AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

Fraternity : 'ಇಬ್ಬರು ಸೋದರರು'; ಚಪ್ಪಲಿ, ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ. ಇದು ನಿಜವಾದ ಭಾರತ ಎನ್ನುತ್ತಿರುವ ನೆಟ್ಟಿಗರು.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ
ಕೊಲ್ಕತ್ತೆಯಲ್ಲಿರುವ ''ದುಯೀ ಭಾಯೀ'' ಚಪ್ಪಲಿ ಅಂಗಡಿ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jun 07, 2023 | 4:35 PM

Share

Viral Video : “ಇದು ನನ್ನ ಭಾರತ”, “ಇದು ನಿಜವಾದ ಭಾರತ”, “ಹಳೆಯ ಭಾರತದ ಸಣ್ಣ ಕುರುಹು” ಎಂಬಿತ್ಯಾದಿ ವಿಶೇಷಣಗಳೊಂದಿಗೆ ಟ್ವಿಟರ್​ನಲ್ಲಿ ಜನರು ಪ್ರತಿಕ್ರಿಯಿಸುತ್ತಿರುವ ಒಂದು ಅಪೂರ್ವ ಚಿತ್ರ ಮತ್ತು ಸುದ್ದಿ ಇಲ್ಲಿದೆ. ಕೊಲ್ಕತ್ತೆಯ ಕೂಡ್‌ಘಾಟ್ (Kudghat) ಪ್ರದೇಶದಲ್ಲಿ ಒಂದು ಗೂಡಂಗಡಿಯಿದೆ. “ದುಯಿ ಭಾಯೀ” (ಇಬ್ಬರು ಸೋದರರು) ಎಂಬ ಹೆಸರಿನ ಚಪ್ಪಲಿ ಹಾಗೂ ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ.

“ನಾನು ಈ ಅಂಗಡಿಯಿಂದ ಐದು ನಿಮಿಷದಷ್ಟು ದೂರದಲ್ಲಿದ್ದ ಮನೆಯಲ್ಲಿ ಹುಟ್ಟಿ ಬೆಳೆದಿದ್ದೆ. ಈ ಅಂಗಡಿ ಇನ್ನೂ ಇದೆ ಎಂದು ತಿಳಿದು ಹರ್ಷವಾಗುತ್ತಿದೆ!,” “ನಾನು ಹತ್ತಿರದಲ್ಲಿಯೇ ಕೆಲಸ ಮಾಡುತ್ತೇನೆ. ಶೂ ರಿಪೇರಿಗೆ ನಾನು ಯಾವಾಗಲೂ ಇಲ್ಲಿಯೇ ಹೋಗುವುದು,” ಎಂದು ಈ ಅಂಗಡಿಯ ಪರಿಚಯವಿರುವವರು ಪ್ರತಿಕ್ರಿಯಿಸಿದ್ದಾರೆ. “ಇದೆಷ್ಟು ಸುಂದರ ಸಂಬಂಧ! ಇವರ ಸಂತತಿ ಸಾವಿರವಾಗಲಿ,” “ಸಾಮರಸ್ಯದ ಸಹಿಷ್ಣುತೆಯ ಧರ್ಮನಿರಪೇಕ್ಷತೆಯ ಈ ಭಾರತಕ್ಕೆ ಮತ್ತೆ ಮರಳೋಣ,” ಮೊದಲಾಗಿ ನೂರಾರು ಜನ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್​ ಎಂದ ನೆಟ್ಟಿಗರು

ಈ ಇಬ್ಬರಂತೆ ಸೋದರರು, ಸೋದರಿಯರು ಹತ್ತಿರ ಬಂದು ಒಟ್ಟಿಗೆ ಕೆಲಸ ಮಾಡತೊಡಗಿದರೆ ಎಲ್ಲರಿಗೂ ಒಳ್ಳೆಯದಲ್ಲವೇ? ಮೇಲಿನ ಚಿತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿದಂತೆ, “ಚಪ್ಪಲಿ ಬ್ಯಾಗಳನ್ನು ರಿಪೇರಿ ಮಾಡಿದಂತೆ ಈ ಇಬ್ಬರು ಸೋದರರು ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ತಿದ್ದಿ ಸರಿಪಡಿಸಲಿ.”

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಅತಿಯಾದ ಮತೀಯ ಭಾವನೆಗಳ ಪ್ರದರ್ಶನದ, ನಕಾರಾತ್ಮಕತೆಯ, ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಸಹಬಾಳ್ವೆಯನ್ನು ಸಾರುವ ಇಂಥ ನಿದರ್ಶನಗಳು ಹೆಚ್ಚಾಗಬೇಕು. ನಿಮ್ಮ ದೃಷ್ಟಿಗೂ ಇಂಥ ಸಾಮರಸ್ಯದ ಉದಾಹರಣೆಗಳು ಬಿದ್ದಿದ್ದಲ್ಲಿ ಅವನ್ನು ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:31 pm, Wed, 7 June 23

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ