​‘ಟಾಪ್​ 5 ಸ್ಪರ್ಧಿಗಳಲ್ಲಿ ನಾನೂ ಇರಬೇಕಿತ್ತು, ಆದರೆ…’; ಬಿಗ್​ ಬಾಸ್​ ಬಗ್ಗೆ ದಿವ್ಯಾ ದೀರ್ಘ ಮಾತುಕತೆ

ಒಟ್ಟಾರೆ ಬಿಗ್​ ಬಾಸ್​ ಜರ್ನಿಯಲ್ಲಿ ದಿವ್ಯಾ ಸುರೇಶ್​ ಪಾಲಿಗೆ ಮರೆಯಲಾಗದ ಹಲವು ಘಟನೆಗಳಿವೆ. ಆ ಎಲ್ಲದರ ಬಗ್ಗೆ ಟಿವಿ9 ಜೊತೆಗಿನ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

​‘ಟಾಪ್​ 5 ಸ್ಪರ್ಧಿಗಳಲ್ಲಿ ನಾನೂ ಇರಬೇಕಿತ್ತು, ಆದರೆ...’; ಬಿಗ್​ ಬಾಸ್​ ಬಗ್ಗೆ ದಿವ್ಯಾ ದೀರ್ಘ ಮಾತುಕತೆ
| Updated By: ಮದನ್​ ಕುಮಾರ್​

Updated on:Aug 11, 2021 | 10:01 AM

ಬಿಗ್​ ಬಾಸ್​ ಕನ್ನಡ (Bigg Boss) ಸೀಸನ್​ 8ರಲ್ಲಿ ಹೆಚ್ಚು ಗಮನ ಸೆಳೆದ ಸ್ಪರ್ಧಿಗಳಲ್ಲಿ ನಟಿ ದಿವ್ಯಾ ಸುರೇಶ್ (Divya Suresh)​ ಕೂಡ ಪ್ರಮುಖರು. ಹಲವು ಕಾರಣಗಳಿಂದಾಗಿ ಅವರು ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟ ಆಗಿದ್ದರು. ಟಾಸ್ಕ್​ನಲ್ಲಿ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಅವರು ಭಾಗವಹಿಸುತ್ತಿದ್ದರು. ಟಾಪ್​ 5 ಸ್ಥಾನಕ್ಕೆ ಬರುವ ಸ್ಪರ್ಧಿಗಳಲ್ಲಿ ದಿವ್ಯಾ ಸುರೇಶ್​ ಕೂಡ ಒಬ್ಬರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ನಿಜವಾಗಲಿಲ್ಲ. ಮಂಜು ಪಾವಗಡ (Manju Pavagada) ಜೊತೆಗಿನ ಆಪ್ತತೆಯ ಕಾರಣದಿಂದಲೂ ದಿವ್ಯಾ ಹೆಚ್ಚು ಸುದ್ದಿ ಆಗುತ್ತಿದ್ದರು. ಹೀಗೆ ಒಟ್ಟಾರೆ ಬಿಗ್​ ಬಾಸ್​ ಜರ್ನಿಯಲ್ಲಿ ಅವರಿಗೆ ಮರೆಯಲಾಗದ ಹಲವು ಘಟನೆಗಳಿವೆ. ಆ ಎಲ್ಲದರ ಬಗ್ಗೆ ಟಿವಿ9 ಜೊತೆಗಿನ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಅಂತಿಮವಾಗಿ ಮಂಜು ಪಾವಗಡ ಅವರು ಬಿಗ್​ ಬಾಸ್​ ವಿನ್ನರ್​ ಆಗಿ ಹೊರಹೊಮ್ಮಿದರು. ಅವರು ಗೆದ್ದಾಗ ಇತರೆ ಸ್ಪರ್ಧಿಗಳಿಗಿಂತ ಹೆಚ್ಚು  ಸಂಭ್ರಮಿಸಿದ್ದೇ ದಿವ್ಯಾ ಸುರೇಶ್​. ಆ ಕುರಿತಾಗಿಯೂ ತಮ್ಮ ಮಾತುಗಳನ್ನು ಈ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ. ದೂರವಾಣಿ ಮೂಲಕ ಕರೆಮಾಡಿ ಪ್ರಶ್ನೆ ಕೇಳಿದ ಅಭಿಮಾನಿಗಳಿಗೂ ಅವರು ಉತ್ತರ ನೀಡಿದ್ದಾರೆ.

ಇದನ್ನೂ ಓದಿ:

‘ನಾನು ಏನೇ ಹೇಳಿದ್ರೂ ಅದು ಮಂಜುಗೆ ಕನೆಕ್ಟ್​ ಆಗ್ತಿತ್ತು’; ಬಿಗ್​ ಬಾಸ್​ ವಿನ್ನರ್​ ಬಗ್ಗೆ ದಿವ್ಯಾ ಸುರೇಶ್​ ಮಾತು

‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್​

Published On - 9:57 am, Wed, 11 August 21

Follow us