AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್

Train : ಈ ರೈಲಿಗಾಗಿ ಕಾದಿರುವ ಎಲ್ಲರಿಗೂ ಎಷ್ಟೊಂದು ತಾಳ್ಮೆ ಇದೆ ಎಂದಿದ್ದಾರೆ ಒಬ್ಬರು. ನಾನಾಗಿದ್ದರೆ ಖಂಡಿತ ಕಾಯುತ್ತಿರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಇದನ್ನು ಓದುತ್ತಿರುವ ನೀವು ಇಷ್ಟೊತ್ತು ಕಾಯುತ್ತಿದ್ದಿರಾ?

9 ಗಂಟೆ ತಡವಾಗಿ ಬಂದ ರೈಲು; ಪ್ರಯಾಣಿಕರು ಸಂಭ್ರಮಿಸಿದ ವಿಡಿಯೋ ವೈರಲ್
ಒಂಭತ್ತು ತಾಸುಗಳ ನಂತರ ರೈಲು ಬಂದಾಗ ಜನರು ಸಂಭ್ರಮಿಸಿದ ರೀತಿ
TV9 Web
| Edited By: |

Updated on:Nov 29, 2022 | 5:46 PM

Share

Viral Video : ಅಬ್ಬಬ್ಬಾ ಎಂದರೆ ಒಂದು ತಾಸು ಕಾಯಬಹುದು ರೈಲನ್ನು. ಅದಕ್ಕಿಂತ ಹೆಚ್ಚಾದರೆ ಯಾರಿಗೂ ಬೇಸರವಾಗುತ್ತದೆ. ಆದರೆ ಆ ರೈಲು ಬಿಟ್ಟರೆ ಬೇರೆ ಮಾರ್ಗವೇ ಇಲ್ಲವೆಂದಾಗ ಕಾಯುವುದು ಅನಿವಾರ್ಯವೇ ಆಗುತ್ತದೆ. ಕಾಯ್ದು ಕಾಯ್ದು ಅಂತೂ ಕೊನೆಗೆ ರೈಲು ಬಂದಾಗ ಆಗುವ ಸಂತೋಷ ಇದೆಯಲ್ಲ, ಅನುಭವಿಸಿದವರಿಗೇ ಗೊತ್ತು. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಒಂಭತ್ತು ತಾಸುಗಳ ತನಕ ರೈಲಿಗಾಗಿ ಕಾಯ್ದ ಪ್ರಯಾಣಿಕರು, ರೈಲು ಬಂದ ನಂತರ ಸಂಭ್ರಮಿಸಿದ ಪರಿಯನ್ನು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೂರಾರು ಜನರು ಪ್ಲ್ಯಾಟ್​ಫಾರ್ಮ್ ಮೇಲೆ ಈ ರೈಲಿಗಾಗಿ ಕಾಯುತ್ತಿದ್ದಾರೆ. ದೂರದಿಂದ ರೈಲು ಬರುತ್ತಿದ್ದಂತೆ ವಿಜಯೋತ್ಸಾಹದಿಂದ ಸಂಭ್ರಮಿಸಿದ್ದಾರೆ. ಈ ವಿಡಿಯೋ ಅನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣಕ್ಕೆ ಅಪ್​ಲೋಡ್ ಮಾಡಿದ್ದಾರೆ. 6,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ.

ಅಬ್ಬಾ ನಿಮಗೆಲ್ಲ ಇಷ್ಟೊಂದು ತಾಳ್ಮೆ ಇದೆಯಲ್ಲ ಶಭಾಷ್​ ಎಂದಿದ್ದಾರೆ ನೆಟ್ಟಿಗರು. ನಾನಾಗಿದ್ದರೆ ಖಂಡಿತ ಇಷ್ಟುಹೊತ್ತು ಕಾಯುತ್ತಲೇ ಇರಲಿಲ್ಲ ಎಂದಿದ್ದಾರೆ ಇನ್ನೊಬ್ಬರು. ಒಂದು ದಿನವೇ ವ್ಯರ್ಥವಾಯಿತಲ್ಲ ಒಂದು ರೈಲಿಗೆ ಎಂದಿದ್ದಾರೆ ಮತ್ತೊಬ್ಬರು. ಅಂತೂ ಬಂತೂ ಬಂತೂ ರೈಲು ಬಂತು ಎಂಬಂತಾಗಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

Published On - 5:43 pm, Tue, 29 November 22

Follow Us
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಹಿಜಾಬ್​​ಗೆ ಅವಕಾಶ ಬೆನ್ನಲ್ಲೇ ಕೇಸರಿ ಶಾಲು ಬಗ್ಗೆ ಸಚಿವರು ಹೇಳಿದ್ದೇನು?
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೊಳಚೆ ಪ್ರವಾಹ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
ಹಿಜಾಬ್​​ಗೆ ಅನುಮತಿ ನೀಡಿರುವ ಬಗ್ಗೆ ಶಿಕ್ಷಣ ಸಚಿವ ಹೇಳಿದ್ದಿಷ್ಟು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್​​ಗೆ ಸಚಿವ ಸಂತೋಷ್ ಲಾಡ್ ಸವಾಲು
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
10 ವರ್ಷದ ಬಳಿಕ ಚೀನಾಗೆ ತೆರಳಿದ ಟ್ರಂಪ್​ಗೆ ಅದ್ದೂರಿ ಸ್ವಾಗತ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು