ಈ ಹುಡುಗಿ ಕೆಸರಿನಿಂದ ರಕ್ಷಿಸಿದ್ದಕ್ಕೆ ಸೊಂಡಿಲೆತ್ತಿ ಧನ್ಯವಾದ ಹೇಳಿದ ಮರಿಯಾನೆ

Baby Elephant : ‘ನಂದೇನೂ ತಪ್ಪಿಲ್ಲ, ಕಬ್ಬು ನೋಡಿ ಬಾಯಲ್ಲಿ ನೀರೂರಿತು. ಅದಕ್ಕೆ ಗದ್ದೆಗೆ ನುಗ್ಗಿದೆ. ನೋಡಿದರೆ ಕೆಸರಿನಲ್ಲಿ ಕಾಲು ಹೂತುಹೋಯಿತು. ಸದ್ಯ ನೀ ಬಂದು ಕಾಪಾಡಿದೆ. ಥ್ಯಾಂಕ್​ ಯೂ ಅಕ್ಕಾ!’ ಇಂತಿ ಮರಿಯಾನೆ

ಈ ಹುಡುಗಿ ಕೆಸರಿನಿಂದ ರಕ್ಷಿಸಿದ್ದಕ್ಕೆ ಸೊಂಡಿಲೆತ್ತಿ ಧನ್ಯವಾದ ಹೇಳಿದ ಮರಿಯಾನೆ
Girl Rescues Baby Elephant Stuck In Muddy Ditch It Makes An Adorable Thank You Gesture
Follow us
| Updated By: ಶ್ರೀದೇವಿ ಕಳಸದ

Updated on:Oct 28, 2022 | 4:13 PM

Viral Video : ಆನೆಗಳು ಭಾರೀ ಬುದ್ಧಿವಂತ ಪ್ರಾಣಿಗಳು ಹೇಗೋ ಅಷ್ಟೇ ಆಳವಾಗಿ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸುವಂತಹ ಸೂಕ್ಷ್ಮ ಜೀವಿಗಳು. ವಿನಾಕಾರಣ ಅವು ಮನುಷ್ಯನ ಮೇಲೆ ದಾಳಿ ಮಾಡಲಾರವು. ಈ ವಿಷಯದಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಎಂಬಂತೆ ವರ್ತಿಸುತ್ತವೆ. ಉಳಿದಂತೆ ಮನುಷ್ಯರೊಂದಿಗೆ ಆಪ್ತವಾಗಿಯೇ ವರ್ತಿಸುತ್ತವೆ. ಇತ್ತೀಚೆಗೆ ಮರಿಆನೆಯೊಂದು ಕಬ್ಬಿನ ಗದ್ದೆಯ ಬಳಿ ಹೋಗುವಾಗ ಅಕಸ್ಮಾತ್ ಆಗಿ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದನ್ನು ನೋಡಿದ ಹುಡುಗಿಯೊಬ್ಬಳು ಅದನ್ನು ರಕ್ಷಿಸಿದ್ದಾಳೆ. ಅದಕ್ಕೆ ಪ್ರತಿಯಾಗಿ ಮರಿಯಾನೆ ಆಕೆಗೆ ಸೊಂಡಿಲೆತ್ತಿ ಧನ್ಯವಾದ ಹೇಳಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಕಬ್ಬು ಎಂದರೆ ಆನೆಗೆ ಎಲ್ಲಿಲ್ಲದ ಪ್ರೀತಿ. ಪ್ರೀತಿ ಎಂದಮೇಲೆ ಯೋಚಿಸಿ ಹೆಜ್ಜೆ ಇಡಲಾಗುತ್ತದೆಯೇ? ನೇರ ನುಗ್ಗುವುದೇ! ಹೀಗೆ ನುಗ್ಗಲು ಹೋದಾಗಲೇ ಈ ಆನೆಯ ಕಾಲುಗಳು ಗದ್ದೆಬಳಿಯ ಕೆಸರಿನಲ್ಲಿ ಹೂತುಕೊಂಡಿವೆ. ಪಾಪ ಎಷ್ಟೊತ್ತಿನಿಂದ ಹೊರಬರಲು ಒದ್ದಾಡುತ್ತಿತ್ತೋ ಏನೋ. ಅದೃಷ್ಟಕ್ಕೆ ಅಲ್ಲೊಬ್ಬ ಹುಡುಗಿ ಅದೇ ದಾರಿಯಲ್ಲಿ ಬಂದಿದ್ದಾಳೆ. ನಾಯಿ ಬೆಕ್ಕು ಆದರೆ ಯಾರಾದರೂ ಹಿಂದೂ ಮುಂದೂ ನೋಡದೆ ರಕ್ಷಿಸಿಯಾರು. ಆದರೆ ಆನೆ! ಮರಿಯೇ ಆದರೂ ಗಾತ್ರ, ತೂಕದಲ್ಲಿ ಇದು ದೊಡ್ಡದೇ ಅಲ್ಲವೆ?

ಪ್ರಾಣಿ ಪ್ರೀತಿಯೇ ಹಾಗೆ. ಅಪಾಯವನ್ನು ಲೆಕ್ಕಿಸದ್ದು. ಅಂತೆಯೇ ಈಕೆ ಮರುಗಿ ಮರಿಯಾಯನೆಯನ್ನು ರಕ್ಷಿಸಲು ಮುಂದಾಗಿದ್ದಾಳೆ. ಅಂತೂ ಸ್ವಲ್ಪ ಹೊತ್ತಿನ ನಂತರ ಆನೆ ಕೆಸರಿನಿಂದ ಯಶಸ್ವಿಯಾಗಿ ಹೊರಬಂದಿದೆ. ಬಂದದ್ದೇ ಸೊಂಡಿ ಎತ್ತಿ ಆಕೆಗೆ ಧನ್ಯವಾದ ಅರ್ಪಿಸಿದೆ. ಆನೆಗಳಲ್ಲಿ ಈ ಕೃತಜ್ಞತಾ ಭಾವ ಹೆಚ್ಚೇ ಇರುತ್ತದೆ ಅಲ್ಲವೆ?

ಈ ವಿಡಿಯೋ ಅನ್ನು ಐಎಫ್​ಎಸ್​ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ. ಅನೇಕರು ಈ ಮನಕರಗುವ ವಿಡಿಯೋ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ‘ಯಾರಿಗೇ ಆಗಲಿ ಬೇಕಾಗಿರುವುದು ಸ್ವಲ್ಪ ಪ್ರೋತ್ಸಾಹ ಮತ್ತು ಸಹಾಯ. ಇದು ಬಹಳ ಹೃದಯಸ್ಪರ್ಶಿಯಾಗಿದೆ’ ಎಂದಿದ್ದಾರೆ ಒಬ್ಬರು. ‘ಇಂಥ ಕರುಣಾಮಯಿಗಳಿಂದಲೇ ಜಗತ್ತು ಉಸಿರಾಡುತ್ತಿದೆ’ ಎಂದಿದ್ದಾರೆ ಮತ್ತೊಬ್ಬರು. ‘ಈ ಪುಟ್ಟ ಹುಡುಗಿಗೆ ಒಳ್ಳೆಯದಾಗಲಿ’ ಎಂದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:07 pm, Fri, 28 October 22

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ