪ್​ ಕದ್ದಿದ್ದಕ್ಕೆ ಕ್ಷಮಿಸಿ’ ಇಮೇಲ್​ ಕಳಿಸಿದ ಕಳ್ಳ, ಅನುಕಂಪದ ಹೊಳೆ ಹರಿಸುತ್ತಿರುವ ನೆಟ್ಟಿಗರು
Thief Sends Email To Apologise For Stealing Man's Laptop
TV9 Web
| Edited By: |

Updated on:Oct 31, 2022 | 11:36 AM

Share

Viral : ನಿನ್ನೆ ಕಳ್ಳನೊಬ್ಬ ನನ್ನ ಲ್ಯಾಪ್​ಟಾಪ್​ ಕದ್ದಿದ್ದಾನೆ. ಅಲ್ಲದೆ, ನನ್ನ ಇಮೇಲ್​ನಿಂದಲೇ ನನಗೆ ಮೇಲ್​ ಕೂಡ ಕಳಿಸಿದ್ದಾನೆ. ಝ್ವೆಲ್ಲಿ ಥಿಕ್ಸೋ ಎಂಬ ಟ್ವಿಟರ್ ಖಾತೆದಾರರು, ಕಳ್ಳ ಕಳಿಸಿದ ಇಮೇಲ್​ನ ಸ್ಕ್ರೀನ್​ ಶಾಟ್ ತೆಗೆದು ಟ್ವೀಟ್ ಮಾಡಿದ್ದಾರೆ; ‘ಅಣ್ಣಾ, ನನಗೆ ಜೀವನ ಸಾಗಿಸಲು ಹಣದ ಅವಶ್ಯಕತೆ ಇದೆ. ಹಾಗಾಗಿ ನಿನ್ನೆ ನಿಮ್ಮ ಲ್ಯಾಪ್​ಟಾಪ್​ ಕದ್ದೆ. ಆದರೆ ನೀವು ಸಂಶೋಧನಾ ಪ್ರಸ್ತಾವನೆಯಲ್ಲಿ ತೊಡಗಿಕೊಂಡಿದ್ದರ ಪುರಾವೆ ಸಿಕ್ಕಿತು. ಆ ಫೈಲ್​ ಅನ್ನು ಅಟ್ಯಾಚ್ ಮಾಡಿದ್ದೇನೆ ಮತ್ತು ಇದಕ್ಕೆ ಸಂಬಂಧಿಸಿದ ಯಾವುದಾದರೂ ಅತ್ಯವಶ್ಯಕವಾದ ಫೈಲ್​ಗಳು ಬೇಕಿದ್ದರೆ ಸೋಮವಾರ 12 ಗಂಟೆಯೊಳಗೆ ತಿಳಿಸಿ. ಏಕೆಂದರೆ ಈ ಲ್ಯಾಪ್​ಟಾಪ್​ ಅನ್ನು ಯಾರಿಗೆ ಮಾರಬೇಕೆನ್ನುವುದು ಈಗಾಗಲೇ ನಿಗದಿಯಾಗಿ ಹೋಗಿದೆ. ಮತ್ತೊಮ್ಮೆ ಕ್ಷಮಿಸಿ ಅಣ್ಣಾ.’

ನೆಟ್ಟಿಗರು ಈ ಕಳ್ಳನ ಬಗ್ಗೆ ಮರುಗಿ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಈ ಕಳ್ಳನಿಗೆ ಇದೇ ಲ್ಯಾಪ್​ಟಾಪ್​ ಅನ್ನೇ ಉಡುಗೊರೆಯಾಗಿ ಯಾಕೆ ನೀಡಬಾರದು? ಎಂದಿದ್ದಾರೆ ಒಬ್ಬರು. ದಯವಿಟ್ಟು ಈ ವ್ಯಕ್ತಿಗೆ ಯಾರಾದರೂ ಕೆಲಸ ನೀಡಲು ಸಾಧ್ಯವೇ? ಎಂದಿದ್ದಾರೆ ಮತ್ತೊಬ್ಬರು. ಇಷ್ಟೆಲ್ಲವನ್ನೂ ಪರಿಶೀಲಿಸಿದ್ದಾನೆ ಮತ್ತು ಶಿಕ್ಷಣದ ಮಹತ್ವದ ಅರಿವೂ ಇದೆ ಎಂದಮೇಲೆ ಅವನಲ್ಲಿ ಪ್ರಾಮಾಣಿಕತೆಯೂ ಇದೆ. ಇದು ನಿಜಕ್ಕೂ ಶ್ಲಾಘನೀಯ. ನಾನು ಇವನಿಗೆ ಲ್ಯಾಪ್​ಟಾಪ್​ನೊಂದಿಗೆ ಒಂದು ಕೆಲಸ ನೀಡಲು ತಯಾರು ಎಂದಿದ್ದಾರೆ ಇನ್ನೂ ಒಬ್ಬರು.

ಈ ವ್ಯಕ್ತಿಗೆ ಹಣದ ಅವಶ್ಯಕತೆ ಇದೆ. ಆದರೆ ಕೆಟ್ಟವರಲ್ಲ. ಸಂಶೋಧನೆಯ ಕಷ್ಟದ ಬಗ್ಗೆ ಅವರಿಗೆ ಅರಿವಿದೆ. ಪ್ರಾಮಾಣಿಕತೆ ಮತ್ತು ಬದ್ಧತೆ ಎರಡೂ ಇರುವ ವ್ಯಕ್ತಿ ಈತ.  ನೈತಿಕತೆ ಕಳೆದುಕೊಂಡಿಲ್ಲ ಎಂದಿದ್ದಾರೆ ಮಗದೊಬ್ಬರು.

ಅಂತೂ ಈ ಪ್ರಕರಣದಿಂದ ಲ್ಯಾಪ್​ಟಾಪ್​ನ ಮಾಲೀಕರು ಸಂದಿಗ್ಧಕ್ಕೆ ಬಿದ್ದಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:28 am, Mon, 31 October 22

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್