AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಸರು ಗದ್ದೆಯಲ್ಲಿ  ಕ್ರಿಕೆಟ್ ಆಡುತ್ತಾ  ಮಜಾ ಉಡಾಯಿಸಿದ ಹೈಕ್ಲು

ಕ್ರಿಕೆಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಈ ಯುವಕರು ನಮಗೆ ಕ್ರಿಕೆಟ್ ಆಡಲು  ವಿಶಾಲವಾದ ಮೈದಾನವೇ ಬೇಕೆಂದೇನಿಲ್ಲ ಎನ್ನುತ್ತಾ, ಮನೆಯ ಅಂಗಲದಲ್ಲಿ, ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಾ ರಜಾ ದಿನವನ್ನು ಕಳೆಯುತ್ತಾರೆ. ಆದರೆ ಇಲ್ಲೊಂದು ಹುಡುಗರ  ತಂಡ ಸ್ವಲ್ಪ ಡಿಫ್ರೆಂಟ್ ಆಗಿ ಕೆಸರಿನಲ್ಲಿ ಕ್ರಿಕೆಟ್ ಆಡಿ ಮಜಾ ಉಡಾಯಿಸಿದ್ದಾರೆ. ಈ ವಿಡಿಯೋ ಇದೀಗ ಇದೀಗ ಸಖತ್ ವೈರಲ್ ಆಗುತ್ತಿದೆ.

Viral Video: ಕೆಸರು ಗದ್ದೆಯಲ್ಲಿ  ಕ್ರಿಕೆಟ್ ಆಡುತ್ತಾ  ಮಜಾ ಉಡಾಯಿಸಿದ ಹೈಕ್ಲು
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Mar 11, 2024 | 4:41 PM

Share

ಕ್ರಿಕೆಟ್ ಭಾರತೀಯರ ನೆಚ್ಚಿನ ಕ್ರೀಡೆ ಅಂದ್ರೆ ತಪ್ಪಾಗಲಾರದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಕ್ರಿಕೆಟ್ ಅಭಿಮಾನಿಗಳೇ. ಹೌದು ಈ ಆಟವನ್ನು ಭಾರತದ ಗಲ್ಲಿ ಗಲ್ಲಿಗಳಲ್ಲೂ ಆಡಲಾಗುತ್ತದೆ. ರಜಾ ದಿನ ಬಂತೆಂದರೆ ಸಾಕು ಈ  ಹುಡುಗರು ತಮ್ಮದೇ ಗುಂಪು ಕಟ್ಟಿಕೊಂಡಿ ಬ್ಯಾಟ್, ವಿಕೆಟ್, ಚೆಂಡನ್ನು ಹಿಡಿದುಕೊಂಡು ಬೆಳ್ಳಂಬೆಳಗ್ಗೆಯೇ ಕ್ರಿಕೆಟ್ ಆಡಲು ಹೋಗುತ್ತಾರೆ. ಗಲ್ಲಿ ಕ್ರಿಕೆಟ್ ಆಡಲು ಇವರುಗಳಿಗೆ ವಿಶಾಲವಾದ ಮೈದಾನವೇ ಬೇಕೆಂದಿಲ್ಲ. ಮನೆಯ ಅಂಗಳ, ಖಾಲಿ ಗದ್ದೆ, ರಸ್ತೆಯಲ್ಲೂ ಕ್ರಿಕೆಟ್ ಆಡಿ ಎಂಜಾಯ್ ಮಾಡುತ್ತಾರೆ. ನೀವು ಕೂಡಾ ಇದೇ ರೀತಿ ಖಾಲಿ ರಸ್ತೆಯಲ್ಲಿ ಮನೆಯಂಗಳದಲ್ಲಿ  ಕ್ರಿಕೆಟ್ ಆಡಿರಬಹುದಲ್ವಾ.  ಆದ್ರೆ ನೀವು ಎಂದಾದರೂ ಕೆಸರಿನಲ್ಲಿ ಕ್ರಿಕೆಟ್ ಆಡಿದ್ದೀರಾ? ಅರೇ ಕೆಸರು ಗದ್ದೆಯಲ್ಲಿ ಆಟ ಆಡಿ ಮೈಯೆಲ್ಲಾ ಮಣ್ಣು ಮಾಡ್ಕೊಂಡು ಹೋದ್ರೆ ಅಮ್ಮನ ಕೈಯಿಂದ ಗ್ಯಾರಂಟಿ ಒದೆ ಬೀಳುತ್ತೆ ಅಂತ ನೀವು ಯೋಚ್ನೆ ಮಾಡ್ಬೋದಲ್ವಾ.  ಆದರೆ ಇಲ್ಲೊಂದು ಹುಡುಗರ ತಂಡ ಕೆಸರು ಆದ್ರೆ ಏನಂತೆ, ಆಟವಾಡುತ್ತಾ ಎಂಜಾಯ್ ಮಾಡಿದ್ರೆ ಸಾಕಪ್ಪ ಎನ್ನುತ್ತಾ ಕೆಸರು ಗದ್ದೆಯಲ್ಲಿ ಕ್ರಿಕೆಟ್ ಆಡಿ, ಮಜಾ ಉಡಾಯಿಸಿದ್ದಾರೆ. ಈ ಉಲ್ಲಾಸಭರಿತ ವಿಡಿಯೋ ಸಾಮಾಜಿಕ  ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಹುಡುಗರ ತಂಡವೊಂದು ಮೈಯೆಲ್ಲಾ ಕೆಸರು ಅಂಟಿಸಿಕೊಂಡು, ಅದೇ ಕೆಸರಿನಲ್ಲಿ ಎಂಜಾಯ್ ಮಾಡುತ್ತಾ ಕ್ರಿಕೆಟ್ ಆಡುತ್ತಿರುವ ದೃಶ್ಯವನ್ನು ಕಾಣಬಹುದು. @RVCJ_FB ಎಂಬ ಹಸರಿನ X ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಕ್ರಿಕೆಟ್ ಹುಚ್ಚು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ಅಗುತ್ತಿರುವ ವಿಡಿಯೋದಲ್ಲಿ ಆಡಲು ಯಾವ ಜಾಗ ಆದ್ರೆ ಏನು ಎನ್ನುತ್ತಾ ಅಮ್ಮನ ಕೈಯಿಂದ ಪೆಟ್ಟು ತಿಂದ್ರು ಪರವಾಗಿಲ್ಲ ಎಂದು ಕೆಸರಿನಲ್ಲಿಯೇ ನಿಂತು ಹುಡುಗರು ಕ್ರಿಕೆಟ್ ಆಟ ಆಡಿದ್ದಾರೆ. ಕೆಸರಿನಲ್ಲಿ ಒಂದು ಬದಿಯಲ್ಲಿ ವಿಕೇಟ್ ಕೀಪರ್ ಮತ್ತು ಬ್ಯಾಟ್ಸ್ಮ್ಯಾನ್ ಇದ್ದರೆ, ಇನ್ನೊಂದು ಬದಿಯಲ್ಲಿ ಬೌಲರ್ ನಿಂತಿರುವುದನ್ನು ಕಾಣಬಹುದು. ಈ ಎಲ್ಲಾ ಹುಡುಗರು  ಕೆಸರಿನಲ್ಲಿ ಒದ್ದಾಡಿ ಮೈಯೆಲ್ಲಾ ಕೆಸರು ಮಾಡಿಕೊಂಡು, ಬಹಳ ಎಂಜಾಯ್ ಮಾಡುತ್ತ ಕ್ರಿಕೆಟ್ ಆಡುತ್ತಿರುವ ಸುಂದರ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇದಪ್ಪಾ ಟೈಮ್ ಮ್ಯಾನೆಜ್ಮೆಂಟ್ ಅಂದ್ರೆ; ಟ್ರಾಫಿಕ್​​ನಲ್ಲಿ ಬಟಾಣಿ ಸಿಪ್ಪೆ ಬಿಡಿಸಿದ ಮಹಿಳೆ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಿಶ್ವದ ಅತ್ಯಂತ ಸಂತೋಷದ ಸ್ಥಳವಿದುʼ ಎಂದು ಕಾಮೆಂಟ್ ಮಾಡಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಇದನ್ನು ನೋಡಿ ಕ್ರಿಕೆಟ್ ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನಿಜವಾಗಿಯೂ ಇದು ಕ್ರಿಕೆಟ್ ಹುಚ್ಚು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ