AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಸುರೇಶ್​ ಮಾಡಿದ ಈ ತಪ್ಪನ್ನು ಮಂಜು ಯಾವತ್ತೂ ಕ್ಷಮಿಸಲ್ಲ!

ಮಂಜುವಿನಿಂದ ದಿವ್ಯಾರನ್ನು ದೂರ ಮಾಡಬೇಕು ಎನ್ನುವ ತಂತ್ರ ಫಲಿಸಿದಂತೆ ಕಾಣುತ್ತಿದೆ. ದಿವ್ಯಾ ನಿಧಾನವಾಗಿ ಪ್ರಶಾಂತ್​ ಕಡೆ ವಾಲುತ್ತಿದ್ದಾರೆ.

ದಿವ್ಯಾ ಸುರೇಶ್​ ಮಾಡಿದ ಈ ತಪ್ಪನ್ನು ಮಂಜು ಯಾವತ್ತೂ ಕ್ಷಮಿಸಲ್ಲ!
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Edited By: |

Updated on: Apr 06, 2021 | 7:01 AM

Share

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ನಡುವೆ ನಿಧಾನವಾಗಿ ವೈಮನಸ್ಸು ಬೆಳೆಯುತ್ತಿದೆ. ಇದಕ್ಕೆ ಪ್ರಶಾಂತ್​ ಸಂಬರಗಿ ನೇರ ಕಾರಣ ಎಂದರೆ ತಪ್ಪಾಗಲಾರದು. ಪ್ರಶಾಂತ್​ ಮನೆಯಲ್ಲಿ ಮಾಡುತ್ತಿರುವ ಕೆಲ ತಂತ್ರಗಳಿಂದ ಮಂಜು ಬಗ್ಗೆ ದಿವ್ಯಾಗೆ ಬೇರೆಯದೇ ಅಭಿಪ್ರಾಯ ಬೆಳೆಯುತ್ತಿದೆ. ಪ್ರಶಾಂತ್​ ಮಾಡುತ್ತಿರುವ ಒಳಸಂಚು ಮಂಜುಗೆ ನಿಧಾನವಾಗಿ ಅರ್ಥವಾಗುತ್ತಿದೆ. ಆದರೆ, ದಿವ್ಯಾ ಸುರೇಶ್​ಗೆ ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ-ದಿವ್ಯಾ ಸುರೇಶ್​ ಒಟ್ಟಾಗಿದ್ದರು. ಇವರ ಒಗ್ಗಟ್ಟನ್ನು ಮುರಿಯೋಕೆ ಪ್ರಶಾಂತ್​ ನಿರಂತರವಾಗಿ ಪ್ರಯತ್ನಪಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ, ಮಂಜುವಿನ ಬಾಲ ದಿವ್ಯಾ ಎಂದು ಪುನರುಚ್ಛರಿಸುತ್ತಲೇ ಬಂದಿದ್ದಾರೆ. ಇದನ್ನು ಅದೆಷ್ಟು ಬಾರಿ ಹೇಳಿದ್ದಾರೆ ಎಂದರೆ, ನಾನು ಮಂಜುವಿನ ಬಾಲವೇ ಇರಬಹುದು ಎನ್ನುವಂತೆ ಭಾಸವಾಗುತ್ತಿದೆ. ಮಂಜುವಿನಿಂದ ದಿವ್ಯಾರನ್ನು ದೂರ ಮಾಡಬೇಕು ಎನ್ನುವ ತಂತ್ರ ಫಲಿಸಿದಂತೆ ಕಾಣುತ್ತಿದೆ. ದಿವ್ಯಾ ನಿಧಾನವಾಗಿ ಪ್ರಶಾಂತ್​ ಕಡೆ ವಾಲುತ್ತಿದ್ದಾರೆ. ಅಷ್ಟೇ ಅಲ್ಲ, ಮಂಜುವಿನಿಂದ ದೂರವೇ ಇರಲು ಪ್ರಯತ್ನಿಸುತ್ತಿರುವ ಅವರು ಪ್ರಶಾಂತ್​ಗೆ ಹತ್ತಿರವಾಗುತ್ತಿದ್ದಾರೆ.

ಅತ್ತ, ದಿವ್ಯಾ ಸುರೇಶ್​ ವಿರುದ್ಧವೇ ಪ್ರಶಾಂತ್​ ಕತ್ತಿ ಮಸೆಯುತ್ತಿದ್ದಾರೆ. ಬ್ರೋ ಗೌಡ ಅವರನ್ನು ಮಂಜು ಎತ್ತಿ ಕಟ್ಟುತ್ತಿದ್ದಾರೆ. ಆದರೆ, ಈ ಯಾವ ವಿಚಾರಗಳೂ ದಿವ್ಯಾ ಸುರೇಶ್​ಗೆ ಗೊತ್ತೇ ಆಗುತ್ತಿಲ್ಲ.

ಬಿಗ್ ಬಾಸ್​ ಮನೆಯಲ್ಲಿ ಮಂಜು ತಂಡ ಮಾಡಿಕೊಂಡಿದ್ದಾರೆ. ಎಲ್ಲರೂ ಅವರ ಪರವಾಗಿಯೇ ಇದ್ದಾರೆ ಎಂಬುದು ಚಕ್ರವರ್ತಿ ಚಂದ್ರಚೂಡ್​ ಭಾವನೆ. ಪ್ರಶಾಂತ್​ಗೂ ಇದು ಹೌದೆನ್ನಿಸಿದೆ. ಹೀಗಾಗಿ, ಆ ತಂಡದಿಂದ ಒಬ್ಬರನ್ನು ತಮ್ಮ ಕಡೆ ಸೆಳೆದುಕೊಳ್ಳೋಕೆ ಪ್ಲಾನ್​ ಹಾಕುತ್ತಿದ್ದಾರೆ. ಒಂದೊಮ್ಮೆ ಈ ಯೋಜನೆಗೆ ಬಲಿಯಾಗಿ ಪ್ರಶಾಂತ್​ ಕಡೆ ದಿವ್ಯಾ ಸಂಪೂರ್ಣವಾಗಿ ವಾಲಿದರೆ ಈ ತಪ್ಪನ್ನು ಮಂಜು ಎಂದಿಗೂ ಕ್ಷಮಿಸುವುದಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ರಘುಗೆ ಒಂದು ನ್ಯಾಯ, ಉಳಿದವರಿಗೊಂದು ನ್ಯಾಯ? ನಿಧಿ ತಲೆಯಲ್ಲಿ ಬಂತು ಡೌಟ್​

ಮಂಜುನ ಪ್ರೀತಿಸ್ತೀನಿ ಎನ್ನುತ್ತ ಸುದೀಪ್​ ಎದುರಲ್ಲೇ ಟ್ವಿಸ್ಟ್​ ಕೊಟ್ಟ ದಿವ್ಯಾ! ಅಬ್ಬಬ್ಬಾ ಸಖತ್​ ಚಾಲಾಕಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ