AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಗಾಳಿಗೆ ಸಿಲುಕಿದ ಸ್ಪೈಸ್​ಜೆಟ್​​​ ವಿಮಾನ ಅಲುಗಾಡಿದ ಭಯಾನಕ ದೃಶ್ಯ; ಚೆಲ್ಲಾಪಿಲ್ಲಿಯಾದ ವಸ್ತುಗಳು, ಪ್ರಯಾಣಿಕರು ಕಂಗಾಲು

ಘಟನೆಯಲ್ಲಿ 14 ಪ್ರಯಾಣಿಕರು, ಮೂವರು ಕ್ಯಾಬಿನ್​ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರ ತಲೆಗೆ ಗಂಭೀರಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ಹಾಕಿಸಲಾಗಿದೆ.

Video: ಗಾಳಿಗೆ ಸಿಲುಕಿದ ಸ್ಪೈಸ್​ಜೆಟ್​​​ ವಿಮಾನ ಅಲುಗಾಡಿದ ಭಯಾನಕ ದೃಶ್ಯ; ಚೆಲ್ಲಾಪಿಲ್ಲಿಯಾದ ವಸ್ತುಗಳು, ಪ್ರಯಾಣಿಕರು ಕಂಗಾಲು
ಸ್ಪೈಸ್​ಜೆಟ್​​ನ ಚಿತ್ರಣ
TV9 Web
| Edited By: |

Updated on:May 02, 2022 | 12:20 PM

Share

ಮುಂಬೈನಿಂದ, ಪಶ್ಚಿಮಬಂಗಾಳದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್​ ಜೆಟ್​ ವಿಮಾನ ಭಾನುವಾರ ಸಂಜೆ ಬಹುದೊಡ್ಡ ದುರಂತದಿಂದ ಪಾರಾಗಿದೆ. ಪೈಲಟ್​​ಗಳ ಸಮಯಪ್ರಜ್ಞೆಯಿಂದ 188 ಮಂದಿಯ ಪ್ರಾಣ ಉಳಿದಿದೆ. ದುರ್ಗಾಪುರ ಏರ್​​​ಪೋರ್ಟ್​ನಲ್ಲಿ ಲ್ಯಾಂಡ್​ ಆಗುವಾಗ ಸುಂಟರಗಾಳಿಯ ಪ್ರಭಾವಕ್ಕೆ ಸಿಲುಕಿ ವಿಮಾನ ತೀವ್ರ ಕುಲುಕಾಟಕ್ಕೆ ಒಳಗಾಯಿತು. ಗಾಳಿಯಿಂದ ಸಿಕ್ಕಾಪಟೆ ಅಲುಗಾಡಿದ ವಿಮಾನದ ಒಳಗಿನ ದೃಶ್ಯದ ವಿಡಿಯೋ ವೈರಲ್ ಆಗಿದೆ. ವಿಮಾನದೊಳಗೆ ಇದ್ದ ಪ್ರಯಾಣಿಕರಿಗೆ ಸೇರಿದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕ್ಯಾಬಿನ್ ಬ್ಯಾಗೇಜ್​ ಪ್ರಯಾಣಿಕರ ಮೇಲೆ ಕುಸಿದಿದೆ. ಆಕ್ಸಿಜನ್​ ಮಾಸ್ಕ್​ಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ 14 ಪ್ರಯಾಣಿಕರು, ಮೂವರು ಕ್ಯಾಬಿನ್​ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದಾರೆ. ಅದರಲ್ಲಿ ಕೆಲವರ ತಲೆಗೆ ಗಂಭೀರಸ್ವರೂಪದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಹೊಲಿಗೆ ಹಾಕಿಸಲಾಗಿದೆ. ಇನ್ನೊಬ್ಬ ಪ್ರಯಾಣಿಕನಿಗೆ ಬೆನ್ನುಮೂಳೆಗೆ ಹೊಡೆತ ಬಿದ್ದಿದೆ​ ಎಂದು ವಾಯುಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ. ಹಾಗೇ, ಗಾಯಗೊಂಡ ಎಲ್ಲರಿಗೂ ದುರ್ಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸ್ಪೈಸ್​ಜೆಟ್​ ವಕ್ತಾರ ಮಾಹಿತಿ ನೀಡಿದ್ದಾರೆ. ಇನ್ನು ತಲೆಗೆ ಬ್ಯಾಂಡೇಜ್​​ ಹಾಕಿದ್ದ ವ್ಯಕ್ತಿಯೊಬ್ಬ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕಾರು ಅಪಘಾತವಾಗುವ ಸಂದರ್ಭದಲ್ಲಿ ಯಾವ ಸನ್ನಿವೇಶ ಇರುತ್ತದೆಯೋ, ಅದರ ಎರಡು ಪಟ್ಟು ಭೀಕರ ಸನ್ನಿವೇಶ ವಿಮಾನದಲ್ಲಿ ಇತ್ತು ಎಂದಿದ್ದಾರೆ.

ಸ್ಪೈಸ್​ಜೆಟ್​​ನ ಬೋಯಿಂಗ್​ ಬಿ737 ನ SG-945 ವಿಮಾನ ಮೇ 1ರಂದು ಮುಂಬೈನಿಂದ ದುರ್ಗಾಪುರಕ್ಕೆ ಹೋಗುತ್ತಿತ್ತು.  ದುರ್ಗಾಪುರದಲ್ಲಿ ಲ್ಯಾಂಡ್ ಆಗುವ ಹೊತ್ತಿಗೆ ಗಾಳಿಯಿಂದಾಗಿ ವಿಮಾನ ಅಲುಗಾಡಲು ಶುರುವಾಯಿತು. ಈ ಘಟನೆಯಲ್ಲಿ ಸುಮಾರು 12 ಪ್ರಯಾಣಿಕರಿಗೆ ಗಾಯವಾಗಿದೆ. ಗಗನಸಖಿಯರು ಸಮಾಧಾನ ಹೇಳುತ್ತಿದ್ದರೂ, ಜನರು ತೀವ್ರ ಭಯಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Akshaya Tritiya Gold Purchase: ಅಕ್ಷಯ ತೃತೀಯಕ್ಕೆ ಭೌತಿಕ ಚಿನ್ನ ಖರೀದಿ ಉತ್ತಮವೋ ಅಥವಾ ಗೋಲ್ಡ್ ಇಟಿಎಫ್?

Published On - 12:13 pm, Mon, 2 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ