AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಕೊಟ್ಟುಪಡೆವ ಪ್ರೀತಿ ಈ ಕೊಡೆಯ ಕೆಳಗೆ

Rain : ಈ ಟ್ರಾಫಿಕ್ಕಿನಲ್ಲಿ ಈ ಮಳೆಯಲ್ಲಿ ಇವರಿಬ್ಬರೂ ರಸ್ತೆ ದಾಟುವ ಈ ವಿಡಿಯೋ 23 ಮಿಲಿಯನ್ ನೆಟ್ಟಿಗರ ಮನ ಮೃದುಗೊಳಿಸಿದೆ. ಯಾರಿಗೂ ಅನ್ನಿಸುತ್ತದೆ ಅಲ್ಲವೆ ಕೊನೆತನಕ ಹೀಗೆ ಅನ್ಯೋನ್ಯವಾಗಿರಬೇಕು ಎಂದು.

Viral : ಕೊಟ್ಟುಪಡೆವ ಪ್ರೀತಿ ಈ ಕೊಡೆಯ ಕೆಳಗೆ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Aug 13, 2022 | 12:02 PM

Share

Love : ಪ್ರೀತಿ ಎಂದರೇನು? ವ್ಯಾಖ್ಯಾನಗಳು ಸಾವಿರಾರು ಇರಬಹುದು. ಆದರೆ ಇಲ್ಲಿರುವ ವಿಡಿಯೋ ನೋಡಿದರೆ ಇದೇ ಸೂಕ್ತ ವ್ಯಾಖ್ಯಾನ ಎನ್ನಿಸದೇ ಇರದು. ಆಪ್ತವಾಗಿ ಹೀಗೆ ಕೊನೆಯತನಕವೂ ಜೊತೆಯಾಗಿಯೇ ಇರುವುದು, ಪರಸ್ಪರ ಕಾಳಜಿಯಿಂದ ಇರುವುದು. ಪರಸ್ಪರ ಕೊಟ್ಟು ಪಡೆಯುವುದರೊಳಗಿರುವ ಎಲ್ಲ ಏರಿಳಿತಗಳನ್ನು ನುಂಗಿ ಪ್ರೀತಿಯ ನಂದಾದೀಪವನ್ನಷ್ಟೇ ತೇಲಿಸುವುದು. ಈ ತೇಲಿಸುವಿಕೆಯ ನೋವು-ನಷ್ಟಗಳು ಅವರವರಿಗೇ ಗೊತ್ತು. ಅದೊಂದು ಅದ್ಭುತ ಅನುಭೂತಿ. ಈಗಿಲ್ಲಿ ನೋಡಿ ಈ ಮಳೆಗಾಲದಲ್ಲಿ ಈ ಅಜ್ಜ, ಅಜ್ಜಿಗೆ ಛತ್ರಿ ಹಿಡಿದುಕೊಂಡು ಮಾತನಾಡಿಕೊಂಡು ರಸ್ತೆ ದಾಟಿಕೊಂಡು ತಮ್ಮದೇ ಲೋಕದಲ್ಲಿ ಹೋಗುತ್ತಿದ್ದಾರೆ. ಎಂಥ ಚೆಂದ ಅಲ್ಲವಾ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ವಿಡಿಯೋವನ್ನು ಫೋಟೋಗ್ರಾಫರ್ ಮತ್ತು ಡಿಜಿಟಲ್ ಕಂಟೆಂಡ್ ಕ್ರಿಯೇಟರ್ ಆಸೀಫ್ ಖಾನ್ ಇನ್​ಸ್ಟಾಗ್ರಾಂಗೆ ಅಪ್​ಲೋಡ್ ಮಾಡಿದ್ದಾರೆ 26 ಮಿಲಿಯನ್ ವೀಕ್ಷಣೆ ಮತ್ತು 13 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಪಡೆದಿದೆ. ಅನೇಕ ನೆಟ್ಟಿಗರು ಈ ಹೃದಯಂಗಮ ದೃಶ್ಯವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ.

ಪ್ರೀತಿಸಿದ, ಜೊತೆಯಾಗಿರುವ ಯಾರಿಗೆ ತಾನೆ ಇಷ್ಟವಿಲ್ಲ ಹೀಗೆ ಇಷ್ಟು ವಯಸ್ಸಾಗುವ ತನಕವೂ ಅನ್ಯೋನ್ಯವಾಗಿರಬೇಕೆಂದು?

ಇನ್ನಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?