ಪ್ರಾಮಾಣಿಕವಾಗಿ ದುಡಿದು ಸಂಬಳ ಕೇಳಿದ ಸಿಬ್ಬಂದಿಗೆ ಹೆದರಿಸಿದ ಅಧಿಕಾರಿಗಳ ಉದ್ಧಟತನಕ್ಕೆ ಶಿಕ್ಷೆಯಾಗುವುದೇ?
ಅವರ ಕೋಪಕ್ಕೆ ಮತ್ತೊಂದು ಕಾರಣವೇನೆಂದರೆ, ಈ ಜನ ಸಂಬಳ ಕೊಡಿ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಅಂತ ಕೇಳಿದಾಗ ಸಂಬಂಧಪಟ್ಟ ಅಧಿಕಾರಿಗಳು ಬೆದರಿಕೆ ಒಡ್ಡಿದ್ದಾರಂತೆ.
ಇಲ್ಲಿ ಪ್ರತಿಭಟನೆ ಮಾಡುತ್ತಿರುವರು ಕೋವಿಡ್ ವಾರಿಯರ್ಸ್ ಅನಿಸಿಕೊಳ್ಳದಿರಬಹುದು. ಆದರೆ ಕೊವಿಡ್-19 ಪಿಡುಗು ಬೆಂಗಳೂರು ನಗರದ ನಿವಾಸಿಗಳನ್ನು ತತ್ತರಿಸುವಂತೆ ಮಾಡಿದ್ದಾಗ, ಆರೋಗ್ಯ ಇಲಾಖೆಯ ಸಹಾಯ ವಾಣಿ 104 ಗೆ ಎಸ್ ಓ ಎಸ್ ಕರೆಮಾಡಿ ನೆರವು ಯಾಚಿಸಿ ಜನರ ನೋವಿಗೆ, ಸ್ಪಂದಿಸಿ ಅಗತ್ಯ ನೆರವು ಒದಗಿಸಿದವರೇ ಆ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಈ ಜನ. ಸೋಮವಾರದಂದು ಅವರು ಪ್ರತಿಭಟನೆಗಿಳಿದಿದ್ದರು. ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿ ವರ್ಗದ ಸುಮಾರು 150 ನೌಕರರಿಗೆ ಕಳೆದ ಎರಡು ತಿಂಗಳಿಂದ ಸಂಬಳ ನೀಡಿಲ್ಲವಂತೆ. ಹಾಗಾಗಿ, ತಮ್ಮ ಅಸಮಾಧಾನ, ಹತಾಷೆ ಮತ್ತು ಕೋಪವನ್ನು ಹೀಗೆ ಪ್ರತಿಭಟನೆ ಮೂಲಕ ಪ್ರದರ್ಶಿಸಿದರು.
ಅವರ ಕೋಪಕ್ಕೆ ಮತ್ತೊಂದು ಕಾರಣವೇನೆಂದರೆ, ಈ ಜನ ಸಂಬಳ ಕೊಡಿ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಅಂತ ಕೇಳಿದಾಗ ಸಂಬಂಧಪಟ್ಟ ಅಧಿಕಾರಿಗಳು ಬೆದರಿಕೆ ಒಡ್ಡಿದ್ದಾರಂತೆ. ತಮ್ಮ ಜೇಬಿನಿಂದ ಹಣ ಕೊಡುತ್ತಿರುವಂತೆ ಅವರು ವರ್ತಿಸಿದ್ದಾರೆ ಅಂತ ನೌಕರರು ಹೇಳಿದ್ದಾರೆ.
ಇದು ನಿಜಕ್ಕೂ ದುರಂತ ಮತ್ತು ಹೇವರಿಕೆ ಹುಟ್ಟಿಸುವ ಸಂಗತಿ. ಕೋವಿಡ್-19 ಪಿಡಗು ನಮ್ಮ ಬದುಕಿನ ವ್ಯವಸ್ಥೆಯನ್ನೇ ಬದಾಲಾಯಿಸಿದೆ. ಹಣದ ಸಮಸ್ಯೆ ಎಲ್ಲರಿಗೂ ಇದೆ. ಎಷ್ಟೋ ಜನ ಕೆಲಸ ಕಳೆದುಕೊಂಡು ದಿಕ್ಕೆಟ್ಟವರಂತಾಗಿದ್ದಾರೆ. ಒಂದ್ಹೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ಕೆಲವರಿಗೆ ಎದುರಾಗಿದೆ. 104 ಸಹಾಯವಾಣಿ ಕೇಂದ್ರದ ಈ ಸಿಬ್ಬಂದಿಗೆ ಕೇವಲ ಹೇಳಿಕೊಳ್ಳಲು ಮಾತ್ರ ನೌಕರಿಯಿದೆ. ಸಂಬಳ ಮಾತ್ರ ಇಲ್ಲ.
ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಚಿವರು ಕೂಡಲೇ ಈ ಜನರ ಸಮಸ್ಯೆಗೆ ಸ್ಪಂದಿಸಬೇಕು. ಹಾಗೆಯೇ, ಪ್ರಾಮಾಣಿಕವಾಗಿ ದುಡಿದ ಕೆಲಸಗಾರರಿಗೆ ಸಂಬಳ ನೀಡದೆ ಹೆದರಿಸಿರುವ ಅಧಿಕಾರಿಗಳ ಹೆಡೆಮುರಿ ಕಟ್ಟಬೇಕು. ಅಧಿಕಾರಿಗಳ ಉದ್ಧಟತನವನ್ನು ಮಟ್ಟ ಹಾಕದಿದ್ದರೆ, ಇವತ್ತು ನೌಕರರನ್ನು ಹೆದರಿಸಿರುವವರು ನಾಳೆ ಅವರ ಮೇಲೆ ಕೈಮಾಡಲೂ ಹಿಂಜರಿಯಲಾರರು.
ಇದನ್ನೂ ಓದಿ: ಡ್ರಗ್ಸ್ ಕೇಸ್: ಎನ್ಸಿಬಿ ಕಚೇರಿಯಲ್ಲಿ ಗಪ್ಚುಪ್ ಆಗಿ ಕುಳಿತ ಶಾರುಖ್ ಪುತ್ರ ಆರ್ಯನ್ ಖಾನ್; ಇಲ್ಲಿದೆ ವಿಡಿಯೋ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ

