AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಲೈಕ್ಸ್ ಗಳಿಸುವುದಕ್ಕೋಸ್ಕರ ವಿಮಾನವನ್ನೇ ನೆಲಕ್ಕಪ್ಪಳಿಸಿದ ಭೂಪನಿಗೆ 20 ವರ್ಷ ಜೈಲು?

Social Media : 'ವ್ಯೂವ್ಸ್​ ಬದಲು ಇದನ್ನವನು ಧರ್ಮಕ್ಕೋಸ್ಕರ ಮಾಡಿದ್ದರೆ ಅದರ ಪರಿಣಾಮವೇ ಬೇರೆಯಾಗುತ್ತಿತ್ತು,’ ಎಂದು ಒಬ್ಬರು. ಟಿಕ್​ಟಾಕರ್​ಗಳು, ಯೂಟ್ಯೂಬರ್​ಗಳು ಕಂಟೆಂಟ್​ಗಾಗಿ ನಡೆಸುವ ಸರ್ಕಸ್​ಗಳು ಅಪಾಯಕಾರಿ ಎಂದು ಹಲವರು.

Viral: ಲೈಕ್ಸ್ ಗಳಿಸುವುದಕ್ಕೋಸ್ಕರ ವಿಮಾನವನ್ನೇ ನೆಲಕ್ಕಪ್ಪಳಿಸಿದ ಭೂಪನಿಗೆ 20 ವರ್ಷ ಜೈಲು?
ವಿಮಾನದಿಂದ ನೆಗೆಯುತ್ತಿರುವ ಕಂಟೆಂಟ್​ ಕ್ರಿಯೇಟರ್​
ಶ್ರೀದೇವಿ ಕಳಸದ
|

Updated on:Jun 05, 2023 | 12:07 PM

Share

Social Media : ಇದು ಸೃಜನಶೀಲ ಆರ್ಥಿಕತೆಯ (Creator Economy) ಯುಗ. ಜನರ ಗಮನವೇ (attention) ಇಂದಿಲ್ಲಿ ಚಲಾವಣೆಯಲ್ಲಿರುವ ನಾಣ್ಯ. Content is king ಎನ್ನುವುದಾರೆ ವೈರಲ್ ಕಂಟೆಂಟ್ ಎನ್ನುವುದು ಚಕ್ರಾಧಿಪತಿ. ಲಕ್ಷಾಂತರ ಲೈಕುಗಳು ನೋಟಗಳು ಸಿಕ್ಕರೆ ಸ್ವರ್ಗಾರೋಹಣ. ಇಲ್ಲದಿದ್ದಲ್ಲಿ ಪ್ರಪಾತ ದರ್ಶನ. ಇಲ್ಲೊಬ್ಬ ಯೂಟ್ಯೂಬರ್ ತನ್ನ ವಿಡಿಯೋವನ್ನು ಹಿಟ್ ಮಾಡಲು ಪ್ರಪಾತ ದರ್ಶನವನ್ನೇ ಮಾಡಿಸಿದ್ದಾನೆ. ತಾನು ಹಾರಿಸುತ್ತಿದ್ದ ಕಿರುವಿಮಾನದಿಂದ ಜಿಗಿದು ನಿಯಂತ್ರಣ ತಪ್ಪಿದ ವಿಮಾನ ನೆಲಕ್ಕಚ್ಚುವಂತೆ ಮಾಡಿದ್ದಾನೆ. ಅದ್ಯಾಕೆ ಅಂತೀರಾ? ಸುಮ್ಮನೇ ಒಂದು ಕಡೆಯಿಂದ ಇನ್ನೊಂದು ಕಡೆ ವಿಮಾನ ಹಾರಿಹೋದರೆ ಅದನ್ನ್ಯಾರು ನೋಡುತ್ತಾರಲ್ಲವೆ?

ಇವನ ಇಂಥ ಸಾಹಸಕ್ಕೆ 20 ವರ್ಷ ಜೈಲು ಶಿಕ್ಷೆ ದಕ್ಕುವ ಸಂಭವವಿದೆಯಂತೆ. ‘ಮೂರ್ಖತನದ ಆಟವಾಡಿದವರಿಗೆ ತಕ್ಕ ಬಹುಮಾನ ದಕ್ಕುವುದು,’ ಎಂದೊಬ್ಬರು ತೀರ್ಪು ನೀಡಿದ್ದಾರೆ. ‘ನಾನು ಜಿಟಿಎ (GTA) ಆಡುವಾಗ ಇದನ್ನು ಲೆಕ್ಕವಿಲ್ಲದಷ್ಟು ಸಲ ಮಾಡಿದ್ದೇನೆ ಮತ್ತು ಕ್ಷಣಾರ್ಧದಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದೇನೆ ಕೂಡ’ ಎಂದು ವಿಡಿಯೋ ಗೇಮರ್ ಒಬ್ಬರು ತಮ್ಮ ಅಕ್ಕಿಕಾಳು ಎಸೆದಿದ್ದಾರೆ. ‘ಇದಕ್ಕೆ ಇಪ್ಪತ್ತು ವರ್ಷದ ಶಿಕ್ಷೆಯೇ? ಅತಿಯಾಯಿತು.’ ಎಂದಿದ್ದಾರೆ ಒಬ್ಬರು. ಒಟ್ಟಿನಲ್ಲಿ ಆ ಯೂಟ್ಯೂಬರ್ ಬಗ್ಗೆ ಸಹಾನುಭೂತಿ ತೋರಿಸಿದವರು ಕೆಲ ಮಂದಿಯಷ್ಟೇ.

ಇದನ್ನೂ ಓದಿ : Viral Video: ಕಾಮ್​ ಡೌನ್​; ಬೆಲ್ಲಿ ಡ್ಯಾನ್ಸ್ ನೋಡಿ; ”ಮಂಡೇ” ಬಿಸಿ ಓಡಿಸಿ

‘ಇದೇ ಕೆಲಸವನ್ನು ಅವನು ಧರ್ಮದ ಕಾರಣದಿಂದ ಮಾಡಿದ್ದರೆ ಆ ಕತೆಯೇ ಬೇರೆಯಿರುತ್ತಿತ್ತು,’ ಎಂದೊಬ್ಬರು ಹೇಳಿ ಇದಕ್ಕೆ ಹೊಸದೇ ಆಯಾಮ ಕೊಟ್ಟಿದ್ದಾರೆ. ಅವನಿಗೆ ಬೇಕಾಗಿದ್ದು ಜನರ ಗಮನ. ಅದಂತೂ ದಂಡಿಯಾಗಿ ದಕ್ಕಿದೆ. ಜೈಲಿಗೆ ಹೋದರೆ ಅಲ್ಲಿಯೂ ಏನಾದರೂ ಹುಂಬತನ ಮಾಡದೇ ಬಿಟ್ಟಾನೆಯೇ?

ಇದನ್ನೂ ಓದಿ : Viral Video: ಯಾರಿಗೆಲ್ಲ ಬೇಕು ಈ ಬೌಲ್​ ಕಟ್​, ಎಲ್ಲಾ ಸಾಲಾಗಿ ಬನ್ರಿ 

ಹೌದು, ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್‌ಗಳು ಮತ್ತು ಟಿಕ್‌ಟಾಕರ್​ಗಳು ವ್ಯೂವ್ಸ್​​ಗಾಗಿ ನಡೆಸುವ ಅಪಾಯಕಾರೀ ಸರ್ಕಸ್​​ಗಳು ಆತಂಕಕಾರಿಯಾಗಿವೆ. ಹೇಳದೆ ಕೇಳದೆ ಜನರ ಮನೆಗಳಿಗೆ ನುಗ್ಗುವುದದರಿಂದ ಹಿಡಿದು ಅಪಘಾತಕ್ಕೀಡಾದ ವಿಮಾನಗಳವರೆಗೆ. ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ನೀವವರನ್ನು ಪ್ರಶ್ನಿಸಿ, ನಾವು ಕಂಟೆಂಟ್​ ಕ್ರಿಯೇಟರ್ಸ್ ಎಂದು ಹೇಳುತ್ತಾರೆ! ಎಂದು ಪ್ರತಿಕ್ರಿಯಿದ್ದಾರೆ ಇನ್ನೊಬ್ಬರು.

ಇದನ್ನು ನೋಡಿ ನಿಮಗೇನನ್ನಿಸಿತು? ಬರೆಯಿರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:06 pm, Mon, 5 June 23

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ