AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ

Fraternity : 'ಇಬ್ಬರು ಸೋದರರು'; ಚಪ್ಪಲಿ, ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ. ಇದು ನಿಜವಾದ ಭಾರತ ಎನ್ನುತ್ತಿರುವ ನೆಟ್ಟಿಗರು.

Viral Video: “ದುಯಿ ಭಾಯೀ” ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ಸರಿಪಡಿಸಲಿ
ಕೊಲ್ಕತ್ತೆಯಲ್ಲಿರುವ ''ದುಯೀ ಭಾಯೀ'' ಚಪ್ಪಲಿ ಅಂಗಡಿ
ಶ್ರೀದೇವಿ ಕಳಸದ
|

Updated on:Jun 07, 2023 | 4:35 PM

Share

Viral Video : “ಇದು ನನ್ನ ಭಾರತ”, “ಇದು ನಿಜವಾದ ಭಾರತ”, “ಹಳೆಯ ಭಾರತದ ಸಣ್ಣ ಕುರುಹು” ಎಂಬಿತ್ಯಾದಿ ವಿಶೇಷಣಗಳೊಂದಿಗೆ ಟ್ವಿಟರ್​ನಲ್ಲಿ ಜನರು ಪ್ರತಿಕ್ರಿಯಿಸುತ್ತಿರುವ ಒಂದು ಅಪೂರ್ವ ಚಿತ್ರ ಮತ್ತು ಸುದ್ದಿ ಇಲ್ಲಿದೆ. ಕೊಲ್ಕತ್ತೆಯ ಕೂಡ್‌ಘಾಟ್ (Kudghat) ಪ್ರದೇಶದಲ್ಲಿ ಒಂದು ಗೂಡಂಗಡಿಯಿದೆ. “ದುಯಿ ಭಾಯೀ” (ಇಬ್ಬರು ಸೋದರರು) ಎಂಬ ಹೆಸರಿನ ಚಪ್ಪಲಿ ಹಾಗೂ ಚರ್ಮದ ಚೀಲಗಳನ್ನು ರಿಪೇರಿ ಮಾಡುವ ಈ ಅಂಗಡಿಯ ವಿಶೇಷವೆಂದರೆ ಆ ಇಬ್ಬರಲ್ಲಿ ಒಬ್ಬ ಭಾಯಿ ಹಿಂದೂ ಹಾಗೂ ಇನ್ನೊಬ್ಬ ಮುಸಲ್ಮಾನ.

“ನಾನು ಈ ಅಂಗಡಿಯಿಂದ ಐದು ನಿಮಿಷದಷ್ಟು ದೂರದಲ್ಲಿದ್ದ ಮನೆಯಲ್ಲಿ ಹುಟ್ಟಿ ಬೆಳೆದಿದ್ದೆ. ಈ ಅಂಗಡಿ ಇನ್ನೂ ಇದೆ ಎಂದು ತಿಳಿದು ಹರ್ಷವಾಗುತ್ತಿದೆ!,” “ನಾನು ಹತ್ತಿರದಲ್ಲಿಯೇ ಕೆಲಸ ಮಾಡುತ್ತೇನೆ. ಶೂ ರಿಪೇರಿಗೆ ನಾನು ಯಾವಾಗಲೂ ಇಲ್ಲಿಯೇ ಹೋಗುವುದು,” ಎಂದು ಈ ಅಂಗಡಿಯ ಪರಿಚಯವಿರುವವರು ಪ್ರತಿಕ್ರಿಯಿಸಿದ್ದಾರೆ. “ಇದೆಷ್ಟು ಸುಂದರ ಸಂಬಂಧ! ಇವರ ಸಂತತಿ ಸಾವಿರವಾಗಲಿ,” “ಸಾಮರಸ್ಯದ ಸಹಿಷ್ಣುತೆಯ ಧರ್ಮನಿರಪೇಕ್ಷತೆಯ ಈ ಭಾರತಕ್ಕೆ ಮತ್ತೆ ಮರಳೋಣ,” ಮೊದಲಾಗಿ ನೂರಾರು ಜನ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್​ ಎಂದ ನೆಟ್ಟಿಗರು

ಈ ಇಬ್ಬರಂತೆ ಸೋದರರು, ಸೋದರಿಯರು ಹತ್ತಿರ ಬಂದು ಒಟ್ಟಿಗೆ ಕೆಲಸ ಮಾಡತೊಡಗಿದರೆ ಎಲ್ಲರಿಗೂ ಒಳ್ಳೆಯದಲ್ಲವೇ? ಮೇಲಿನ ಚಿತ್ರಕ್ಕೆ ಒಬ್ಬರು ಪ್ರತಿಕ್ರಿಯಿಸಿದಂತೆ, “ಚಪ್ಪಲಿ ಬ್ಯಾಗಳನ್ನು ರಿಪೇರಿ ಮಾಡಿದಂತೆ ಈ ಇಬ್ಬರು ಸೋದರರು ಮತೀಯತೆಯ ವಿಷದಿಂದ ಕಲುಷಿತವಾದ ಭಾರತೀಯರ ಹೃದಯಗಳನ್ನೂ ತಿದ್ದಿ ಸರಿಪಡಿಸಲಿ.”

ಇದನ್ನೂ ಓದಿ : Viral Video: ಬನ್ನೇರುಘಟ್ಟದಲ್ಲಿ ಚಿರತೆಮರಿಗಳಿಗೆ ಮರುಜೀವ ಕೊಡುತ್ತಿರುವ ಸಾವಿತ್ರಮ್ಮ

ಅತಿಯಾದ ಮತೀಯ ಭಾವನೆಗಳ ಪ್ರದರ್ಶನದ, ನಕಾರಾತ್ಮಕತೆಯ, ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬುತ್ತಿರುವ ಈ ಕಾಲದಲ್ಲಿ ಸಹಬಾಳ್ವೆಯನ್ನು ಸಾರುವ ಇಂಥ ನಿದರ್ಶನಗಳು ಹೆಚ್ಚಾಗಬೇಕು. ನಿಮ್ಮ ದೃಷ್ಟಿಗೂ ಇಂಥ ಸಾಮರಸ್ಯದ ಉದಾಹರಣೆಗಳು ಬಿದ್ದಿದ್ದಲ್ಲಿ ಅವನ್ನು ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:31 pm, Wed, 7 June 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್