ಮದುವೆಯ ನಂತರ ಮೊದಲ ಸಲ ಮಗಳು ಮನೆಗೆ ಬಂದು ಸರ್ಪ್ರೈಸ್ ಕೊಟ್ಟಾಗ

Daughter Love : ಗಂಡನಮನೆಗೆ ಹೋದ ಮಗಳು ಹೇಗಿದ್ದಾಳೋ ಏನೋ, ಯಾವಾಗ ಬರುತ್ತಾಳೋ ಏನೋ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ ಅಪ್ಪ ಅಮ್ಮ. ಆದರೆ ಈಗಷ್ಟೇ ಮಾತನಾಡುತ್ತಿದ್ದವಳು ಪ್ರತ್ಯಕ್ಷವಾಗಿಬಿಟ್ಟರೆ? ನೋಡಿ ವಿಡಿಯೋ.

ಮದುವೆಯ ನಂತರ ಮೊದಲ ಸಲ ಮಗಳು ಮನೆಗೆ ಬಂದು ಸರ್ಪ್ರೈಸ್ ಕೊಟ್ಟಾಗ
Woman surprises parents by coming home after marriage for the first time
Follow us
| Updated By: ರಮೇಶ್ ಬಿ. ಜವಳಗೇರಾ

Updated on:Nov 15, 2022 | 6:30 PM

Viral Video : ಮಗಳನ್ನು ಮದುವೆ ಮಾಡಿ ಗಂಡನಮನೆಗೆ ಕಳಿಸುವುದೆಂದರೆ ಯಾವ ಅಪ್ಪ ಅಮ್ಮನಿಗೂ ಗಂಟಲುಬ್ಬಿ ಬರುತ್ತದೆ. ಎಷ್ಟೋ ತಿಂಗಳವರೆಗೆ ಜೀವದಲ್ಲಿ ಜೀವವಿಲ್ಲದಂತೆ ಅಪ್ಪ ಅಮ್ಮ ಒದ್ಧಾಡಿ ಹೋಗುತ್ತಾರೆ. ಇತ್ತ ಹೊಸಮನೆಗೆ ಹೋದ ಮಗಳೂ ಹೆಜ್ಜೆಹೆಜ್ಜೆಗೂ ಅಪ್ಪ ಅಮ್ಮನನ್ನು ನೆನಪಿಸಿಕೊಂಡು ದುಃಖಿಸುತ್ತಿರುತ್ತಾಳೆ. ಆದರೆ ಯಾವಾಗ ಮಗಳು ಮತ್ತೆ ತಮ್ಮ ಮನೆಗೆ ಬರುತ್ತಾಳೆ ಎಂದು ಕಾಯುವುದೇ ಅಪ್ಪ ಅಮ್ಮನ ಧ್ಯಾನವಾಗಿಬಿಡುತ್ತದೆ. ಹಾಗೆಯೇ ಯಾವಾಗ ಅವರನ್ನು ನೋಡುತ್ತೇನೆ ಎನ್ನುವ ಕಾತರ ಮಗಳದಾಗುತ್ತದೆ. ಈಗಿಲ್ಲಿ ವೈರಲ್ ಆದ ವಿಡಿಯೋ ನೋಡಿ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Barathi Chidambaram (@barathi_aravind)

ರಾತ್ರಿಹೊತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಗಳು ತನ್ನ ಅಪ್ಪ ಅಮ್ಮನೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾಳೆ. ಆದರೆ ಅಪ್ಪ ಅಮ್ಮನಿಗೆ ಮಗಳು ತಮ್ಮ ಮನೆಗೇ ಬರುತ್ತಿದ್ದಾಳೆ ಎಂಬ ಅರಿವಿಲ್ಲ. ಮಗಳೂ ಇದನ್ನು ತಿಳಿಯಪಡಿಸಿಲ್ಲ. ಕೊನೆಗೆ ಗೇಟ್​ತನಕ ಬಂದಾಗಲೂ ಅವರಿಗೆ ಅರಿವಾಗಿಲ್ಲ. ನಂತರ ಮಗಳು ಹೇಳಿದಾಗಲೇ ಅಪ್ಪ ಅಮ್ಮ ಅಚ್ಚರಿಗೆ ಒಳಗಾಗಿದ್ದಾರೆ. ಅಪ್ಪನಂತೂ ಭಾವುಕನಾಗಿ ಮಗಳನ್ನು ಎತ್ತಿಕೊಂಡು ಕುಣಿದಾಡಿದ್ಧಾರೆ.

ಹೇಗಿದೆ ಈ ವಿಡಿಯೋ? ನೆಟ್ಟಿಗರನೇಕರು ಇದನ್ನು ನೋಡಿ ತಮ್ಮ ತಮ್ಮ ಮಕ್ಕಳನ್ನು, ಪೋಷಕರನ್ನು ನೆನಪಿಸಿಕೊಂಡು ಹನಿಗಣ್ಣಾಗಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಮಿಲಿಯನ್​ ಜನರು ಇದನ್ನು ನೋಡಿದ್ದಾರೆ.

ಇಂಥ ಕ್ಷಣಗಳು ಅಷ್ಟೇ ಮಧುರ ಮತ್ತು ಅಷ್ಟೇ ಭಾವುಕ ಅಲ್ಲವೆ?

ನೋಡಿ ಮತ್ತಷ್ಟು ವೈರಲ್​ ವಿಡಿಯೋಗಳನ್ನು

Published On - 6:02 pm, Tue, 15 November 22

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ