ಬೆಂಗಳೂರು ಮಳೆಗೆ ಜನ ಗಾಬರಿಪಡುವ ಅಗತ್ಯವಿಲ್ಲ, ಅಧಿಕಾರಿಗಳನ್ನು ಡೆಪ್ಯೂಟ್ ಮಾಡಲಾಗಿದೆ: ಶಿವಕುಮಾರ್
ಬಿಜೆಪಿಯವರು ಮಾಡುವ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಜನರ ಜೀವ, ಆಸ್ತಿಪಾಸ್ತಿಗಳನ್ನು ರಕ್ಷಿಸಲು ತಮ್ಮ ಸರ್ಕಾರ ಬದ್ಧವಾಗಿದೆ, ಜನ ಏನಾದರೂ ಬಯ್ಯಲಿ, ತಾನು ಮಾತ್ರ ರಾಜ್ಯದಲ್ಲಿ ಇನ್ನೂ ಮಳೆಯಾಗಲಿ, ಮಳೆ ಸುರಿದರೆ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂದು ಶಿವಕುಮಾರ್ ಮತ್ತೊಮ್ಮೆ ಹೇಳಿದರು. ನಗರದಲ್ಲಿ ಮಳೆ ಈಗಾಗಲೇ 3 ಜನರನ್ನು ಬಲಿ ಪಡೆದಿದೆ.
ಬೆಂಗಳೂರು, ಮೇ 20: ನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಗಾಬರಿಗೊಳಗಾಗುವ ಅವಶ್ಯಕತೆಯಿಲ್ಲ, ಆಧಿಕಾರಿಗಳನ್ನು ಡೆಪ್ಯೂಟ್ ಮಾಡಲಾಗಿದೆ, ಅವರು ಸಮಸ್ಯೆಗಳನ್ನು ನೋಡಿಕೊಳ್ಳುತ್ತಾರೆ, ತಾನು ಹೊಸಪೇಟೆಯಲ್ಲಿದ್ದವನು ಮಳೆಯ ವಿಷಯ ಗೊತ್ತಾಗುತ್ತಿದ್ದಂತೆಯೇ ಇಲ್ಲಿಗೆ ಧಾವಿಸಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದರು. ಸಾಧನಾ ಸಮಾವೇಶಕ್ಕೆ ಹೊರಡುವ ತರಾತುರಿಯಲ್ಲಿದ್ದ ಅವರು, ಹೊಸಪೇಟೆಯಿಂದ ವಾಪಸ್ಸು ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದಲ್ಲಿ ಮಳೆಯಿಂದ ಪ್ರಭಾವಿತ ಕೆಲ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ತಾನೂ ಸಹ ಹಲವು ಏರಿಯಾಗಳಿಗೆ ಭೇಟಿ ನೀಡೋದಾಗಿ ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಡಿಕೆ ಶಿವಕುಮಾರ್ ಕಲ್ಪನೆಯ ಕೂಸು, ಬೆಂಗಳೂರಲ್ಲಿ ವಿನೂತನ ಪ್ರಯೋಗ: ಜಿ ಪರಮೇಶ್ವರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ