AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

Fraternity : 'ಇಬ್ಬರು ಸೋದರರು'; ಚಪ್ಪಲಿ, ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ. ಇದು ನಿಜವಾದ ಭಾರತ ಎನ್ನುತ್ತಿರುವ ನೆಟ್ಟಿಗರು.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ
ಕೊಲ್ಕತ್ತೆಯಲ್ಲಿರುವ ''ದುಯೀ ಭಾಯೀ'' ಚಪ್ಪಲಿ ಅಂಗಡಿ
Follow us
ಶ್ರೀದೇವಿ ಕಳಸದ
|

Updated on:Jun 07, 2023 | 4:35 PM

Viral Video : “ಇದು ನನ್ನ ಭಾರತ”, “ಇದು ನಿಜವಾದ ಭಾರತ”, “ಹಳೆಯ ಭಾರತದ ಸಣ್ಣ ಕುರುಹು” ಎಂಬಿತ್ಯಾದಿ ವಿಶೇಷಣಗಳೊಂದಿಗೆ ಟ್ವಿಟರ್​ನಲ್ಲಿ ಜನರು ಪ್ರತಿಕ್ರಿಯಿಸುತ್ತಿರುವ ಒಂದು ಅಪೂರ್ವ ಚಿತ್ರ ಮತ್ತು ಸುದ್ದಿ ಇಲ್ಲಿದೆ. ಕೊಲ್ಕತ್ತೆಯ ಕೂಡ್‌ಘಾಟ್ (Kudghat) ಪ್ರದೇಶದಲ್ಲಿ ಒಂದು ಗೂಡಂಗಡಿಯಿದೆ. “ದುಯಿ ಭಾಯೀ” (ಇಬ್ಬರು ಸೋದರರು) ಎಂಬ ಹೆಸರಿನ ಚಪ್ಪಲಿ ಹಾಗೂ ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ.

“ನಾನು ಈ ಅಂಗಡಿಯಿಂದ ಐದು ನಿಮಿಷದಷ್ಟು ದೂರದಲ್ಲಿದ್ದ ಮನೆಯಲ್ಲಿ ಹುಟ್ಟಿ ಬೆಳೆದಿದ್ದೆ. ಈ ಅಂಗಡಿ ಇನ್ನೂ ಇದೆ ಎಂದು ತಿಳಿದು ಹರ್ಷವಾಗುತ್ತಿದೆ!,” “ನಾನು ಹತ್ತಿರದಲ್ಲಿಯೇ ಕೆಲಸ ಮಾಡುತ್ತೇನೆ. ಶೂ ರಿಪೇರಿಗೆ ನಾನು ಯಾವಾಗಲೂ ಇಲ್ಲಿಯೇ ಹೋಗುವುದು,” ಎಂದು ಈ ಅಂಗಡಿಯ ಪರಿಚಯವಿರುವವರು ಪ್ರತಿಕ್ರಿಯಿಸಿದ್ದಾರೆ. “ಇದೆಷ್ಟು ಸುಂದರ ಸಂಬಂಧ! ಇವರ ಸಂತತಿ ಸಾವಿರವಾಗಲಿ,” “ಸಾಮರಸ್ಯದ ಸಹಿಷ್ಣುತೆಯ ಧರ್ಮನಿರಪೇಕ್ಷತೆಯ ಈ ಭಾರತಕ್ಕೆ ಮತ್ತೆ ಮರಳೋಣ,” ಮೊದಲಾಗಿ ನೂರಾರು ಜನ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್​ ಎಂದ ನೆಟ್ಟಿಗರು

ಈ ಇಬ್ಬರಂತೆ ಸೋದರರು, ಸೋದರಿಯರು ಹತ್ತಿರ ಬಂದು ಒಟ್ಟಿಗೆ ಕೆಲಸ ಮಾಡತೊಡಗಿದರೆ ಎಲ್ಲರಿಗೂ ಒಳ್ಳೆಯದಲ್ಲವೇ? ಮೇಲಿನ ಚಿತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿದಂತೆ, “ಚಪ್ಪಲಿ ಬ್ಯಾಗಳನ್ನು ರಿಪೇರಿ ಮಾಡಿದಂತೆ ಈ ಇಬ್ಬರು ಸೋದರರು ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ತಿದ್ದಿ ಸರಿಪಡಿಸಲಿ.”

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಅತಿಯಾದ ಮತೀಯ ಭಾವನೆಗಳ ಪ್ರದರ್ಶನದ, ನಕಾರಾತ್ಮಕತೆಯ, ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಸಹಬಾಳ್ವೆಯನ್ನು ಸಾರುವ ಇಂಥ ನಿದರ್ಶನಗಳು ಹೆಚ್ಚಾಗಬೇಕು. ನಿಮ್ಮ ದೃಷ್ಟಿಗೂ ಇಂಥ ಸಾಮರಸ್ಯದ ಉದಾಹರಣೆಗಳು ಬಿದ್ದಿದ್ದಲ್ಲಿ ಅವನ್ನು ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:31 pm, Wed, 7 June 23

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್