AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ ಏಳು ವರ್ಷಗಳ ಬಳಿಕ ಅನಿರೀಕ್ಷಿತ ಭೇಟಿಯಾದ ಸ್ನೇಹಿತರು

ಸ್ನೇಹ ಎಂದರೇನೇ ಹಾಗೆ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಜೊತೆಯಾಗಿ ನಿಲ್ಲುವುದು. ಈ ಎರಡಕ್ಷರದ ಸ್ನೇಹವು ಬೆಲೆ ಕಟ್ಟಲಾಗದ ಅದ್ಭುತ ಸಂಪತ್ತು. ಕೆಲವೊಮ್ಮೆ ಎಷ್ಟೋ ವರ್ಷಗಳ ಬಳಿಕ ಸ್ನೇಹಿತರು ಸಿಕ್ಕರೆ ಆ ಖುಷಿಗೆ ಪಾರಾವೇ ಇರುವುದಿಲ್ಲ. ಇದೀಗ ಇಂತಹದೊಂದು ಅಪರೂಪದದ ವಿಡಿಯೋವೊಂದು ವೈರಲ್ ಆಗಿದೆ. ಇದೀಗ ವೈರಲ್ ವಿಡಿಯೋದಲ್ಲಿ ಏಳು ವರ್ಷಗಳ ಬಳಿಕ ಏಳ ಇಬ್ಬರು ಸ್ನೇಹಿತರು ಅನಿರೀಕ್ಷಿತವಾಗಿ ಭೇಟಿಯಾಗಿದ್ದು, ಅವರ ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

Viral : ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ ಏಳು ವರ್ಷಗಳ ಬಳಿಕ ಅನಿರೀಕ್ಷಿತ ಭೇಟಿಯಾದ ಸ್ನೇಹಿತರು
ವೈರಲ್​​ ವಿಡಿಯೋ Image Credit source: Instagram
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2025 | 12:33 PM

ಬದುಕಿನ ಜಂಜಾಟದ ನಡುವೆ ಕಳೆದುಹೋದದ್ದು ತಿಳಿಯುವುದೇ ಇಲ್ಲ. ಕಾಲೇಜು ಹಾಗೂ ಶಾಲಾ ದಿನಗಳಲ್ಲಿ ಸ್ನೇಹಿತರ ಜೊತೆಗೆ ಸುತ್ತುತ್ತಿದ್ದರೂ ಉದ್ಯೋಗಕ್ಕೆ ತೆರಳಿದ ಬಳಿಕ ತಮ್ಮ ಹಳೆಯ ಅಥವಾ ಆತ್ಮೀಯ ಸ್ನೇಹಿತರ (friends) ನ್ನು ಭೇಟಿಯಾಗುವುದೇ ಅಪರೂಪವಾಗುತ್ತದೆ. ಅದರಲ್ಲಿಯೂ ಕೆಲವು ಸ್ನೇಹಿತರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವುದು ತಿಳಿಯುವುದೇ ಇಲ್ಲ. ಆದರೆ ಸಭೆ ಸಮಾರಂಭ ಅಥವಾ ಇನ್ಯಾವುದೋ ಸ್ಥಳದಲ್ಲಿ ಅನಿರೀಕ್ಷಿತವಾಗಿ ಆ ಸ್ನೇಹಿತರನ್ನು ಭೇಟಿಯಾಗುವುದಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸ್ನೇಹಿತರಿಬ್ಬರೂ ಏಳು ವರ್ಷಗಳ ಬಳಿಕ ಸ್ಥಳೀಯ ಉಪಹಾರ ಗೃಹ (restaurant) ವೊಂದರಲ್ಲಿ ಭೇಟಿಯಾಗಿದ್ದಾರೆ. ಆದರೆ ಅವರಿಬ್ಬರಿಗೂ ಕೂಡ ತಮ್ಮ ಹಳೆಯ ಸ್ನೇಹಿತ ಎನ್ನುವುದು ಗೊತ್ತೇ ಇಲ್ಲದಿರುವುದು ನಿಜಕ್ಕೂ ಅಚ್ಚರಿಯೆನಿಸುವ ವಿಚಾರವಾಗಿದೆ. ಈ ಸ್ನೇಹಿತರಿಬ್ಬರ ಅನಿರೀಕ್ಷಿತ ಭೇಟಿಯ ವಿಡಿಯೋ (video) ವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

indiawithoutpolitics ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಹೆಲ್ಮೆಟ್ ಧರಿಸಿದ್ದು, ಆತನ ಕಡೆಗೆ ವ್ಯಕ್ತಿಯೊಬ್ಬನು ನಡೆದು ಬಂದು ಹೆಸರು ಮತ್ತು ಕೆಲಸದ ಬಗ್ಗೆ ಕೇಳಿದ್ದಾನೆ. ಈ ವೇಳೆಯಲ್ಲಿ ಆ ವ್ಯಕ್ತಿಯೂ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಆ ಬಳಿಕ ಹೆಸರು ಕೇಳುತ್ತಿದ್ದಂತೆ ತನ್ನ ಸ್ನೇಹಿತ ಎಂದು ತಿಳಿದಿದೆ. ಏಳು ವರ್ಷಗಳ ಬಳಿಕ ಅನಿರೀಕ್ಷಿತವಾಗಿ ಭೇಟಿಯಾದ ಇಬ್ಬರೂ ಸ್ನೇಹಿತರು ಪರಸ್ಪರ ತಬ್ಬಿಕೊಂಡಿದ್ದು, ಅವರ ಖುಷಿಗೆ ಪಾರಾವೇ ಇಲ್ಲದಂತಾಗಿದೆ.

ಇದನ್ನೂ ಓದಿ
Image
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
Image
ಅಬ್ಬಬಾ! ಸೀರೆ ಧರಿಸಿ ಜಿಮ್ ಗೆ ಬಂದ ಮಹಿಳೆ, ಮಾಡಿದ ಕಸರತ್ತು ನೋಡಿ 
Image
ಪ್ರಿಯಕರನ್ನು ಟ್ರಂಕ್​​ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ,ಮುಂದೇನಾಯ್ತು ನೋಡಿ
Image
ಮದುವೆ ಮಂಟಪದಿಂದ ಅರ್ಧಕ್ಕೆ ಎದ್ದು ಹೋದ ಮದುಮಗ

ಇದನ್ನೂ ಓದಿ :ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಲೆಫ್ಟಿನೆಂಟ್ ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಸ್ನೇಹವೆಂದರೇನೇ ಹಾಗೆ, ನೀವು ಎಷ್ಟೇ ದೂರವಿದ್ದರೂ ಶುದ್ಧ ಸ್ನೇಹವು ಹಾಗೆಯೇ ಇರುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ಹುಡುಗರು ತಮ್ಮ ಸ್ನೇಹಿತರನ್ನು ಭೇಟಿಯಾದಾಗ ತಮ್ಮ ಹಳೆಯ ನೆನಪುಗಳನ್ನು ಮರೆಯದೇ ಮೆಲುಕು ಹಾಕುತ್ತಾರೆ ಎಂದಿದ್ದಾರೆ. ಇನ್ನೊಬ್ಬರು, ‘ದೂರವಿದ್ದರೇನು ಇನ್ನು, ವರ್ಷಗಳ ಬಳಿಕ ಭೇಟಿಯಾದಾಗ ಆ ಮಾತು, ಬಾಂಧವ್ಯ, ಆ ಸಂಭಾಷಣೆಯೂ ಹಾಗೆ ಉಳಿದಿರುತ್ತದೆ. ಸ್ನೇಹವಾಗಲಿ ಸ್ನೇಹಿತ ನಡೆ ನುಡಿಯೂ ಬದಲಾಗದೇ ಹಾಗೆ ಉಳಿದಿದ್ದರೆ ಅದಕ್ಕಿಂತ ಬೇರೆ ಏನು ಬೇಕಿಲ್ಲ’ ಎಂದು ಹೇಳಿದ್ದಾರೆ. ಇನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸುವ ಮೂಲಕ ಇವರಿಬ್ಬರ ಅನಿರೀಕ್ಷಿತ ಭೇಟಿಯನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ರಾಕೇಶ್ ಪೂಜಾರಿ ನೋಡಲು ರಿಷಬ್ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ