AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?

ಭಾರತದಲ್ಲಿ ಈ ಮಂಚವನ್ನು 10,000 ರೂಪಾಯಿಯ ಒಳಗೆ ಪಡೆಯಬಹುದು. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ ಎಂದು ತಿಳಿದ ನೆಟ್ಟಿಗರಿಗೆ ಆಶ್ಚರ್ಯವಾಗಿದೆ.

Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
Viral News: ನ್ಯೂಜಿಲೆಂಡ್​ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
TV9 Web
| Edited By: |

Updated on: Aug 31, 2021 | 10:22 AM

Share

ಸಾಮಾನ್ಯವಾಗಿ ಎಷ್ಟು ದುಡ್ಡು ಕೊಟ್ಟು ಮಂಚವನ್ನು ಖರೀದಿಸಬಹುದು? ಗಟ್ಟುಮುಟ್ಟಾದ ಮರದಿಂದ ತಯಾರಿಸಿದ ಮಂಚಕ್ಕೆ ಗರಿಷ್ಠ ಅಂದರೂ 10,000 ರೂಪಾಯಿ ಇರಬಹುದು. ಮಂಚದ ಅಳತೆಯನ್ನು ಆಧರಿಸಿ ಬೆಲೆ ಏರಿಳಿತವಾಗುತ್ತದೆ. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ. ನ್ಯೂಜಿಲೆಂಡ್ ಬ್ರಾಂಡ್ ಮಂಚವನ್ನು ವಿಂಟೇಜ್ ಇಂಡಿಯನ್ ಡೇಬೆಡ್ ಎಂದು ಗುರುತಿಸಿದೆ.

ವಿಂಟೇಜ್ ಇಂಡಿಯನ್ ಡೇ ಬೆಡ್ಅನ್ನು ಬ್ರಾಂಡ್​ನ ವೆಬ್ಸೈಟ್​ನಲ್ಲಿ ಪಟ್ಟಿ ಮಾಡಲಾಗಿದೆ. ಮಂಚಕ್ಕೆ ರಿಯಾಯಿತಿಯ ನಂತರ 41,000 ರೂಪಾಯಿ ನಿಗದಿಯಾಗಿದೆ. ಸೆಣಬಿನಿಂದ ತಯಾರಿಸಿದ ಹಾಸಿಗೆಗೆ ಮರದ ಚೌಕಟ್ಟಿಗೆ ನಾಲ್ಕು ಮರದ ಕಾಲುಗಳನ್ನು ಅಳವಡಿಸಿ ಮಂಚವನ್ನು ತಯಾರಿಸಲಾಗಿದೆ. ಭಾರತದಲ್ಲಿ ಈ ಮಂಚವನ್ನು 10,000 ರೂಪಾಯಿಯ ಒಳಗೆ ಪಡೆಯಬಹುದು. ಆದರೆ ನ್ಯೂಜಿಲೆಂಡ್​ನಲ್ಲಿ ಈ ಮಂಚಕ್ಕೆ 41,000 ರೂಪಾಯಿ ಎಂದು ತಿಳಿದ ನೆಟ್ಟಿಗರಿಗೆ ಆಶ್ಚರ್ಯವಾಗಿದೆ.

ನ್ಯೂಜಿಲೆಂಡ್​ ಬ್ರಾಂಡ್​ ಅನಾಬೆಲ್ಲೆ, ಸಾಮಾನ್ಯವಾಗಿ ಭಾರತೀಯರು ಬಳಸುವ ಮರದ ಮಂಚವನ್ನು ವಿಂಟೇಜ್ ಇಂಡಿಯನ್ ಡೇ ಬೆಡ್ ಎಂದು ಗುರುತಿಸಿದೆ. ದೈನಂದಿನ ಬಳಕೆಯ ವಸ್ತುವನ್ನು ಇಷ್ಟು ದೊಡ್ಡ ಬೆಲೆಗೆ ಮಾರಾಟ ಮಾಡುವುದು ಇದೇ ಮೊದಲಲ್ಲ. ಕಳೆದ ವಾರ ಐಷಾರಾಮಿ ಫ್ಯಾಷನ್ ಬ್ರಾಂಡ್​ ಬೆಲೆನ್ಸಿಯಾಗಾ ಶಾಪಿಂಗ್ ಬ್ಯಾಗ್ಅನ್ನು 1.5 ಲಕ್ಷಕ್ಕೆ ಮಾರಾಟ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು.

ಇದನ್ನೂ ಓದಿ:

Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!

Viral News: ಹೊಟೆಲ್​ನಲ್ಲಿ ಆರ್ಡರ್​​ ಮಾಡಿದ ಊಟದ​ ಬೆಲೆ​ ಬರೋಬ್ಬರಿ 3,000 ರೂಪಾಯಿ ಎಂದು ತಿಳಿದು ಮಹಿಳೆ ಕಂಗಾಲು!

(This charpai is being sold as vintage Indian daybed for rs 41,000 A New Zealand brand named ANNABELLE)

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ