Viral: ಇದು ಅತಿಯಾದ ಚೇಷ್ಟೆಯೋ? ಬೆಂಗಳೂರಿನ ಈ ಬಾಲಕಿ ಅಪಹರಣದ ನಾಟಕವಾಡಿದಳಾ?

Electronic City: ಮುಂದಿನ ಒಂದೆರಡು ನಿಮಿಷಗಳಲ್ಲಿ ಪ್ರತ್ಯಕ್ಷಳಾದ ಹುಡುಗಿ, ಯಾರೋ ಅಪರಿಚಿತ ಕರೆಗಂಟೆ ಬಾರಿಸಿದ, ಬಾಗಿಲು ತೆರೆದಾಗ ಒಳನುಗ್ಗಿ ತನ್ನನ್ನು ಟೆರೇಸಿಗೆ ಎಳೆದುಕೊಂಡು ಹೋದ, ಅವನ ಕೈ ಕಚ್ಚಿ ತಾನು ಪಾರಾಗಿ ಬಂದೆ ಎಂದಿದ್ದಾಳೆ.

Viral: ಇದು ಅತಿಯಾದ ಚೇಷ್ಟೆಯೋ? ಬೆಂಗಳೂರಿನ ಈ ಬಾಲಕಿ ಅಪಹರಣದ ನಾಟಕವಾಡಿದಳಾ?
ಸೌಜನ್ಯ : ಅಂತರ್ಜಾಲ
Follow us
| Updated By: ಶ್ರೀದೇವಿ ಕಳಸದ

Updated on:Jun 14, 2023 | 6:07 PM

Kidnapping: ನಮ್ಮೆಲ್ಲರನ್ನೂ ತಲ್ಲಣಗೊಳಿಸಬೇಕಾದ ಘಟನೆಯೊಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City, Bengaluru) ಬಹುಮಹಡಿ ವಸತಿ ಸಮುಚ್ಚಯದಲ್ಲಿ ಇತ್ತೀಚಿಗೆ ನಡೆದಿದ್ದು ಅದರ ರೋಚಕ ವಿವರಗಳು  ವಾಟ್ಸ್ಯಾಪ್‌ ಗುಂಪುಗಳಲ್ಲೆಲ್ಲ ವ್ಯಾಪಕವಾಗಿ ಹರಿದಾಡುತ್ತಿವೆ. ಪುಟ್ಟ ಹುಡುಗಿಯೊಬ್ಬಳು ತನ್ನ ತುಂಟಾಟಗಳಿಂದ ತನ್ನ ಪಾಲಕರನ್ನು ನೆರೆಹೊರೆಯವರನ್ನು ಆತಂಕಕ್ಕೆ ತಳ್ಳಿದ್ದು, ಪೊಲೀಸರಿಗೆ ಗೊಂದಲವುಂಟುಮಾಡಿದ್ದಲ್ಲದೇ, ಡೆಲಿವರಿ ಏಜೆಂಟ್​ಗೆ ವಿನಾಕಾರಣ ಶಿಕ್ಷೆಗೆ ಗುರಿಮಾಡಿದ ಘಟನೆ ಇದಾಗಿದೆ. ಇದರ ವಿವರಗಳನ್ನು ಓದಿದರೆ ಇವು ಬಾಲ್ಯಸಹಜ ಚೇಷ್ಟೆಗಳೋ!? ಎಂಬ ಜಿಜ್ಞಾಸೆ ಉಂಟಾಗುವ ಸಾಧ್ಯತೆ ಇದೆ.

ತಮ್ಮನನ್ನು ಶಾಲೆಗೆ ಬಿಟ್ಟು ಬರುತ್ತೇವೆ, ನೀನು ಮನೆಯಲ್ಲಿಯೇ ಇರು ಎಂದು  ಬೆಳಗ್ಗೆ ಒಂಬತ್ತರ ಸುಮಾರಿಗೆ ಶಾಲೆಗೆ ಹೊರಟಿದ್ಧಾರೆ ಎಂಟು ವರ್ಷದ ಬಾಲಕಿಯ ತಂದೆ ತಾಯಿ. ಹದಿನೈದಿಪ್ಪತ್ತು ನಿಮಿಷಗಳ ನಂತರ ಮರಳಿದ ಅವರು ಮನೆಯ ಬಾಗಿಲು ಹೊರಗಿಂದ ಲಾಕ್ ಆಗಿದ್ದನ್ನು ನೋಡಿ ಗಾಬರಿಯಿಂದ ಮಗಳನ್ನು ಹುಡುಕತೊಡಗಿದ್ದಾರೆ. ಇವರೊಂದಿಗೆ ನೆರೆಮನೆಯವರೊಬ್ಬರು ಜೊತೆಯಾಗಿದ್ದಾರೆ. ಮುಂದಿನ ಒಂದೆರಡು ನಿಮಿಷಗಳಲ್ಲಿ ಪ್ರತ್ಯಕ್ಷಳಾದ ಹುಡುಗಿ, ಯಾರೋ ಅಪರಿಚಿತ ಕರೆಗಂಟೆ ಬಾರಿಸಿದ, ಬಾಗಿಲು ತೆರೆದಾಗ ಒಳನುಗ್ಗಿ ತನ್ನನ್ನು ಟೆರೇಸಿಗೆ ಎಳೆದುಕೊಂಡು ಹೋದ, ಅವನ ಕೈ ಕಚ್ಚಿ ತಾನು ಪಾರಾಗಿ ಬಂದೆ’ ಎಂದಿದ್ದಾಳೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Che Guevara Birth Anniversary: ”ಮೈಬಗ್ಗಿಸಿ ದುಡಿದರೆ ನೀವು ಗಂಡಸರಾಗುತ್ತೀರಿ”; ಗೇ ಜನರಿಗೆ ಹೀಗೆ ಹೇಳಿದ್ದನೇ ಚೆ ಗುವಾರ್?

ಹುಡುಗಿಯ ಅಪ್ಪ ಮತ್ತು ನೆರೆಯವರು ಸೆಕ್ಯುರಿಟಿಯವರಲ್ಲಿ ವಿಚಾರಿಸಿದಾಗ, ಆ ಸಮಯದಲ್ಲಿ ಒಬ್ಬ ಡೆಲಿವರಿ ಏಜೆಂಟ್ ಒಳಗೆ ಬಂದಿದ್ದು ತಿಳಿದು ಬಂದಿದೆ. ಬಾಲಕಿ ಇವನೇ ಅವನು ಎಂದು ಗುರುತಿಸಿದಾಗ, ಅಲ್ಲಿದ್ದವರು ಅವನಿಗೆ ಏಟು ಕೊಟ್ಟಿದ್ದಾರೆ. ಅಷ್ಟರಲ್ಲಿ ಸುದ್ದಿ ಪೊಲೀಸರಿಗೆ ತಲುಪಿ ಅವರು ತನಿಖೆ ಶುರು ಮಾಡಿದಾಗ CCTVಯಲ್ಲಿ ಆ ಡೆಲಿವರಿ ಏಜೆಂಟ್​ ಸಮುಚ್ಚಯದೊಳಗೆ ಬಂದದ್ದೇ 9:40ಕ್ಕೆ ಎಂದು ತಿಳಿದು ಬಂದಿದೆ. ಅವನ ಬೆಂಬಲಕ್ಕೆ ನೂರಾರು ಡೆಲಿವರಿ ಏಜೆಂಟರುಗಳು ಬಂದು ಗೇಟಿನ ಹೊರಗೆ ನೆರೆದಿದ್ದಾರೆ. ಅವರನ್ನು ಚದುರಿಸಿ ಪೊಲೀಸರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಮುಂದೆ ಇನ್ನೊಬ್ಬ ಸಂದೇಹಿತ ವ್ಯಕ್ತಿಯನ್ನು ತನಿಖೆಗೊಳಪಡಿಸಿ ಅವನೂ ನಿರ್ದೋಷಿ ಎಂದು ಸಾಬೀತಾಗಿದೆ.

ಇದನ್ನೂ ಓದಿ : Viral Video: ಜೀನಾ ಇಸೀ ಕಾ ನಾಮ್ ಹೈ; ಅಜ್ಜಿಯ ಡ್ಯಾನ್ಸ್​ ಮೂಡ್​ಗೆ ನೆಟ್ಟಿಗರೆಲ್ಲ ಫಿದಾ

ಹಾಗಿದ್ದರೆ ಆದದ್ದಾದರೂ ಏನು? ಇದು ಗೊತ್ತಾಗಿರುವುದು ಮರುದಿನ. ಪಕ್ಕದ ಕಟ್ಟಡವೊಂದರ CCTV ತುಣುಕುಗಳನ್ನು ಪರಿಶೀಲಿಸಿದಾಗ, ಹಿಂದಿನ ದಿನ 9ರಿಂದ 9.20ರವರೆಗೆ 8 ವರ್ಷದ ಆ ಹುಡುಗಿ ಟೆರೇಸ್ ಮೇಲೆ ಒಬ್ಬಳೇ ಓಡಾಡುತ್ತ, ಲಿಫ್ಟ್ ಮೂಲಕ ಪಕ್ಕದ ಕಟ್ಟಡಗಳ ಸುತ್ತು ಹೊಡೆಯುತ್ತಿದ್ದಳು. ಆ ಹೊತ್ತಿಗೆ ಮೇಲೆ ಬಂದ ನೆರೆಯವರನ್ನು ಕಂಡಕ್ಷಣ ತನ್ನ ತಂದೆತಾಯಿ ಮರಳಿರಬೇಕು, ತನ್ನನ್ನು ಹುಡುಕುತ್ತಿರಬೇಕು ಎಂಬುದು ಅರಿವಿಗೆ ಬಂದು ಆಕೆ ಹೀಗೆ ವರ್ತಿಸಿರಬಹುದು.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:46 pm, Wed, 14 June 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ