AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ

Baghpat Chacha: ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್​ಪತ್​ನಲ್ಲಿ​ ಚಾಟ್ ಮಾರಾಟಗಾರರಾಗಿದ್ದಾರೆ.

ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ
ಚಾಚಾ ಮೀಮ್
ರಶ್ಮಿ ಕಲ್ಲಕಟ್ಟ
| Edited By: |

Updated on: Feb 23, 2021 | 8:19 PM

Share

ಉತ್ತರ ಪ್ರದೇಶದ ಬಾಗ್​ಪತ್ ರಸ್ತೆಯಲ್ಲಿ ಚಾಟ್ ಮಾರುವವರ ನಡುವೆ ನಡೆದ ಮಾರಾಮಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪರಸ್ಪರ ಕೋಲುಗಳಿಂದ ಬಾರಿಸುತ್ತಾ, ಕಾಲು ಹಿಡಿದು ಎಳೆದಾಡಿ ಹೊಡೆಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಈ ವಿಡಿಯೊದಲ್ಲಿ ಕೆಂಪು ಬಣ್ಣದ ಕೂದಲಿರುವ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಬಡಿಗೆಯಿಂದ ಬಡಿಯುತ್ತಿರುವುದು ಕಾಣುತ್ತದೆ. ಸ್ಪಲ್ಪ ಹೊತ್ತಿನ ನಂತರ ಅವರು ನೆಲಕ್ಕೆ ಬಿದ್ದಾಗ ಅಲ್ಲಿಂದಲೇ ಇನ್ನೊಬ್ಬನಿಗೆ ಏಟು ನೀಡಿ ಮತ್ತೆ ಎದ್ದು ನಿಂತು ಜಗಳ ಮುಂದುವರಿಸುತ್ತಾರೆ. ಹಾಡಹಗಲೇ ನಡೆದ ಈ ಬೀದಿಜಗಳದ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೆಂಪುಗೂದಲಿನ ಆ ವ್ಯಕ್ತಿ ಮೀಮ್ ಗೆ ಆಹಾರವಾಗಿದ್ದಾರೆ. ನೆಟ್ಟಿಗರು ಈ ವ್ಯಕ್ತಿಯನ್ನು ಚಾಚಾ (ಮಾವ) ಎಂದು ಕರೆದು ತರಹೇವಾರಿ ಮೀಮ್​ಗಳನ್ನು ಹರಿಬಿಟ್ಟಿದ್ದಾರೆ.

ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್​ಪತ್​ನಲ್ಲಿ​ ಚಾಟ್ ಮಾರಾಟಗಾರರಾಗಿದ್ದಾರೆ. ಪೊಲೀಸರ ಪ್ರಕಾರ ಬಾಗ್​ಪತ್​ನ ಬರೂತ್ ಪ್ರದೇಶದಲ್ಲಿರುವ ಚಾಟ್ ಮಾರುವವರ ಎರಡು ಗುಂಪುಗಳ ನಡುವೆ ಈ ಜಗಳ ನಡೆದಿದೆ. ಈ ಬೀದಿ ಜಗಳದಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಜನರ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಲ್ಲಿ ಚಾಚಾ ಮೀಮ್

ಯಾರು ಈ ಚಾಚಾ ? ಎಎನ್ಐ ಸುದ್ದಿಸಂಸ್ಥೆ ಪ್ರಕಾರ 40 ವರ್ಷಗಳಿಂದ ಹರಿಂದರ್ ಚಾಟ್ ಮಾರಾಟಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವ್ಯಾಪಾರ ಕುಸಿದಿದೆ. ಇನ್ನೊಂದು ಕಡೆಯಲ್ಲಿರುವ ಚಾಟ್ ಮಾರಾಟಗಾರರು ತಮ್ಮ ಗ್ರಾಹಕರನ್ನು ಕಸಿದುಕೊಂಡಿದ್ದಾರೆ ಎಂದು ಚಾಟ್ ಮಾರಾಟಗಾರರು ಆರೋಪಿಸಿದ್ದರು. ಇನ್ನೊಂದು ತಂಡದವರು ನಮ್ಮ ಚಾಟ್ ಮಾರಾಟವಾಗದಂತೆ ಮಾಡಿ ಗ್ರಾಹಕರನ್ನು ತಮ್ಮಿಂದ ದೂರ ಮಾಡಿದ್ದಾರೆ ಎಂದು ಹರಿಂದರ್ ಹೇಳಿದ್ದಾರೆ.

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!