AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಮತ್ತಿನಲ್ಲಿ ಜಾಹೀರಾತು ಬೋರ್ಡ್​ಗೆ ನೇತಾಡಿದ ತೆಲಂಗಾಣದ ವ್ಯಕ್ತಿಗೆ ‘ಬಹುಮಾನ’ ನೀಡಿದ ಪೊಲೀಸರು

Telangana : ಯಾರು ಹೇಳಿದ್ದು ಕುಡಿದಾಗ ಜೋಲಿ ಹೊಡೆಯುತ್ತಾರೆ, ರಸ್ತೆ ಮೇಲೆ ಬೀಳುತ್ತಾರೆಂದು? ಇಳಿಯೋ ಮಾರಾಯಾ ಎಂದರೆ ಈತ ಶಪಥ ಹೂಡಿದಂತೆ ನೇತಾಡಲು ಶುರುಮಾಡಿದ್ದಾನೆ. ಆಮೇಲೆ?

ಕುಡಿದ ಮತ್ತಿನಲ್ಲಿ ಜಾಹೀರಾತು ಬೋರ್ಡ್​ಗೆ ನೇತಾಡಿದ ತೆಲಂಗಾಣದ ವ್ಯಕ್ತಿಗೆ ‘ಬಹುಮಾನ’ ನೀಡಿದ ಪೊಲೀಸರು
ತೆಲಂಗಾಣದ ಸಿದ್ಧಿಪೇಟೆಯಲ್ಲಿ ಕುಡಿದ ಮತ್ತಿನಲ್ಲಿ ಜಾಹೀರಾತು ಬೋರ್ಡಿಗೆ ನೇತಾಡುತ್ತಿರುವ ವ್ಯಕ್ತಿ
TV9 Web
| Edited By: |

Updated on:Jan 13, 2023 | 2:26 PM

Share

Viral Video : ಯಾಕೆ ಕುಡಿಯುತ್ತಾರೆ, ಕುಡಿದ ಮತ್ತಿನಲ್ಲಿ ಹೀಗೆಲ್ಲ ಯಾಕೆ ಮಾಡುತ್ತಾರೆ, ಹೀಗೆಲ್ಲ ಮಾಡುವುದರಿಂದ ಅವರಿಗೇನು ದಕ್ಕುತ್ತದೆ, ಕುಡಿತಕ್ಕೆ ತಳ್ಳಿದ ಪರಿಸ್ಥಿತಿ ಏನು? ಇದರಿಂದ ಅವರನ್ನು ಹೊರತರುವುದು ಹೇಗೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವಷ್ಟು ನಮಗೀಗ ವ್ಯವಧಾನ ಇಲ್ಲ. ಆದರೆ ಘಟಿಸುವುದನ್ನು ನಿಂತುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಲು ಮಾತ್ರ ಸಾಕಷ್ಟು ಸಮಯವಿದೆ, ಹಾಗೆಯೇ ಅಂದಂದಿಗೆ ಚರ್ಚಿಸಿ ಮಂಗಳ ಹಾಡಲೂ. ಮತ್ತಿದನ್ನು ಓದಲು ನಿಮಗೂ ಈಗ ಸ್ವಲ್ಪ ಸಮಯವಿದೆ ಎಂದು ಭಾವಿಸುತ್ತಾ…

ನೋಡಿ ತೆಲಂಗಾಣದ ಈ ವ್ಯಕ್ತಿ ಹೀಗೆ ಜಾಹೀರಾತು ಬೋರ್ಡಿಗೆ ಜೀಕುತ್ತ ನಿಂತಿದ್ದಾನೆ. ಯಾರು ಹೇಳಿದ್ದು ಕುಡಿದಾಗ ಜೋಲಿ ಹೊಡೆಯುತ್ತಾರೆ, ರಸ್ತೆ ಮೇಲೆ ಬೀಳುತ್ತಾರೆಂದು? ಇಳಿಯೋ ಮಾರಾಯಾ ಎಂದರೆ… ಶಪಥ ಹೂಡಿದಂತೆ ಹೀಗೆ ನೇತಾಡುತ್ತಿದ್ದಾನೆ. ಕೊನೆಗೆ ಅವನನ್ನು ಇಳಿಸಲು ಉಪಾಯ ಮಾಡಿದ್ದು ಒಂದೆಡೆ ಆದರೆ, ಅವ ಹೀಗೆ ಎತ್ತರದಲ್ಲಿ ಜೀಕುತ್ತ ನಿಂತಿದ್ದಕ್ಕೆ ಪೊಲೀಸರು ಬಹುಮಾನವನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ : 831224 ಹೀಗೆಂದರೆ ಏನು? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ಸೈಬರ್ ಟರ್ಮ್

ಹೌದು ಬಹುಮಾನ! ಹೀಗೆ ನೇತಾಡಿ ಇವ ಸಮಾಧಾನ ಮಾಡಿಕೊಂಡ. ಆದರೆ ತೊಂದರೆ ಆಗಿದ್ದು, ಆತಂಕ ಆಗಿದ್ದು, ಟ್ರಾಫಿಕ್ ಜಾಮ್​ ಉಂಟಾಗಿದ್ದು ಸಾರ್ವಜನಿಕರಿಗೆ. ಹಾಗಾಗಿ ಇವನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ಧಾರೆ. ಅಂತೂ ಬುಧವಾರದಂದು ನಡೆದ ಈ ಘಟನೆಯ ವಿಡಿಯೋ ಗುರುವಾರದಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇಡೀ ಜಗತ್ತೇ ತನ್ನೆಡೆ ಹೊರಳುವಂತೆ ಸಾಹಸ ಮಾಡಿದ್ದಾನೆ ಈತ!

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

ಕೊನೆಗೆ ಉಪಾಯದಿಂದ ಮತ್ತು ಸುರಕ್ಷಿತವಾಗಿ ಅವನನ್ನು ಕೆಳಗಿಳಿಸಿದ ಪೊಲೀಸರು ಅವನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮನೆಗೆ ಕಳಿಸುವಲ್ಲಿ ಈ ಘಟನೆಯನ್ನು ಸಂಪನ್ನಗೊಳಿಸಿದ್ದಾರೆ. ಹಾಂ ಬಹುಮಾನ? ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕೆ ಇವನ ವಿರುದ್ಧ ಸಿದ್ಧೀಪೇಟೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:22 pm, Fri, 13 January 23

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ