AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ

Man‘s Beard Catches Fire : ಈ ವಯಸ್ಸು, ಮನಸ್ಸು ಹೀಗೇ ಹುಚ್ಚುಖೋಡಿಯೇ. ಇಲ್ಲದ್ದನ್ನೆಲ್ಲ ಮೈಮೇಲೆ ಎಳೆದುಕೊಂಡು ಸಾಹಸಕ್ಕೆ ಬೀಳುತ್ತದೆ. ಈಗ ನೋಡಿ ಸ್ಟಂಟ್​ ಮಾಡಲು ಹೋದ ಈ ಯುವಕನ ಪರಿಸ್ಥಿತಿ ಏನಾಗಿದೆ?

ಗಡ್ಡಕ್ಕೆ ಬೆಂಕಿ ಹತ್ತಿದಾಗ! ಸ್ಟಂಟ್​ ಮಾಡಲು ಹೋದ ವ್ಯಕ್ತಿಯ ಈ ಅವಸ್ಥೆ
Man’s Beard Catching Fire as Stunt goes wrong
TV9 Web
| Edited By: ಶ್ರೀದೇವಿ ಕಳಸದ|

Updated on:Oct 31, 2022 | 1:05 PM

Share

Viral Video : ಸಾಹಸ ಪ್ರದರ್ಶನಗಳು ಈಗೀಗ ಸಿನೆಮಾಗಳಿಗಷ್ಟೇ ಸೀಮಿತವಾಗಿಲ್ಲ. ಕಾಲೇಜು ಕಾರ್ಯಕ್ರಮ, ಹಬ್ಬ, ಜಾತ್ರೆ, ಉತ್ಸವಗಳಲ್ಲಿಯೂ ಯುವಕರು ಅತ್ಯುತ್ಸಾಹದಿಂದ ಸಾಹಸ ಪ್ರದರ್ಶನಗಳಲ್ಲಿ ತೊಡಗಿಕೊಳ್ಳಲು ಆರಂಭಿಸಿದ್ದಾರೆ. ಏಕೆಂದರೆ 24 ಗಂಟೆಗಳ ಕಾಲವೂ ಅವರನ್ನು ಸೋಶಿಯಲ್​ ಮೀಡಿಯಾ ಬಾ ಎಂದು ಕರೆಯುತ್ತಿರುವಾಗ ಹೇಗೆ ಸುಮ್ಮನಿದ್ದಾರು? ಕೇವಲ ರೀಲಿಗಾಗಿ ಇಂಥ ಪ್ರಯೋಗ ಮಾಡಹೋದರೆ ಈ ವಿಡಿಯೋದಲ್ಲಿ ಆಗುವ ಗತಿಯೇ ಆಗುವುದು.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Ravi Patidar (@ravipatidar603)

ಎಲ್ಲ ಬಾರಿಯೂ ಇಂಥ ಸಾಹಸ ಪ್ರದರ್ಶನಗಳು ಯಶಸ್ವಿಯಾಗುತ್ತವೆಯೇ? ಅದಕ್ಕೆ ಅದರದೇ ಆದ ನೈಪುಣ್ಯತೆ, ನಿರಂತರ ಅಭ್ಯಾಸ ಬೇಕಾಗುತ್ತದೆ. ರವಿ ಪಾಟೀದಾರ್ ಎನ್ನುವವರು ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋ ಅನ್ನು 12 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಯುವಕನೊಬ್ಬ ಪೆಟ್ರೋಲ್​ ಅನ್ನು ಬಾಯಿಯೊಳಗೆ ಹಾಕಿಕೊಂಡು ನಂತರ ಬೆಂಕಿ ಕಡ್ಡಿ ಗೀರಿ ಪೆಟ್ರೋಲ್​ ಉಗುಳುತ್ತಿದ್ದಂತೆ ಆತನ ಗಡ್ಡಕ್ಕೇ ಬೆಂಕಿ ಹೊತ್ತಿಕೊಂಡುಬಿಟ್ಟಿದೆ!

ಅಲ್ಲಿದ್ದ ಯುವಕರೆಲ್ಲ ಸೇರಿ ಬೆಂಕಿ ನಂದಿಸಿದ್ದಾರೆ. ನೆಟ್ಟಿಗರಂತೂ ಇದನ್ನು ನೋಡಿ ಅಂಜಿದ್ದಾರೆ. ಎಂಥಾ ಸ್ಟಂಟ್​ ಮಾರಾಯಾ ಇದು, ಬೇಕಿತ್ತಾ ಇದೆಲ್ಲಾ? ಎಂದಿದ್ದಾರೆ. ಯಾರೂ ಇಂಥದೆಲ್ಲ ಮಾಡಬೇಡಿ ಇದೆಲ್ಲ ಬಹಳ ಅಪಾಯ ಎಂದಿದ್ದಾರೆ ಇನ್ನೂ ಒಬ್ಬರು. ಈ ವಯಸ್ಸು ಹಾಗಿರುತ್ತದೆ, ಹುಚ್ಚು ಸಾಹಸಕ್ಕೆ ಬೀಳುತ್ತದೆ. ಆದರೆ ಪರಿಣಾಮ? ಹಾಗಾಗಿ ಯಾರೂ ಇಂಥದನ್ನೆಲ್ಲ ಪ್ರಯತ್ನಿಸಬೇಡಿ ಎಂದಿದ್ದಾರೆ ಮತ್ತೊಬ್ಬರು. ಜೀವನ ಬಹಳ ಬೆಲೆಯುಳ್ಳದ್ದು. ಇಂಥದೆಲ್ಲ ಮಾಡಬೇಡಿ ಎಂದಿದ್ದಾರೆ ಇನ್ನೂ ಒಬ್ಬರು. ಹೀಗೆಲ್ಲ ಮಾಡಬೇಡಿ ಅಣ್ಣಾ, ಮನಸಿಗೆ ಬಹಳ ನೋವಾಗತ್ತೆ ಎಂದಿದ್ದಾರೆ ಮಗದೊಬ್ಬರು.

ಬೆಂಕಿ ಒಮ್ಮೆ ಕಸಿದುಕೊಂಡರೆ ಮುಗಿಯಿತು! ಹುಷಾರು

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:00 pm, Mon, 31 October 22

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್