AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

Fraternity : 'ಇಬ್ಬರು ಸೋದರರು'; ಚಪ್ಪಲಿ, ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ. ಇದು ನಿಜವಾದ ಭಾರತ ಎನ್ನುತ್ತಿರುವ ನೆಟ್ಟಿಗರು.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ
ಕೊಲ್ಕತ್ತೆಯಲ್ಲಿರುವ ''ದುಯೀ ಭಾಯೀ'' ಚಪ್ಪಲಿ ಅಂಗಡಿ
ಶ್ರೀದೇವಿ ಕಳಸದ
|

Updated on:Jun 07, 2023 | 4:35 PM

Share

Viral Video : “ಇದು ನನ್ನ ಭಾರತ”, “ಇದು ನಿಜವಾದ ಭಾರತ”, “ಹಳೆಯ ಭಾರತದ ಸಣ್ಣ ಕುರುಹು” ಎಂಬಿತ್ಯಾದಿ ವಿಶೇಷಣಗಳೊಂದಿಗೆ ಟ್ವಿಟರ್​ನಲ್ಲಿ ಜನರು ಪ್ರತಿಕ್ರಿಯಿಸುತ್ತಿರುವ ಒಂದು ಅಪೂರ್ವ ಚಿತ್ರ ಮತ್ತು ಸುದ್ದಿ ಇಲ್ಲಿದೆ. ಕೊಲ್ಕತ್ತೆಯ ಕೂಡ್‌ಘಾಟ್ (Kudghat) ಪ್ರದೇಶದಲ್ಲಿ ಒಂದು ಗೂಡಂಗಡಿಯಿದೆ. “ದುಯಿ ಭಾಯೀ” (ಇಬ್ಬರು ಸೋದರರು) ಎಂಬ ಹೆಸರಿನ ಚಪ್ಪಲಿ ಹಾಗೂ ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ.

“ನಾನು ಈ ಅಂಗಡಿಯಿಂದ ಐದು ನಿಮಿಷದಷ್ಟು ದೂರದಲ್ಲಿದ್ದ ಮನೆಯಲ್ಲಿ ಹುಟ್ಟಿ ಬೆಳೆದಿದ್ದೆ. ಈ ಅಂಗಡಿ ಇನ್ನೂ ಇದೆ ಎಂದು ತಿಳಿದು ಹರ್ಷವಾಗುತ್ತಿದೆ!,” “ನಾನು ಹತ್ತಿರದಲ್ಲಿಯೇ ಕೆಲಸ ಮಾಡುತ್ತೇನೆ. ಶೂ ರಿಪೇರಿಗೆ ನಾನು ಯಾವಾಗಲೂ ಇಲ್ಲಿಯೇ ಹೋಗುವುದು,” ಎಂದು ಈ ಅಂಗಡಿಯ ಪರಿಚಯವಿರುವವರು ಪ್ರತಿಕ್ರಿಯಿಸಿದ್ದಾರೆ. “ಇದೆಷ್ಟು ಸುಂದರ ಸಂಬಂಧ! ಇವರ ಸಂತತಿ ಸಾವಿರವಾಗಲಿ,” “ಸಾಮರಸ್ಯದ ಸಹಿಷ್ಣುತೆಯ ಧರ್ಮನಿರಪೇಕ್ಷತೆಯ ಈ ಭಾರತಕ್ಕೆ ಮತ್ತೆ ಮರಳೋಣ,” ಮೊದಲಾಗಿ ನೂರಾರು ಜನ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್​ ಎಂದ ನೆಟ್ಟಿಗರು

ಈ ಇಬ್ಬರಂತೆ ಸೋದರರು, ಸೋದರಿಯರು ಹತ್ತಿರ ಬಂದು ಒಟ್ಟಿಗೆ ಕೆಲಸ ಮಾಡತೊಡಗಿದರೆ ಎಲ್ಲರಿಗೂ ಒಳ್ಳೆಯದಲ್ಲವೇ? ಮೇಲಿನ ಚಿತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿದಂತೆ, “ಚಪ್ಪಲಿ ಬ್ಯಾಗಳನ್ನು ರಿಪೇರಿ ಮಾಡಿದಂತೆ ಈ ಇಬ್ಬರು ಸೋದರರು ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ತಿದ್ದಿ ಸರಿಪಡಿಸಲಿ.”

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಅತಿಯಾದ ಮತೀಯ ಭಾವನೆಗಳ ಪ್ರದರ್ಶನದ, ನಕಾರಾತ್ಮಕತೆಯ, ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಸಹಬಾಳ್ವೆಯನ್ನು ಸಾರುವ ಇಂಥ ನಿದರ್ಶನಗಳು ಹೆಚ್ಚಾಗಬೇಕು. ನಿಮ್ಮ ದೃಷ್ಟಿಗೂ ಇಂಥ ಸಾಮರಸ್ಯದ ಉದಾಹರಣೆಗಳು ಬಿದ್ದಿದ್ದಲ್ಲಿ ಅವನ್ನು ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:31 pm, Wed, 7 June 23

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ