AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ

Baghpat Chacha: ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್​ಪತ್​ನಲ್ಲಿ​ ಚಾಟ್ ಮಾರಾಟಗಾರರಾಗಿದ್ದಾರೆ.

ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ
ಚಾಚಾ ಮೀಮ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ| Edited By: |

Updated on: Feb 23, 2021 | 8:19 PM

Share

ಉತ್ತರ ಪ್ರದೇಶದ ಬಾಗ್​ಪತ್ ರಸ್ತೆಯಲ್ಲಿ ಚಾಟ್ ಮಾರುವವರ ನಡುವೆ ನಡೆದ ಮಾರಾಮಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪರಸ್ಪರ ಕೋಲುಗಳಿಂದ ಬಾರಿಸುತ್ತಾ, ಕಾಲು ಹಿಡಿದು ಎಳೆದಾಡಿ ಹೊಡೆಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಈ ವಿಡಿಯೊದಲ್ಲಿ ಕೆಂಪು ಬಣ್ಣದ ಕೂದಲಿರುವ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಬಡಿಗೆಯಿಂದ ಬಡಿಯುತ್ತಿರುವುದು ಕಾಣುತ್ತದೆ. ಸ್ಪಲ್ಪ ಹೊತ್ತಿನ ನಂತರ ಅವರು ನೆಲಕ್ಕೆ ಬಿದ್ದಾಗ ಅಲ್ಲಿಂದಲೇ ಇನ್ನೊಬ್ಬನಿಗೆ ಏಟು ನೀಡಿ ಮತ್ತೆ ಎದ್ದು ನಿಂತು ಜಗಳ ಮುಂದುವರಿಸುತ್ತಾರೆ. ಹಾಡಹಗಲೇ ನಡೆದ ಈ ಬೀದಿಜಗಳದ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೆಂಪುಗೂದಲಿನ ಆ ವ್ಯಕ್ತಿ ಮೀಮ್ ಗೆ ಆಹಾರವಾಗಿದ್ದಾರೆ. ನೆಟ್ಟಿಗರು ಈ ವ್ಯಕ್ತಿಯನ್ನು ಚಾಚಾ (ಮಾವ) ಎಂದು ಕರೆದು ತರಹೇವಾರಿ ಮೀಮ್​ಗಳನ್ನು ಹರಿಬಿಟ್ಟಿದ್ದಾರೆ.

ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್​ಪತ್​ನಲ್ಲಿ​ ಚಾಟ್ ಮಾರಾಟಗಾರರಾಗಿದ್ದಾರೆ. ಪೊಲೀಸರ ಪ್ರಕಾರ ಬಾಗ್​ಪತ್​ನ ಬರೂತ್ ಪ್ರದೇಶದಲ್ಲಿರುವ ಚಾಟ್ ಮಾರುವವರ ಎರಡು ಗುಂಪುಗಳ ನಡುವೆ ಈ ಜಗಳ ನಡೆದಿದೆ. ಈ ಬೀದಿ ಜಗಳದಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಜನರ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಲ್ಲಿ ಚಾಚಾ ಮೀಮ್

ಯಾರು ಈ ಚಾಚಾ ? ಎಎನ್ಐ ಸುದ್ದಿಸಂಸ್ಥೆ ಪ್ರಕಾರ 40 ವರ್ಷಗಳಿಂದ ಹರಿಂದರ್ ಚಾಟ್ ಮಾರಾಟಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವ್ಯಾಪಾರ ಕುಸಿದಿದೆ. ಇನ್ನೊಂದು ಕಡೆಯಲ್ಲಿರುವ ಚಾಟ್ ಮಾರಾಟಗಾರರು ತಮ್ಮ ಗ್ರಾಹಕರನ್ನು ಕಸಿದುಕೊಂಡಿದ್ದಾರೆ ಎಂದು ಚಾಟ್ ಮಾರಾಟಗಾರರು ಆರೋಪಿಸಿದ್ದರು. ಇನ್ನೊಂದು ತಂಡದವರು ನಮ್ಮ ಚಾಟ್ ಮಾರಾಟವಾಗದಂತೆ ಮಾಡಿ ಗ್ರಾಹಕರನ್ನು ತಮ್ಮಿಂದ ದೂರ ಮಾಡಿದ್ದಾರೆ ಎಂದು ಹರಿಂದರ್ ಹೇಳಿದ್ದಾರೆ.

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್