ವೈರಲ್ ವಿಡಿಯೋ: ಯಶವಂತಪುರ ಮಾರುಕಟ್ಟೆಯಲ್ಲಿ ವೇಯಿಂಗ್ ಮಷಿನ್ ಏರಿ ಖುದ್ದು ತೂಕ ನೋಡಿದ ಸಿಎಂ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿದರು. ಈರುಳ್ಳಿ ಮಾರುಕಟ್ಟೆಯಲ್ಲಿ ತೂಕದ ಮೋಸದ ಬಗ್ಗೆ ರೈತರು ಮತ್ತು ವರ್ತಕರೊಂದಿಗೆ ಚರ್ಚಿಸಿದರು. ಸ್ವತಃ ತೂಕದ ಯಂತ್ರದ ಮೇಲೆ ನಿಂತು ಅದರ ನಿಖರತೆಯನ್ನು ಪರಿಶೀಲಿಸಿದರು. ಇದೇ ವೇಳೆ ಎಪಿಎಂಸಿ ಅಕ್ರಮದ ಬಗ್ಗೆ ಮಾಜಿ ಸದಸ್ಯ ಅರುಣ್ ಪರಮೇಶ್ವರ್ ಸಿಎಂಗೆ ದೂರು ನೀಡಿದ್ದು, ಮೂಲಸೌಕರ್ಯ ವಿಚಾರದಲ್ಲಿ ಎಪಿಎಂಸಿ ಅವ್ಯವಸ್ಥೆ ಗೂಡಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 08: ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಅನಿರೀಕ್ಷಿತ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೂಕದಲ್ಲಿ ಮೋಸ ನಡೆಯುತ್ತಿದೆ ಎಂಬ ದೂರುಗಳ ಬಗ್ಗೆ ವಿಚಾರಿಸಿದ್ದಾರೆ. ಮಾಹಿತಿ ಸಂಗ್ರಹಿಸುವ ಜೊತೆಗೆ, ಸ್ವತಃ ತಾವೇ ತೂಕದ ಯಂತ್ರದ ಮೇಲೆ ನಿಂತು ಅದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ್ದಾರೆ. ಇದೇ ವೇಳೆ ಎಪಿಎಂಸಿ ಅಕ್ರಮದ ಬಗ್ಗೆ ಮಾಜಿ ಸದಸ್ಯ ಅರುಣ್ ಪರಮೇಶ್ವರ್ ಸಿಎಂಗೆ ದೂರು ನೀಡಿದ್ದು, ಮೂಲಸೌಕರ್ಯ ವಿಚಾರದಲ್ಲಿ ಎಪಿಎಂಸಿ ಅವ್ಯವಸ್ಥೆ ಗೂಡಾಗಿದೆ. ರೈತರು 20 ರೂ. ಕೊಟ್ಟು ನೀರು ಕುಡಿಯಬೇಕು. ಹಿಂದಿನ ಅಧಿಕಾರಿಗಳು ಲೂಟಿ ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

