Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಮತ್ತಿನಲ್ಲಿ ಜಾಹೀರಾತು ಬೋರ್ಡ್​ಗೆ ನೇತಾಡಿದ ತೆಲಂಗಾಣದ ವ್ಯಕ್ತಿಗೆ ‘ಬಹುಮಾನ’ ನೀಡಿದ ಪೊಲೀಸರು

Telangana : ಯಾರು ಹೇಳಿದ್ದು ಕುಡಿದಾಗ ಜೋಲಿ ಹೊಡೆಯುತ್ತಾರೆ, ರಸ್ತೆ ಮೇಲೆ ಬೀಳುತ್ತಾರೆಂದು? ಇಳಿಯೋ ಮಾರಾಯಾ ಎಂದರೆ ಈತ ಶಪಥ ಹೂಡಿದಂತೆ ನೇತಾಡಲು ಶುರುಮಾಡಿದ್ದಾನೆ. ಆಮೇಲೆ?

ಕುಡಿದ ಮತ್ತಿನಲ್ಲಿ ಜಾಹೀರಾತು ಬೋರ್ಡ್​ಗೆ ನೇತಾಡಿದ ತೆಲಂಗಾಣದ ವ್ಯಕ್ತಿಗೆ ‘ಬಹುಮಾನ’ ನೀಡಿದ ಪೊಲೀಸರು
ತೆಲಂಗಾಣದ ಸಿದ್ಧಿಪೇಟೆಯಲ್ಲಿ ಕುಡಿದ ಮತ್ತಿನಲ್ಲಿ ಜಾಹೀರಾತು ಬೋರ್ಡಿಗೆ ನೇತಾಡುತ್ತಿರುವ ವ್ಯಕ್ತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 13, 2023 | 2:26 PM

Viral Video : ಯಾಕೆ ಕುಡಿಯುತ್ತಾರೆ, ಕುಡಿದ ಮತ್ತಿನಲ್ಲಿ ಹೀಗೆಲ್ಲ ಯಾಕೆ ಮಾಡುತ್ತಾರೆ, ಹೀಗೆಲ್ಲ ಮಾಡುವುದರಿಂದ ಅವರಿಗೇನು ದಕ್ಕುತ್ತದೆ, ಕುಡಿತಕ್ಕೆ ತಳ್ಳಿದ ಪರಿಸ್ಥಿತಿ ಏನು? ಇದರಿಂದ ಅವರನ್ನು ಹೊರತರುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವಷ್ಟು ನಮಗೀಗ ವ್ಯವಧಾನ ಇಲ್ಲ. ಆದರೆ ಘಟಿಸುವುದನ್ನು ನಿಂತುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಲು ಮಾತ್ರ ಸಾಕಷ್ಟು ಸಮಯವಿದೆ, ಹಾಗೆಯೇ ಅಂದಂದಿಗೆ ಚರ್ಚಿಸಿ ಮಂಗಳ ಹಾಡಲೂ. ಮತ್ತಿದನ್ನು ಓದಲು ನಿಮಗೂ ಈಗ ಸ್ವಲ್ಪ ಸಮಯವಿದೆ ಎಂದು ಭಾವಿಸುತ್ತಾ…

ನೋಡಿ ತೆಲಂಗಾಣದ ಈ ವ್ಯಕ್ತಿ ಹೀಗೆ ಜಾಹೀರಾತು ಬೋರ್ಡಿಗೆ ಜೀಕುತ್ತ ನಿಂತಿದ್ದಾನೆ. ಯಾರು ಹೇಳಿದ್ದು ಕುಡಿದಾಗ ಜೋಲಿ ಹೊಡೆಯುತ್ತಾರೆ, ರಸ್ತೆ ಮೇಲೆ ಬೀಳುತ್ತಾರೆಂದು? ಇಳಿಯೋ ಮಾರಾಯಾ ಎಂದರೆ… ಶಪಥ ಹೂಡಿದಂತೆ ಹೀಗೆ ನೇತಾಡುತ್ತಿದ್ದಾನೆ. ಕೊನೆಗೆ ಅವನನ್ನು ಇಳಿಸಲು ಉಪಾಯ ಮಾಡಿದ್ದು ಒಂದೆಡೆ ಆದರೆ, ಅವ ಹೀಗೆ ಎತ್ತರದಲ್ಲಿ ಜೀಕುತ್ತ ನಿಂತಿದ್ದಕ್ಕೆ ಪೊಲೀಸರು ಬಹುಮಾನವನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್

ಹೌದು ಬಹುಮಾನ! ಹೀಗೆ ನೇತಾಡಿ ಇವ ಸಮಾಧಾನ ಮಾಡಿಕೊಂಡ. ಆದರೆ ತೊಂದರೆ ಆಗಿದ್ದು, ಆತಂಕ ಆಗಿದ್ದು, ಟ್ರಾಫಿಕ್ ಜಾಮ್​ ಉಂಟಾಗಿದ್ದು ಸಾರ್ವಜನಿಕರಿಗೆ. ಹಾಗಾಗಿ ಇವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ಧಾರೆ. ಅಂತೂ ಬುಧವಾರದಂದು ನಡೆದ ಈ ಘಟನೆಯ ವಿಡಿಯೋ ಗುರುವಾರದಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ಜಗತ್ತೇ ತನ್ನೆಡೆ ಹೊರಳುವಂತೆ ಸಾಹಸ ಮಾಡಿದ್ದಾನೆ ಈತ!

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

ಕೊನೆಗೆ ಉಪಾಯದಿಂದ ಮತ್ತು ಸುರಕ್ಷಿತವಾಗಿ ಅವನನ್ನು ಕೆಳಗಿಳಿಸಿದ ಪೊಲೀಸರು ಅವನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆಗೆ ಕಳಿಸುವಲ್ಲಿ ಈ ಘಟನೆಯನ್ನು ಸಂಪನ್ನಗೊಳಿಸಿದ್ದಾರೆ. ಹಾಂ ಬಹುಮಾನ? ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕೆ ಇವನ ವಿರುದ್ಧ ಸಿದ್ಧೀಪೇಟೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:22 pm, Fri, 13 January 23

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!