AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೊನೆಯಲ್ಲಿ ವಿತರಣೆಯಾಗುವ ಬಹುಮಾನಕ್ಕಾಗಿ ಕಾಯಿರಿ!

Competition : ಕೈಯಲ್ಲಿ ಬ್ಯಾಟ್​​, ಎದುರಿಗೆ ಫುಟ್​ಬಾಲ್​, ಗುರಿ ಮಾತ್ರ ಪೇರಿಸಿಟ್ಟ ತಂಬಿಗೆಗಳು. ಈ ಆಟ ಓಲಂಪಿಕ್​ಗಿಂತ ಭಿನ್ನವಾಗಿದೆ. ಆದರೆ ಇದು ಹಳ್ಳಿಯ ಹೆಣ್ಣುಮಕ್ಕಳಿಗೆ ಮಾತ್ರ!

Viral Video: ಕೊನೆಯಲ್ಲಿ ವಿತರಣೆಯಾಗುವ ಬಹುಮಾನಕ್ಕಾಗಿ ಕಾಯಿರಿ!
ಹಳ್ಳಿಯ ಹೆಣ್ಣುಮಕ್ಕಳು ಆಟದಲ್ಲಿ ಭಾಗಿಯಾದ ದೃಶ್ಯ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on: Jun 08, 2023 | 10:32 AM

Share

Village Game : ಇಲ್ಲೊಂದಿಷ್ಟು ಹಳ್ಳಿಹೆಣ್ಣುಮಕ್ಕಳು ಅಡುಗೆಮನೆ ಬಿಟ್ಟು ಅಂಗಳಕ್ಕೆ ಬಂದಿದ್ದಾರೆ. ಭಾರೀ ಆಸಕ್ತಿಯಿಂದ ಈ ಆಟದಲ್ಲಿ ತೊಡಗಿಕೊಂಡಿದ್ದಾರೆ. ಎದುರಿಗೆ ಒಂದಿಷ್ಟು ತಂಬಿಗೆಗಳನ್ನು ಪೇರಿಸಿಡಲಾಗಿದೆ. ಬ್ಯಾಟಿಂಗ್​ನಿಂದ ಫುಟ್​ಬಾಲ್ (Football) ಉರುಳಿಸಿ ತಂಬಿಗೆಗಳನ್ನು ಕೆಡವುವುದೇ ಆಟದ ಗುರಿ. ಸೆರಗು ಹೊದ್ದುಕೊಂಡು ಬಂದ ಹಳ್ಳಿ ಹೆಣ್ಣುಮಕ್ಕಳು ಸರದಿಯಂತೆ ಬ್ಯಾಟಿಂಗ್​ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆಟವೆಂದರೆ ಆಟವೇ! ಅದು ನಮ್ಮನ್ನೇ ಆಟವಾಡಿಸುತ್ತದೆ. ಅದೃಷ್ಟಕ್ಕೆ ಕೆಲವರನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತದೆ. ಜೊತಗೆ ಬಹುಮಾನವನ್ನೂ ನೀಡುತ್ತದೆ. ಹಾಗಿದ್ದರೆ ಏನದು ಬಹುಮಾನ? ನೋಡಿ ಈ ವಿಡಿಯೋ.

ಒಂದೇ ಏಟಿಗೆ ಆ ಮಹಿಳೆ ಗುರಿ ಸಾಧಿಸಿಯೇ ಬಿಟ್ಟರು. ಅಗೋ ನೋಡಿದಿರಲ್ಲ ಕೈಯಲ್ಲಿ ಎಣ್ಣೆ! ಅಂತೂ ಬಹುಮಾನ ಸಿಕ್ಕಿತು. ಅಬ್ಬಾ, ಕೆಲ ತಿಂಗಳುಗಳ ತನಕ ಈಕೆ ನಿಶ್ಚಿಂತೆ. ನೆಟ್ಟಿಗರು ಈ ವಿಡಿಯೋ ನೋಡಿ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ ನಿಜ. ಆದರೆ ಆಟಕ್ಕಿಂತ ಜನರಿಗೆ ಎಣ್ಣೆಯ ಕಡೆಗೇ ಹೆಚ್ಚು ಗಮನ ಹೋದಂತಿದೆ. ಇದು ಯಾವ ಎಣ್ಣೆ? ಮತ್ತದರ ವೆಚ್ಚ, ಉಪಯೋಗ ಇತ್ಯಾದಿಯ ಬಗ್ಗೆ.

ಇದನ್ನೂ ಓದಿ : Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

ಸ್ಪೇನ್​ನಲ್ಲಿ ಹಣದುಬ್ಬರದಿಂದಾಗಿ 3 ಲೀಟರ್​ ಆಲೀವ್​ ಎಣ್ಣೆಯ ಬೆಲೆ ಸುಮಾರು ರೂ. 2,000 ಆಗಿದೆ ಎಂದು ಒಬ್ಬರು ಸಂಕಟ ತೋಡಿಕೊಂಡಿದ್ದಾರೆ. ಇದು ಸಂಸ್ಕರಿಸಿದ ಎಣ್ಣೆಯಾಗಿದೆ, ಇಷ್ಟೊಳ್ಳೆಯ ಎಣ್ಣೆಯನ್ನು ಬಹುಮಾನದ ರೂಪದಲ್ಲಿ ಕೊಟ್ಟಿದ್ದು ಖುಷಿ ಎಂದು ಇನ್ನೊಬ್ಬರು. ಗಂಡಸರು ”ಎಣ್ಣೆ”ಯನ್ನು ಬಹುಮಾನವಾಗಿ ಪಡೆದಿದ್ದರೆ ಅದು ಅವರಿಗಷ್ಟೇ ಮೀಸಲಾಗಿರುತ್ತಿತ್ತು. ಈ ಎಣ್ಣೆ ಇಲ್ಲಿ ಇಡೀ ಕುಟುಂಬಕ್ಕೆ ಉಪಯೋಗವಾಗಲಿದೆ ಎಂದು ಮೆಚ್ಚಿದ್ದಾರೆ ಕೆಲವರು.

ಇದನ್ನೂ ಓದಿ : Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

ಸದಾ ಅಡುಗೆ, ಮನೆ, ಮಕ್ಕಳು, ಕುಟುಂಬ ಎಂದು ಮುಳುಗಿರುವ ಹೆಣ್ಣುಮಕ್ಕಳಿಗೆ ಇಂಥ ಆಟವನ್ನು ಆಡಿಸಿರುವುದು ಮತ್ತು ಬಹುಮಾನ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ ಹಲವಾರು ಜನ. ಆದರೆ ಇದು ಯಾವ ಬ್ರ್ಯಾಂಡ್​ ಎಣ್ಣೆ? ಪ್ರಚಾರ ಕಾರ್ಯ ಭಾರೀ ವಿನೂತನವಾಗಿದೆ ಎಂದಿದ್ದಾರೆ ಒಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ