9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್

Train : ಈ ರೈಲಿಗಾಗಿ ಕಾದಿರುವ ಎಲ್ಲರಿಗೂ ಎಷ್ಟೊಂದು ತಾಳ್ಮೆ ಇದೆ ಎಂದಿದ್ದಾರೆ ಒಬ್ಬರು. ನಾನಾಗಿದ್ದರೆ ಖಂಡಿತ ಕಾಯುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಇದನ್ನು ಓದುತ್ತಿರುವ ನೀವು ಇಷ್ಟೊತ್ತು ಕಾಯುತ್ತಿದ್ದಿರಾ?

9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್
ಒಂಭತ್ತು ತಾಸುಗಳ ನಂತರ ರೈಲು ಬಂದಾಗ ಜನರು ಸಂಭ್ರಮಿಸಿದ ರೀತಿ
Follow us
| Updated By: ಶ್ರೀದೇವಿ ಕಳಸದ

Updated on:Nov 29, 2022 | 5:46 PM

Viral Video : ಅಬ್ಬಬ್ಬಾ ಎಂದರೆ ಒಂದು ತಾಸು ಕಾಯಬಹುದು ರೈಲನ್ನು. ಅದಕ್ಕಿಂತ ಹೆಚ್ಚಾದರೆ ಯಾರಿಗೂ ಬೇಸರವಾಗುತ್ತದೆ. ಆದರೆ ಆ ರೈಲು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆಂದಾಗ ಕಾಯುವುದು ಅನಿವಾರ್ಯವೇ ಆಗುತ್ತದೆ. ಕಾಯ್ದು ಕಾಯ್ದು ಅಂತೂ ಕೊನೆಗೆ ರೈಲು ಬಂದಾಗ ಆಗುವ ಸಂತೋಷ ಇದೆಯಲ್ಲ, ಅನುಭವಿಸಿದವರಿಗೇ ಗೊತ್ತು. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಒಂಭತ್ತು ತಾಸುಗಳ ತನಕ ರೈಲಿಗಾಗಿ ಕಾಯ್ದ ಪ್ರಯಾಣಿಕರು, ರೈಲು ಬಂದ ನಂತರ ಸಂಭ್ರಮಿಸಿದ ಪರಿಯನ್ನು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೂರಾರು ಜನರು ಪ್ಲ್ಯಾಟ್​ಫಾರ್ಮ್ ಮೇಲೆ ಈ ರೈಲಿಗಾಗಿ ಕಾಯುತ್ತಿದ್ದಾರೆ. ದೂರದಿಂದ ರೈಲು ಬರುತ್ತಿದ್ದಂತೆ ವಿಜಯೋತ್ಸಾಹದಿಂದ ಸಂಭ್ರಮಿಸಿದ್ದಾರೆ. ಈ ವಿಡಿಯೋ ಅನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದಾರೆ. 6,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಅಬ್ಬಾ ನಿಮಗೆಲ್ಲ ಇಷ್ಟೊಂದು ತಾಳ್ಮೆ ಇದೆಯಲ್ಲ ಶಭಾಷ್​ ಎಂದಿದ್ದಾರೆ ನೆಟ್ಟಿಗರು. ನಾನಾಗಿದ್ದರೆ ಖಂಡಿತ ಇಷ್ಟುಹೊತ್ತು ಕಾಯುತ್ತಲೇ ಇರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಒಂದು ದಿನವೇ ವ್ಯರ್ಥವಾಯಿತಲ್ಲ ಒಂದು ರೈಲಿಗೆ ಎಂದಿದ್ದಾರೆ ಮತ್ತೊಬ್ಬರು. ಅಂತೂ ಬಂತೂ ಬಂತೂ ರೈಲು ಬಂತು ಎಂಬಂತಾಗಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

Published On - 5:43 pm, Tue, 29 November 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ