AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಕಬೂಲ್ ನಹೀ ಹೇ; ವರನ ಆ ಒಂದು ಎಡವಟ್ಟಿಂದ ಮದುವೆಯಾಗಲ್ಲ ಎಂದ ವಧು!

Trending News: ಮಧ್ಯಪ್ರದೇಶದ ರಾಯಘಡದಲ್ಲಿ ನವೆಂಬರ್ 7ರಂದು ಮುಸ್ಲಿಂ ಸಮುದಾಯದ ಯುವಕ- ಯುವತಿಯ ಮದುವೆ ನಡೆಯುತ್ತಿತ್ತು. ಮದುವೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಸಿದ್ಧವಾಗಿದ್ದ ಯುವತಿ ಇನ್ನೇನು ತನ್ನ ವರನಿಗೆ ಕಬೂಲ್ ಎಂದು ಹೇಳಬೇಕಾಗಿತ್ತು.

Viral News: ಕಬೂಲ್ ನಹೀ ಹೇ; ವರನ ಆ ಒಂದು ಎಡವಟ್ಟಿಂದ ಮದುವೆಯಾಗಲ್ಲ ಎಂದ ವಧು!
ಮದುವೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 13, 2021 | 7:28 PM

ಮದುವೆಯ ಬಗ್ಗೆ ಪ್ರತಿಯೊಬ್ಬರಿಗೂ ಏನೇನೋ ಕನಸುಗಳಿರುತ್ತವೆ. ಆದರೆ, ಭಾರತದ ಮದುವೆಗಳಲ್ಲಿ ಒಂದಲ್ಲ ಒಂದು ರೀತಿಯ ಹೈಡ್ರಾಮಾಗಳು ನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲೇ ವಧು-ವರರು ಬದಲಾದ ಅದೆಷ್ಟೋ ಪ್ರಕರಣಗಳು ನಡೆದಿವೆ. ಇನ್ನು ಕೆಲವೊಮ್ಮೆ ಮದುವೆ ಮಂಟಪದಿಂದ ಓಡಿ ಹೋದ ಹುಡುಗಿ ಇನ್ಯಾರನ್ನೋ ಮದುವೆಯಾದ ಘಟನೆಗಳೂ ನಡೆದಿವೆ. ಆದರೆ, ಮದುವೆಯಾಗಲು ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ವಧು ತನಗೆ ಈ ಹುಡುಗ ಬೇಡ ಎಂದು ವರನನ್ನು ತಿರಸ್ಕರಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆ ವಧು ವರನನ್ನು ತಿರಸ್ಕರಿಸಲು ಕಾರಣವೇನೆಂದು ತಿಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಿ.

ಮಧ್ಯಪ್ರದೇಶದ ರಾಯಘಡದಲ್ಲಿ ನವೆಂಬರ್ 7ರಂದು ಮುಸ್ಲಿಂ ಸಮುದಾಯದ ಯುವಕ- ಯುವತಿಯ ಮದುವೆ ನಡೆಯುತ್ತಿತ್ತು. ಮದುವೆಗೆ ಸಾಂಪ್ರದಾಯಿಕ ಉಡುಗೆ ತೊಟ್ಟು ಸಿದ್ಧವಾಗಿದ್ದ ಯುವತಿ ಇನ್ನೇನು ತನ್ನ ವರನಿಗೆ ಕಬೂಲ್ ಎಂದು ಹೇಳಬೇಕಾಗಿತ್ತು. ಆದರೆ, ವರ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಮದುವೆ ಮನೆಯ ಕಳೆಯೇ ಬದಲಾಯಿತು. ಆಕೆ ತನಗೆ ಈ ಮದುವೆ ಇಷ್ಟವಿಲ್ಲ ಎಂದು ಘೋಷಿಸಿಬಿಟ್ಟಳು.

ಮದುವೆಗೆ ಬಂದಿದ್ದ ತನ್ನ ಗೆಳೆಯರ ಜೊತೆ ಕುಳಿತು ವರನೂ ಮದ್ಯಪಾನ ಮಾಡಿದ್ದ. ಮದುವೆಗೂ ಮುನ್ನ ಏರ್ಪಡಿಸಿದ್ದ ಪಾರ್ಟಿಯಲ್ಲಿ ವಧು-ವರರ ಮನೆಯವರು ಕುಡಿದು ಎಂಜಾಯ್ ಮಾಡಿದ್ದರು. ಆದರೆ, ತನ್ನನ್ನು ಮದುವೆಯಾಗುವ ಹುಡುಗನೂ ಆಲ್ಕೋಹಾಲ್ ಕುಡಿಯುತ್ತಾನೆ ಎಂದು ವಧುವಿಗೆ ಗೊತ್ತಿರಲಿಲ್ಲ. ಗೆಳೆಯರೊಂದಿಗೆ ಆಲ್ಕೋಹಾಲ್ ಕುಡಿದು ಟೈಟ್ ಆಗಿದ್ದ ವರನಿಗೆ ಮದುವೆಯಲ್ಲಿ ವಧುವಿನ ಪಕ್ಕ ಗಟ್ಟಿಯಾಗಿ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ.

ಇದರಿಂದ ಕೋಪಗೊಂಡ ವಧು ತಾನು ಆ ಹುಡುಗನನ್ನು ಮದುವೆಯಾಗುವುದಿಲ್ಲ ಎಂದಿದ್ದಾಳೆ. ಈ ಮದುವೆಗೆ ಒಪ್ಪಿಗೆ ಇದೆಯೇ? ಎಂದು ಮುಸ್ಲಿಂ ಧರ್ಮಗುರುಗಳು ಕೇಳಿದಾಗ ನನಗೆ ಈ ಮದುವೆ ಇಷ್ಟವಿಲ್ಲ (ಕಬೂಲ್ ನಹೀ) ಎಂದು ಹೇಳಿದ್ದಾಳೆ.

ಮದ್ಯವ್ಯಸನಿಯಾದ ಹುಡುಗನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಯುವತಿ ಹೇಳಿದ್ದರಿಂದ ಆಕೆಯ ಕುಟುಂಬಸ್ಥರು ಈ ಮದುವೆಯನ್ನು ರದ್ದುಗೊಳಿಸಿದ್ದಾರೆ. ಕಳೆದ ವರ್ಷ ಇದೇ ರೀತಿಯ ಹಲವು ಘಟನೆಗಳು ನಡೆದಿದ್ದವು. ಮಟನ್ ಊಟವಿಲ್ಲವೆಂದು, ವಧುವಿನ ಅಂಕಲ್ ಮೇಲೆ ಆರೋಪ ಮಾಡಿದ್ದಕ್ಕೆ ಮದುವೆ ರದ್ದಾದ ಪ್ರಕರಣಗಳು ಕೂಡ ನಡೆದಿದ್ದವು.

ಇದನ್ನೂ ಓದಿ: Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Viral News: ಕಿಡ್ನಿ ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ವೈದ್ಯ; 11 ಲಕ್ಷ ರೂ. ಪರಿಹಾರ ನೀಡಲು ಆಸ್ಪತ್ರೆಗೆ ಆದೇಶ

ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ