AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಮೆರಿಕ; ವಿಟಮಿನ್ ಗುಳಿಗೆಯ ಬದಲಾಗಿ ಗಂಡನ ಆ್ಯಪಲ್ ಏರ್​ಪಾಡ್​ ನುಂಗಿದ ಮಹಿಳೆ

Apple Airpod : ಸ್ನೇಹಿತರೊಂದಿಗೆ ಬೆಳಗಿನ ವಿಹಾರಕ್ಕೆ ಹೋದ ಈ ಮಹಿಳೆ ವಿಟಮಿನ್ ಗುಳಿಗೆ ಬದಲಾಗಿ ತನ್ನ ಗಂಡನ ಏರ್​ಪಾಡ್ ನುಂಗಿದ್ದಾಳೆ. ನುಂಗುತ್ತಿರುವಾಗ ಆಕೆಗೆ ಅನುಮಾನವೂ ಬಂದಿದೆ, ಯಾಕೆ ಗುಳಿಗೆ ನಿಧಾನ ಒಳಹೋಗುತ್ತಿದೆ ಎಂದು ಅಂದುಕೊಳ್ಳುತ್ತ ತನ್ನ ಕೈಯ್ಯೊಳಗಿನದನ್ನು ನೋಡಿಕೊಂಡಿದ್ದಾಳೆ. ಕೈಯಲ್ಲಿರುವ ಗುಳಿಗೆ ಹಾಗೇ ಇದ್ದು, ಒಳಹೋಗಿರುವುದು ಏರ್​ಪಾಡ್ ಎಂಬುದು ಅರಿವಿಗೆ ಬಂದಿದೆ.

Viral Video: ಅಮೆರಿಕ; ವಿಟಮಿನ್ ಗುಳಿಗೆಯ ಬದಲಾಗಿ ಗಂಡನ ಆ್ಯಪಲ್ ಏರ್​ಪಾಡ್​ ನುಂಗಿದ ಮಹಿಳೆ
ಸಾಂದರ್ಭಿಕ ಚಿತ್ರ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Sep 13, 2023 | 5:45 PM

Share

America: ಅಮೆರಿಕದ ಮಹಿಳೆಯೊಬ್ಬಳು ವಿಟಮಿನ್​ ಗುಳಿಗೆ ಎಂದು ಗಂಡನ ಆ್ಯಪಲ್​ ಏರ್​ಪಾಡ್​ (Apple Airpod) ಅನ್ನು ನುಂಗಿದ ಘಟನೆ ಇದೀಗ ವೈರಲ್ ಆಗುತ್ತಿದೆ. ತನ್ನ ಸ್ನೇಹಿತರೊಂದಿಗೆ ಬೆಳಗಿನ ವಿಹಾರಕ್ಕೆ ಹೋದಾಗ ಈ ಅಚಾತುರ್ಯ ಸಂಭವಿಸಿದೆ. ಅಮೆರಿಕದ 52 ವರ್ಷದ ಟಿಕ್​ಟಾಕರ್ ರಿಯಾಲ್ಟರ್ ತನ್ನಾ ಬಾರ್ಕರ್ ಎಂಬ ಮಹಿಳೆ ತನ್ನ ಸ್ನೇಹಿತರೊಂದಿಗೆ ಹರಟುತ್ತ ವಾಕ್ ಮಾಡುತ್ತಿದ್ದಾಗ ಗುಳಿಗೆ ತೆಗೆದುಕೊಳ್ಳುವುದು ನೆನಪಾಗಿದೆ. ನೀರು ಕುಡಿಯುತ್ತ ಗುಳಿಗೆಯ ಬದಲಾಗಿ ಏರ್​ಪಾಡ್​ ನುಂಗಿಬಿಟ್ಟಿದ್ದಾಳೆ. ತಾನು ಗುಳಿಗೆಯ ಬದಲಾಗಿ ಏನನ್ನೋ ನುಂಗಿದ್ದೇನೆ ಎನ್ನವುದು ಆಕೆಗೆ ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ!

ಇದನ್ನೂ ಓದಿ : Viral Video: ಲಂಡನ್​; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ

‘ವಾಕಿಂಗ್​ ಮಧ್ಯೆ ನಾನು ಸ್ನೇಹಿತೆಯೊಂದಿಗೆ ಮಾತನಾಡುತ್ತಾ ನೀರು ಕುಡಿಯುತ್ತಾ ಗುಳಿಗೆಯ ಬದಲಾಗಿ ಏರ್​ಪಾಡ್ ನುಂಗಿದೆ. ನಂತರ ಸ್ನೇಹಿತರನ್ನು ಬೀಳ್ಕೊಟ್ಟೆ. ನೋಡಿದರೆ ಕೈಯಲ್ಲಿ ಗುಳಿಗೆಗಳು ಹಾಗೇ ಇವೆ. ಆಗ ನಾನೇನು ನುಂಗಿದೆ ಎನ್ನುವುದು ಅರಿವಾಯಿತು. ಯಾಕೋ ಗುಳಿಗೆ ನಿಧಾನವಾಗಿ ಒಳಗಿಳಿಯುತ್ತಿದೆಯಲ್ಲ ಎನ್ನುವುದು ಅನುಭವಕ್ಕೆ ಬಂತು ಕೂಡ. ದೇವರೇ, ನನ್ನೊಳಗೆ ಇದೀಗ ಏರ್​ಪಾಡ್​ ಇದೆ. ಏನು ಮಾಡುವುದು?’ ಎಂದಿದ್ದಾರೆ ರಿಯಾಲ್ಟರ್.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಲಂಡನ್​; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ

ಮನೆಗೆ ಬಂದು ಮುಜುಗರದಿಂದ ತನ್ನ ಪತಿಗೆ ಈ ಅಚಾತುರ್ಯದ ಬಗ್ಗೆ ಆಕೆ ವಿವರಿಸಿದಾಗ, ಇದನ್ನು ಯಾರಿಗೂ ಹೇಳಬೇಡ ಎಂದಿದ್ದಾನೆ. ಆದರೂ ಆಕೆ ತನ್ನ ಟಿಕ್​ಟಾಕ್​ ಫಾಲೋವರ್​​ಗಳೊಂದಿಗೆ ಈ ಬಗ್ಗೆ ಹಂಚಿಕೊಂಡಿದ್ದಾಳೆ. ಶರವೇಗದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲ ಮಾಧ್ಯಮದವರು ಆಕೆಯನ್ನು ಸಂಪರ್ಕಿಸಲು ಶುರು ಮಾಡಿದ್ದಾರೆ.

ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್​ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದು ಆಕೆಯನ್ನು ಆತಂಕಕ್ಕೆ ತಳ್ಳಿದೆ. ಇದು ನಿಮಗೆ ಮರಳಿ ಸಿಕ್ಕಾಗ ಐಪೂಡ್​ ಆಗಿರುತ್ತದೆ. ನೀವು ಈ ಏರ್​ಪಾಡ್​ ಅನ್ನು ನುಂಗುವುದನ್ನು ನಾನು ಕಲ್ಪಿಸಿಕೊಂಡೆ ಎಂದಿದ್ದಾರೆ ಒಬ್ಬರು. ಇಲ್ಲ ಅದು ಮಲವಿಸರ್ಜನೆಯಲ್ಲಿ ತಾನಾಗಿಯೇ ಹೊರಬರುತ್ತದೆ ಎಂದು ಅನೇಕರು ಹೇಳಿದ್ದಾರೆ ಅದು ಬ್ಯಾಟರಿಯನ್ನು ಹೊಂದಿದೆಯಾದ್ದರಿಂದ ಅಪಾಯ ಸಂಭವಿಸಬಹುದು ಎಂದಿದ್ದಾರೆ.

ಇದನ್ನೂ ಓದಿ : Viral Video: ‘ಮೂರು ವರ್ಷ ವ್ಯಾನ್​ ಡ್ರೈವರ್​ನಿಂದ ಲೈಂಗಿಕ ದೌರ್ಜನ್ಯ, ಹೇಳಿದ್ದಕ್ಕೆ ಪೋಷಕರು ನನ್ನನ್ನೇ ಬೈದರು’

ಕೊನೆಗೆ ವೈದ್ಯರ ಮಾರ್ಗದರ್ಶನಕ್ಕಾಗಿ ಗಂಡಹೆಂಡತಿ ತೆರಳಿದ್ದಾರೆ. ಏರ್​ಪಾಡ್ ಮಲವಿಸರ್ಜನೆಯಲ್ಲಿ ತಾನಾಗಿಯೇ ಹೊರಬರುವುದು ಎಂದು ವೈದ್ಯರು ಹೇಳಿದ್ದಾರೆ. ಆ ಪ್ರಕಾರ ಮಲವಿಸರ್ಜನೆಯ ಮೂಲಕ ಏರ್​ಪಾಡ್ ಹೊರಗೆ ಬಂದಿದೆ ಎಂದು ಈ ಪೋಸ್ಟ್ ಅನ್ನು ಸಂಪನ್ನಗೊಳಿಸಿದ್ದಾರೆ ಆಕೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ