AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!

Adipurush: ಒಮ್ಮೆಯಲ್ಲ ಎರಡು ಸಲ ಅಲ್ಲ, ಪ್ರಪಂಚದಾದ್ಯಂತ ಪ್ರತಿ ಪ್ರದರ್ಶನಕ್ಕೂ ಬಂದು ಕೂತು ಇಂಥಾ ಸಿನೆಮಾ ನೋಡಬೇಕೆಂದರೆ ಹನುಮನಿಗೆಂಥ ಗ್ರಹಚಾರ ಬಡಿದಿರಬೇಡ? ಇದೆಂಥಾ ಭಕ್ತಿ? ವಿಡಿಯೋ ನೋಡಿ ನೀವೇ ಹೇಳಿ.

Viral Video: ಆದಿಪುರುಷ್​; ಪ್ರತಿ ಪ್ರದರ್ಶನದಲ್ಲೂ ಹನುಮಂತನಿಗಾಗಿ ಒಂದು ಸೀಟು ಕಾಯ್ದಿರಿಸಿ!
ಆದಿಪುರುಷ್ ತಂಡ
ಶ್ರೀದೇವಿ ಕಳಸದ
|

Updated on:Jun 07, 2023 | 3:57 PM

Share

Hanuman : ರಾವಣನ ಒಡ್ಡೋಲಗದಲ್ಲಿ ಪೀಠ ಸಿಗದಿದ್ದಾಗ ತನ್ನ ಬಾಲವನ್ನೇ ಎತ್ತರೆತ್ತರ ಸುರುಳಿ ಸುತ್ತಿ ಅದರ ಮೇಲೆ ರಾವಣನೆದುರು ಅವನಿಗೂ ಎತ್ತರಕ್ಕೆ ಕೂತ ರಾಮದೂತ ಹನುಮನಿಗೆ ಚಿತ್ರಮಂದಿರಗಳಲ್ಲಿ ಸೀಟೊಂದನ್ನು ಕಾಯ್ದಿರಿಸಬೇಕೆಂಬ ಅಹವಾಲು ಬಂದಿದೆ. ಇದೆಂಥಾ ವಿಚಿತ್ರ? ಎಂಥಾ ಉದ್ಧಟತನ ಅನ್ನುತ್ತೀರಾ? ಕಣ್ತುಂಬಾ ನೀರು ತುಂಬಿಕೊಂಡು ಬಿಕ್ಕುತ್ತಾ ಈ ಮನವಿ ಸಲ್ಲಿಸಿದವರು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ “ಆದಿಪುರುಷ್” (Adipurush) ಎಂಬ ಚಿತ್ರದ ನಿರ್ದೇಶಕ ಓಂ ರಾವುತ್ (Om Raut). ನೆರೆದ ಸಭೆಯಲ್ಲಿ ಈ ಅತಿಭಾವುಕತೆಯ ಕ್ಷಣಕ್ಕೆ ಸಾಕ್ಷಿಯಾದ ಜನರು ಹಾಗೂ ಇದರ ವಿಡಿಯೋವನ್ನು ನಂತರ ನೋಡಿದವರಲ್ಲಿ ಕೆಲವರು ಹರ್ಷೋದ್ಗಾರದಿಂದ ಉನ್ಮತ್ತರಾಗಿದ್ದರೆ ಉಳಿದವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

“ನಮ್ಮ ತಾಯಿ ಯಾವಾಗಲೂ ಹೇಳುತ್ತಿದ್ದರು, ರಾಮಾಯಣದ ಪ್ರದರ್ಶನ ಎಲ್ಲೇ ನಡೆದರೂ ಸಾಕ್ಷಾತ್ ಹನುಮಾನ್ ಅಲ್ಲಿಗೆ ಬಂದು ಆಟ ನೋಡುತ್ತಾನೆ. ಆದ್ದರಿಂದ ಪ್ರಪಂಚಾದ್ಯಂತ ಆದಿಪುರುಷ್ ಸಿನೆಮಾದ ಪ್ರತಿ ಚಿತ್ರಮಂದಿರದ ಪ್ರತಿ ಪ್ರದರ್ಶನದಲ್ಲೂ ಅವನಿಗಾಗಿ ಒಂದು ಸೀಟು ಕಾದಿರಿಸಬೇಕೆಂದು ನಾನು ನಮ್ಮ ನಿರ್ಮಾಪಕರು ಹಾಗೂ ವಿತರಕರಿಗೆ ವಿನಂತಿಸುತ್ತೇನೆ,” ಎಂದು ಗದ್ಗದಿತ ಧ್ವನಿಯಲ್ಲಿ ಹೇಳುತ್ತ ಕೊನೆಗೆ ಅತ್ತೇಬಿಟ್ಟ ರಾವುತ್ ಅವರನ್ನು ವೇದಿಕೆಯ ಮೇಲಿದ್ದ ನಾಯಕನಟ ಪ್ರಭಾಸ್ (Prabhas) ಹಾಗೂ ನಿರ್ಮಾಪಕರು ಸಮಾಧಾನಿಸಿದ್ದನ್ನು ನೀವಿಲ್ಲಿ ನೋಡಬಹುದು. ಸೂಕ್ಷ್ಮವಾಗಿ ಗಮನಿಸಿದರೆ ವೇದಿಕೆಯ ಮೇಲಿದ್ದವರ ಮುಖದ ಮೇಲೆ ಗೊಂದಲ ಹಾಗೂ ತೆಳುಹಾಸ ಕಾಣುತ್ತದೆ.

ಇದನ್ನೂ ಓದಿ : Viral Video: ಭಜ್ಜಿಯ ಅಜ್ಜನಲ್ಲರಳಿರುವ ನಗುವಿಗೆ ಬೆಲೆ ಎಷ್ಟೆಂದು ತಿಳಿದಿದೆಯೇ?; ಕಲಾವಿದನಿಗೆ ಶಭಾಷ್​ ಎಂದ ನೆಟ್ಟಿಗರು

ಇದಕ್ಕೆ ಒಂದಷ್ಟು ಜನ ಅಷ್ಟೇ ಭಾವುಕರಾಗಿ ಪ್ರತಿಕ್ರಿಯಿಸಿದ್ದರೂ ಹಲವರು “ಇದೆಂಥಾ ಗಿಮಿಕ್, ಕೆಟ್ಟ ಮಾರ್ಕೆಟಿಂಗ್ ತಂತ್ರ,” ಎಂದಿದ್ದಾರೆ. “ಮೊದಲ ದಿನದ ನಂತರ ಬಹುತೇಕ ಸೀಟುಗಳು ಖಾಲಿಯೇ ಇರುತ್ತವೆ, ಚಿಂತೆ ಬೇಡ,” “ಅರ್ಧ ಚಿತ್ರಮಂದಿರ ಖಾಲಿಯೇ ಇರುತ್ತದೆ ಬಿಡಯ್ಯ, ಆಗ ನೀನು ನಿಜಕ್ಕೂ ಅಳುತ್ತೀ,” “ಆಂಜನೇಯ ಈ ಚಿತ್ರದ ಟ್ರೇಲರ್ ಏನಾದರೂ ನೋಡಿದ್ದರೆ ಇತ್ತ ಮುಖ ಕೂಡ ಹಾಕುವುದಿಲ್ಲ,” ಮೊದಲಾಗಿ ಗೇಲಿ ಮಾಡಿದ್ದಾರೆ.

ಇದನ್ನೂ ಓದಿ : Viral Video: ಕಲ್ಲಂಗಡಿ ಆಯ್ಕೆಯಲ್ಲಿ ಎತ್ತಿದ ಕೈ ನನ್ನ ಹೆಂಡತಿ; ಹೆಮ್ಮೆಪಡುತ್ತಿರುವ ಗಂಡ!

ಒಮ್ಮೆಯಲ್ಲ ಎರಡು ಸಲ ಅಲ್ಲ, ಎಲ್ಲೆಡೆ ಪ್ರತಿ ಶೋಗೂ ಬಂದು ಕೂತು ಇಂಥಾ ಸಿನೆಮಾ ನೋಡಬೇಕೆಂದರೆ ಹನುಮನಿಗೆಂಥ ಗ್ರಹಚಾರ ಬಡಿದಿರಬೇಡ? ಇದೆಂಥಾ ಭಕ್ತಿ? ನೀವೇ ಹೇಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:38 pm, Wed, 7 June 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್