ನರಕದವರ ನೋವು ಹೆಚ್ಚಾಗಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಕಣ್ಣೀರು

‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರ ವೈಫಲ್ಯ ಕಾಣಿಸಿದೆ. ಟಾಸ್ಕ್​ ಸೋತಿದ್ದಕ್ಕೆ ನರಕದವರು ಬೇಸರ ಮಾಡಿಕೊಂಡಿದ್ದಾರೆ. ಚೈತ್ರಾ ಕೂಡ ಕ್ಯಾಮೆರಾ ಮುಂದೆ ಬಂದು ಅತ್ತಿದ್ದಾರೆ. ಎರಡನೇ ವಾರದಲ್ಲಿ ಪೈಪೋಟಿ ಜೋರಾಗಿದೆ. ನರಕದಿಂದ ಸ್ವರ್ಗಕ್ಕೆ ಬರಬೇಕು ಎಂದು 7 ಮಂದಿ ಕಷ್ಟಪಡುತ್ತಿದ್ದಾರೆ.

ನರಕದವರ ನೋವು ಹೆಚ್ಚಾಗಲು ಕಾರಣವಾದ ಚೈತ್ರಾ ಕುಂದಾಪುರ? ಎಲ್ಲ ಮುಗಿದ ಬಳಿಕ ಕಣ್ಣೀರು
|

Updated on: Oct 07, 2024 | 5:39 PM

‘ಬಿಗ್​ ಬಾಸ್​ ಕನ್ನಡ ಸೀಸನ್ 11’ ಮನೆ ಎರಡು ಭಾಗವಾಗಿದ್ದು, ಒಂದು ಕಡೆ ಸ್ವರ್ಗದವರು ಇದ್ದಾರೆ. ಇನ್ನೊಂದು ಕಡೆ ನರಕದವರು ಇದ್ದಾರೆ. ಈ ಎರಡು ತಂಡಗಳ ನಡುವೆ ಟಾಸ್ಕ್​ ನಡೆಯುತ್ತಿದೆ. ಒಂದು ವೇಳೆ ಟಾಸ್ಕ್​ ಗೆದ್ದರೆ ನರಕದವರಿಗೆ ಉತ್ತಮವಾದ ಊಟ ಸಿಗುತ್ತದೆ. ಇಲ್ಲದಿದ್ದರೆ ಗಂಜಿ, ಮೊಸರನ್ನ ತಿಂದು ಬದುಕಬೇಕಾಗುತ್ತದೆ. ನರಕದವರು ಹೊಸ ಟಾಸ್ಕ್​ ಸೋಲಲು ಚೈತ್ರಾ ಕುಂದಾಪುರ ಕಾರಣ ಆದಂತಿದೆ. ಕ್ಯಾಮೆರಾ ಎದುರು ಬಂದು ಅವರು ಕಣ್ಣೀರು ಹಾಕಿದ್ದಾರೆ. ಟಾಸ್ಕ್​ ಸೋತಿದ್ದರಿಂದ ನರಕದ ಮಂದಿಯ ಕಷ್ಟ ಇನ್ನಷ್ಟು ಹೆಚ್ಚಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us