ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯಿಂದ ಬಂದ ದರ್ಶನ್​ನ  ವೃದ್ಧೆ ಅಭಿಮಾನಿ

ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯಿಂದ ಬಂದ ದರ್ಶನ್​ನ  ವೃದ್ಧೆ ಅಭಿಮಾನಿ
|

Updated on: Jul 01, 2024 | 1:59 PM

ದರ್ಶನ್ ಒಂದು ಹೆಣ್ಣಿನಿಂದ ತನ್ನ ಬದುಕು ಹಾಳು ಮಾಡಿಕೊಂಡಿದ್ದಾರೆ ಎಂದು ಹುಬ್ಬಳ್ಳಿಯಿಂದ ಬಂದಿರುವ ಮಹಿಳೆ ಹೇಳುತ್ತಾರೆ. ಅಫ್ ಕೋರ್ಸ್ ಅವರು ಪವಿತ್ರಾ ಗೌಡರನ್ನು ಉಲ್ಲೇಖಿಸಿ ಹೇಳುತ್ತಾರೆ. ಆದರೆ ಕೇವಲ ಪವಿತ್ರಾ ಗೌಡರನ್ನು ದೂರುವುವದರಿಂದ ಪ್ರಯೋಜನವಿಲ್ಲ, ಯಾಕೆಂದರೆ ಹೆಚ್ಚು ಕಡಿಮೆ 50-ವರ್ಷ ವಯಸ್ಸಿನ ದರ್ಶನ್ ಗೆ ಯಾವುದು ಸರಿ, ಯಾವುದು ತಪ್ಪೆಂಬ ವಿವೇಚನೆ ಇರಬೇಕಿತ್ತು.

ಆನೇಕಲ್ (ಬೆಂಗಳೂರು): ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಎಲ್ಲ ವಯೋಮಾನದ ಅಭಿಮಾನಿಗಳು ಇದ್ದಾರೆ. ದೃಶ್ಯಗಳಲ್ಲಿ ನಮ್ಮ ವರದಿಗಾರ್ತಿಯೊಂದಿಗೆ ಮಾತಾಡುತ್ತಿರುವ ಹಿರಿಯ ಮಹಿಳೆ ದರ್ಶನ್ ರನ್ನು ಕಂಡು ಮಾತಾಡಲು ಹುಬ್ಬಳ್ಳಿಯಿಂದ ಬಂದಿದ್ದಾರೆ. ತಾನು ದರ್ಶನ್ ಅಭಿನಯದ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ ಎಂದು ಹೇಳುವ ಮಹಿಳೆ ಉತ್ಕಟಾಭಿಮಾನದಲ್ಲಿ ಮತ್ತೇನೇನೋ ಹೇಳುತ್ತಾರೆ. ಆದರೆ ನಟನ ಬಗ್ಗೆ ಅವರಿಗೆ ಅತೀವ ಪ್ರೀತಿ,ವಾತ್ಸಲ್ಯ ಮತ್ತು ಮಮತೆ ಇರೋದು ಮಾತುಗಳಲ್ಲಿ ವ್ಯಕ್ತವಾಗುತ್ತದೆ. ತನ್ನನ್ನು ಜೈಲು ಅಧಿಕಾರಿಗಳು ಒಳಗಡೆ ಹೋಗಲು ಬಿಡುತ್ತಿಲ್ಲ, ನಮ್ಮ ವರದಿಗಾರ್ತಿಯೇ ಅವಕಾಶ ಮಾಡಿಸಿಕೊಡಬೇಕೆಂದು ಅವರು ಹೇಳುತ್ತಾರೆ. ಸರಿ ಒಳಗೆ ಬಿಟ್ಟರೆ ದರ್ಶನ್ ಜೊತೆ ಏನು ಮಾತಾಡ್ತೀರಾ? ಅಂತ ಕೇಳಿದರೆ, ಎಲ್ಲಾನೂ ಮಾತಾಡ್ತೀನಿ, ನಿಂಗೆ ಎಲ್ಲ್ಲವೂ ಇತ್ತು, ನನ್ನಂಥ ಕೋಟ್ಯಾಂತರ ಅಭಿಮಾನಿಗಳಿದ್ದಾರೆ, ನಿನ್ನ ಕೈಯಾರೆ ಜೀವನ ಹಾಳುಮಾಡಿಕೊಂಡೆಯಲ್ಲ? ಯಾಕೆ ಹೀಗೆ ಮಾಡಿದೆ ಮಗಾ ಅಂತ ಕೇಳ್ತೀನಿ ಎಂದು ಒಬ್ಬ ತಾಯಲ್ಲಿರುವ ಕಕ್ಕಲತೆಯನ್ನು ಮಹಿಳೆ ತೋರುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಟ ದರ್ಶನ್ ರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದಾಗ ಗೆಲುವಿನ ನಗೆ ಬೀರಿದ್ದು ಅವರನ್ನು ಬಂಧಿಸಿದ್ದ ಎಸಿಪಿ ಚಂದನ್!

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ