AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎತ್ತರದ ಕಟ್ಟಡದಲ್ಲಿ ವಾಸಿಸುವವರಿಗೆ ಈ ಅಗ್ನಿ ಸುರಕ್ಷಾ ಸಾಧನ ಅವಶ್ಯ’ ಆನಂದ ಮಹೀಂದ್ರಾ ಟ್ವೀಟ್

Fire Safety Device : ಇದು ಒಳ್ಳೆಯ ಕಾನ್ಸೆಪ್ಟ್​, ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕು. ಏಕೆಂದರೆ ಅಪಾರ್ಟ್​ಮೆಂಟ್​ ನ ಎದುರಿಗಿರುವ ಮರ, ವಿದ್ಯುತ್​​ ತಂತಿಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ನೆಟ್ಟಿಗರು.

‘ಎತ್ತರದ ಕಟ್ಟಡದಲ್ಲಿ ವಾಸಿಸುವವರಿಗೆ ಈ ಅಗ್ನಿ ಸುರಕ್ಷಾ ಸಾಧನ ಅವಶ್ಯ’ ಆನಂದ ಮಹೀಂದ್ರಾ ಟ್ವೀಟ್
ಅಗ್ನಿ ಸುರಕ್ಷತಾ ಸಾಧನ ಬಳಕೆಯ ಪ್ರಾತ್ಯಕ್ಷಿಕೆ
Follow us
ಶ್ರೀದೇವಿ ಕಳಸದ
|

Updated on:Feb 06, 2023 | 9:54 AM

Viral Video : ದೊಡ್ಡದೊಡ್ಡ ಕಟ್ಟಡ, ಅಪಾರ್ಟ್​ಮೆಂಟ್​ಗಳಿಗೆ ಬೆಂಕಿ ಹೊತ್ತಿದ ಸಂದರ್ಭದಲ್ಲಿ ಪ್ರಾಣ ಉಳಿಸಿಕೊಳ್ಳಲು ಅನೇಕ ಜನ ಎತ್ತರದಿಂದ ಜಿಗಿಯುತ್ತಾರೆ. ಆದರೆ ಸುರಕ್ಷತಾ ಸಾಧನವಿಲ್ಲದೆ ಜಿಗಿದಾಗ ಎಷ್ಟೋ ಜನರು ಅಪಾಯಕ್ಕೆ ಈಡಾಗುತ್ತಾರೆ. ಹಾಗಾಗಿ ಇಂಥ ಸಂದರ್ಭಗಳಲ್ಲಿ ಅಗ್ನಿ ಸುರಕ್ಷತಾ ಸಾಧನ ಹಾಕಿಕೊಂಡು ಕಟ್ಟಡಗಳಿಂದ ಹಾರಿ ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಇದೀಗ ಉದ್ಯಮಿ ಆನಂದ ಮಹೀಂದ್ರಾ ಹಂಚಿಕೊಂಡ ಈ ಎನಿಮೇಟೆಡ್ ವಿಡಿಯೋ ಗಮನಿಸಿ.

‘ಇದು ಅತ್ಯುತ್ತಮ ಸಾಧನ, ಇಂಥವನ್ನು ಕೆಲ ಕಂಪೆನಿಗಳು ತಯಾರಿಸುತ್ತವೆ ಎಂದುಕೊಂಡಿದ್ದೇನೆ. ನಾನೇನಾದರೂ ಎತ್ತರದ ಕಟ್ಟಡದಲ್ಲಿ ವಾಸ ಮಾಡಿದರೆ ಇದನ್ನು ಖರೀದಿಸುವುದು ನನ್ನ ಮೊದಲ ಆದ್ಯತೆ’ ಎಂದಿದ್ದಾರೆ ಆನಂದ ಮಹೀಂದ್ರಾ.

ಇದನ್ನೂಓದಿ : ಓಹ್​ ಕಾರು! ಎಲ್ಲಿಗೆ ಹೋಗ್ತಿದೀವಿ? ಸ್ಕ್ಯಾನಿಂಗ್​​ಗೆ, ಕಿಮೋಥೆರಪಿಗೆ, ಸರ್ಜರಿಗೆ

40 ಸೆಕೆಂಡುಗಳ ಎನಿಮೇಟೆಡ್ ವಿಡಿಯೋದ ಮೂಲ ಲರ್ನ್​​ ಸಮ್​ಥಿಂಗ್​ ಎಂಬ ಪುಟ. ಈಗಾಗಲೇ 3.9 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 61,000 ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಈ ಹೊಸ ಮಾದರಿಯ ಸಾಧನದ ಬಗ್ಗೆ ನೆಟ್ಟಿಗರು ಕುತೂಹಲಿಗಳಾಗಿದ್ದಾರೆ.

ಇದನ್ನೂ ಓದಿ : ಪೆಟ್ರೋಲ್​ ಸ್ಟೇಷನ್​ನ ಮಹಿಳಾ ಉದ್ಯೋಗಿಯ ಮೇಲೆ ಮರ್ಸಿಡೀಝ್​ನಿಂದ ಹಣ ಎಸೆದ ವ್ಯಕ್ತಿಯ ಬಗ್ಗೆ ನೆಟ್ಟಿಗರ ಆಕ್ರೋಶ

ಇದು ಭಾರತದಲ್ಲಿ ಲಭ್ಯವಿಲ್ಲ ಎನ್ನಿಸುತ್ತದೆ ಎಂದಿದ್ದಾರೆ ಕೆಲವರು. ಖಂಡಿತ ಇದು ಎತ್ತರದ ಕಟ್ಟಡಗಳಲ್ಲಿ ವಾಸಿಸುವ ಪ್ರತಿಯೊಬ್ಬರೂ ಖರೀದಿಸಬೇಕಾದ ಸಾಧನ ಎಂದಿದ್ದಾರೆ ಒಬ್ಬರು. ಇದು ಒಳ್ಳೆಯ ಕಾನ್ಸೆಪ್ಟ್​, ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕು. ಏಕೆಂದರೆ ಅಪಾರ್ಟ್​ಮೆಂಟ್​ ನ ಎದುರಿಗಿರುವ ವಿದ್ಯುತ್​​ ತಂತಿಗಳಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಸಂಗೀತ ರಸ್ತೆ; ನಿಗದಿತ ವೇಗದಲ್ಲಿ ಚಲಿಸಿದರೆ ಈ ರಸ್ತೆಗಳು ಹಾಡುತ್ತವೆ, ನೋಡಿ ವಿಡಿಯೋ

ಮರಗಳಲ್ಲಿ ಸಿಕ್ಕಿಕೊಂಡಾಗ ಕೂಡ ಸಮಸ್ಯೆ ಆಗುತ್ತದೆ ಹಾಗಾಗಿ ಇದನ್ನು ತಯಾರಿಸುವ ಪರಿಕರಗಳ ಗುಣಮಟ್ಟ ಕೂಡ ಮುಖ್ಯವಾಗುತ್ತದೆ ಎಂದಿದ್ದಾರೆ ಮಗದೊಬ್ಬರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:54 am, Mon, 6 February 23

Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ