AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹುಡುಗಿ ಕೆಸರಿನಿಂದ ರಕ್ಷಿಸಿದ್ದಕ್ಕೆ ಸೊಂಡಿಲೆತ್ತಿ ಧನ್ಯವಾದ ಹೇಳಿದ ಮರಿಯಾನೆ

Baby Elephant : ‘ನಂದೇನೂ ತಪ್ಪಿಲ್ಲ, ಕಬ್ಬು ನೋಡಿ ಬಾಯಲ್ಲಿ ನೀರೂರಿತು. ಅದಕ್ಕೆ ಗದ್ದೆಗೆ ನುಗ್ಗಿದೆ. ನೋಡಿದರೆ ಕೆಸರಿನಲ್ಲಿ ಕಾಲು ಹೂತುಹೋಯಿತು. ಸದ್ಯ ನೀ ಬಂದು ಕಾಪಾಡಿದೆ. ಥ್ಯಾಂಕ್​ ಯೂ ಅಕ್ಕಾ!’ ಇಂತಿ ಮರಿಯಾನೆ

ಈ ಹುಡುಗಿ ಕೆಸರಿನಿಂದ ರಕ್ಷಿಸಿದ್ದಕ್ಕೆ ಸೊಂಡಿಲೆತ್ತಿ ಧನ್ಯವಾದ ಹೇಳಿದ ಮರಿಯಾನೆ
Girl Rescues Baby Elephant Stuck In Muddy Ditch It Makes An Adorable Thank You Gesture
TV9 Web
| Updated By: ಶ್ರೀದೇವಿ ಕಳಸದ|

Updated on:Oct 28, 2022 | 4:13 PM

Share

Viral Video : ಆನೆಗಳು ಭಾರೀ ಬುದ್ಧಿವಂತ ಪ್ರಾಣಿಗಳು ಹೇಗೋ ಅಷ್ಟೇ ಆಳವಾಗಿ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವಂತಹ ಸೂಕ್ಷ್ಮ ಜೀವಿಗಳು. ವಿನಾಕಾರಣ ಅವು ಮನುಷ್ಯನ ಮೇಲೆ ದಾಳಿ ಮಾಡಲಾರವು. ಈ ವಿಷಯದಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ವರ್ತಿಸುತ್ತವೆ. ಉಳಿದಂತೆ ಮನುಷ್ಯರೊಂದಿಗೆ ಆಪ್ತವಾಗಿಯೇ ವರ್ತಿಸುತ್ತವೆ. ಇತ್ತೀಚೆಗೆ ಮರಿಆನೆಯೊಂದು ಕಬ್ಬಿನ ಗದ್ದೆಯ ಬಳಿ ಹೋಗುವಾಗ ಅಕಸ್ಮಾತ್ ಆಗಿ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದನ್ನು ನೋಡಿದ ಹುಡುಗಿಯೊಬ್ಬಳು ಅದನ್ನು ರಕ್ಷಿಸಿದ್ದಾಳೆ. ಅದಕ್ಕೆ ಪ್ರತಿಯಾಗಿ ಮರಿಯಾನೆ ಆಕೆಗೆ ಸೊಂಡಿಲೆತ್ತಿ ಧನ್ಯವಾದ ಹೇಳಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕಬ್ಬು ಎಂದರೆ ಆನೆಗೆ ಎಲ್ಲಿಲ್ಲದ ಪ್ರೀತಿ. ಪ್ರೀತಿ ಎಂದಮೇಲೆ ಯೋಚಿಸಿ ಹೆಜ್ಜೆ ಇಡಲಾಗುತ್ತದೆಯೇ? ನೇರ ನುಗ್ಗುವುದೇ! ಹೀಗೆ ನುಗ್ಗಲು ಹೋದಾಗಲೇ ಈ ಆನೆಯ ಕಾಲುಗಳು ಗದ್ದೆಬಳಿಯ ಕೆಸರಿನಲ್ಲಿ ಹೂತುಕೊಂಡಿವೆ. ಪಾಪ ಎಷ್ಟೊತ್ತಿನಿಂದ ಹೊರಬರಲು ಒದ್ದಾಡುತ್ತಿತ್ತೋ ಏನೋ. ಅದೃಷ್ಟಕ್ಕೆ ಅಲ್ಲೊಬ್ಬ ಹುಡುಗಿ ಅದೇ ದಾರಿಯಲ್ಲಿ ಬಂದಿದ್ದಾಳೆ. ನಾಯಿ ಬೆಕ್ಕು ಆದರೆ ಯಾರಾದರೂ ಹಿಂದೂ ಮುಂದೂ ನೋಡದೆ ರಕ್ಷಿಸಿಯಾರು. ಆದರೆ ಆನೆ! ಮರಿಯೇ ಆದರೂ ಗಾತ್ರ, ತೂಕದಲ್ಲಿ ಇದು ದೊಡ್ಡದೇ ಅಲ್ಲವೆ?

ಪ್ರಾಣಿ ಪ್ರೀತಿಯೇ ಹಾಗೆ. ಅಪಾಯವನ್ನು ಲೆಕ್ಕಿಸದ್ದು. ಅಂತೆಯೇ ಈಕೆ ಮರುಗಿ ಮರಿಯಾಯನೆಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಅಂತೂ ಸ್ವಲ್ಪ ಹೊತ್ತಿನ ನಂತರ ಆನೆ ಕೆಸರಿನಿಂದ ಯಶಸ್ವಿಯಾಗಿ ಹೊರಬಂದಿದೆ. ಬಂದದ್ದೇ ಸೊಂಡಿ ಎತ್ತಿ ಆಕೆಗೆ ಧನ್ಯವಾದ ಅರ್ಪಿಸಿದೆ. ಆನೆಗಳಲ್ಲಿ ಈ ಕೃತಜ್ಞತಾ ಭಾವ ಹೆಚ್ಚೇ ಇರುತ್ತದೆ ಅಲ್ಲವೆ?

ಈ ವಿಡಿಯೋ ಅನ್ನು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ. ಅನೇಕರು ಈ ಮನಕರಗುವ ವಿಡಿಯೋ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ‘ಯಾರಿಗೇ ಆಗಲಿ ಬೇಕಾಗಿರುವುದು ಸ್ವಲ್ಪ ಪ್ರೋತ್ಸಾಹ ಮತ್ತು ಸಹಾಯ. ಇದು ಬಹಳ ಹೃದಯಸ್ಪರ್ಶಿಯಾಗಿದೆ’ ಎಂದಿದ್ದಾರೆ ಒಬ್ಬರು. ‘ಇಂಥ ಕರುಣಾಮಯಿಗಳಿಂದಲೇ ಜಗತ್ತು ಉಸಿರಾಡುತ್ತಿದೆ’ ಎಂದಿದ್ದಾರೆ ಮತ್ತೊಬ್ಬರು. ‘ಈ ಪುಟ್ಟ ಹುಡುಗಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:07 pm, Fri, 28 October 22

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು