AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದಾಳಿ ಮಾಡಿದ ಸಿಂಹಿಣಿಗೆ ತಕ್ಕ ಶಾಸ್ತಿ ಮಾಡಿದ ಕೃಷ್ಣಮೃಗ

ಬೇಟೆ ಸಿಕ್ಕಿತು ಅಂದುಕೊಂಡು ಓಡೋಡಿ ಬಂದ ಸಿಂಹಿಣಿಗೆ ತನ್ನ ಬಾಗಿದ ಮತ್ತು ಚೂಪಾದ ಕೊಂಬುಗಳಿಂದ ತಿವಿದು ಸಿಂಹವನ್ನು ಓಡಿಸಿದ ಕೃಷ್ಣಮೃಗದ ವಿಡಿಯೋ ವೈರಲ್ ಆಗುತ್ತಿದೆ.

Viral Video: ದಾಳಿ ಮಾಡಿದ ಸಿಂಹಿಣಿಗೆ ತಕ್ಕ ಶಾಸ್ತಿ ಮಾಡಿದ ಕೃಷ್ಣಮೃಗ
ದಾಳಿ ಮಾಡಿದ ಸಿಂಹಿಣಿಗೆ ತಕ್ಕ ಶಾಸ್ತಿ ಮಾಡಿದ ಕೃಷ್ಣಮೃಗ
TV9 Web
| Updated By: Rakesh Nayak Manchi|

Updated on: Oct 17, 2022 | 10:17 AM

Share

ಬಲಿಷ್ಠ ಪ್ರಾಣಿಗಳಾದ ಸಿಂಹ, ಹುಲಿಯಂತಹ ಪ್ರಾಣಿಗಳ ಮುಂದೆ ಯಾವುದೇ ಬೇಟೆ ಹಾದು ಹೋದರೂ ಅವುಗಳ ಸಾವು ನಿಶ್ಚಿತ. ಅದಾಗ್ಯೂ ಕೆಲವೊಮ್ಮೆ ಬೇಟೆಯಾಡಿದ ಪ್ರಾಣಿಗಳ ಪ್ರಬಲ ಪ್ರತಿರೋಧದಿಂದ ಬೇಟೆ ತಪ್ಪಿಹೋಗುವುದುಂಟು. ಸಿಂಹ ಕತ್ತೆಕಿರುಬದ ಮೇಲೆ ದಾಳಿ ನಡೆಸಿ ಬೇಟೆ ಬಲಿ ಪಡೆಯಲು ಸಾಧ್ಯವಾಗದೇ ಕೈಸುಟ್ಟುಕೊಂಡ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗತ್ತಿದ್ದು, ಇದರಲ್ಲಿ ಕೃಷ್ಣಮೃಗ (ಹಲ್ಲೇಕರ)ದ ಮೇಲೆ ದಾಳಿ ನಡೆಸಿದ ಸಿಂಹಿಣಿ ಬೇಟೆ ಮಣಿಸಲಾಗದೆ ಓಡಿಹೋಗುವುದನ್ನು ಕಾಣಬಹುದು.

ವಿಡಿಯೋದಲ್ಲಿ ಕಾಣುವಂತೆ, ಒಂದು ಸಣ್ಣ ಕೊಳದಲ್ಲಿ ಹುಲ್ಲೇಕರ ನೀರು ಕುಡಿಯುತ್ತಿರುತ್ತದೆ. ದೂರದಿಂದಲೇ ನೋಡಿದ ಸಿಂಹಿಣಿ ಭರ್ಜರಿಯಾಗಿ ಮಾಂಸ ಸವಿಯಬಹುದು ಎಂದು ಓಡೋಡಿ ಬಂದು ಹುಲ್ಲೇಕರದ ಮೇಲೆರಗಿದೆ. ಈ ವೇಳೆ ತನ್ನನ್ನು ರಕ್ಷಿಸಿಕೊಳ್ಳಲು ಹುಲ್ಲೇಕರ ಬಾಗಿದ ಕೊಂಬುಗಳಿಂದ ಸಿಂಹಿಣಿಗೆ ಚುಚ್ಚಲು ಆರಂಭಿಸುತ್ತದೆ. ನೋವಿನಿಂದ ಬೇಟೆ ಬಿಟ್ಟ ಸಿಂಹಿಣಿ ಕೊಳದ ಮೂಲಕ ಓಡಿ ಹೋಗುತ್ತದೆ.

ದಿ ಡಾರ್ಕ್ ಸೈಡ್ ಆಫ್ ನೇಚರ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಪ್ರತಿದಾಳಿಯೇ ಅತ್ಯುತ್ತಮ ರಕ್ಷಣಾ ತಂತ್ರ, ಹುಲ್ಲೇಕರ ತನ್ನ ಬಾಗಿದ ಕೊಂಬುಗಳನ್ನು ಸಿಂಹಿಣಿಯನ್ನು ಓಡಿಸಲು ಬಳಸುತ್ತದೆ” ಎಂದು ಶೀರ್ಷಿಕೆ ಬರೆಯಲಾಗಿದೆ. ಇತ್ತೀಚಿಗೆ ಹಂಚಿಕೊಂಡಿರುವ ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, 72 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್​ಗಳನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?