‘ದೇವರ’ ಬಿಡುಗಡೆ ಟೈಮ್​ನಲ್ಲೇ ‘ಮಾರ್ಟಿನ್​’ ರಿಲೀಸ್​; ಏನಂದ್ರು ನಿರ್ದೇಶಕರು?

ಎರಡು ಪ್ಯಾನ್​ ಇಂಡಿಯಾ ಸಿನಿಮಾಗಳು ಒಟ್ಟಿಗೆ ಬರುತ್ತಿವೆ. ಅಕ್ಟೋಬರ್​ 11ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಬಿಡುಗಡೆ ಆಗಲಿದೆ. ಜೂ.​ ಎನ್​ಟಿಆರ್​ ಅವರ ‘ದೇವರ’ ಚಿತ್ರ ಅಕ್ಟೋಬರ್​ 10ರಂದು ತೆರೆಕಾಣಲಿದೆ. ಇದರಿಂದ ಕ್ಲ್ಯಾಶ್​ ಆಗಲ್ವಾ ಎಂಬ ಪ್ರಶ್ನೆಗೆ ‘ಮಾರ್ಟಿನ್’ ಸಿನಿಮಾದ ನಿರ್ದೇಶನ ಎ.ಪಿ. ಅರ್ಜುನ್​ ಉತ್ತರ ನೀಡಿದ್ದಾರೆ.

‘ದೇವರ’ ಬಿಡುಗಡೆ ಟೈಮ್​ನಲ್ಲೇ ‘ಮಾರ್ಟಿನ್​’ ರಿಲೀಸ್​; ಏನಂದ್ರು ನಿರ್ದೇಶಕರು?
|

Updated on: May 24, 2024 | 10:36 PM

ಇಷ್ಟು ದಿನ ಲೋಕಸಭಾ ಎಲೆಕ್ಷನ್​ ಮತ್ತು ಐಪಿಎಲ್​ ಅಬ್ಬರ ಜಾಸ್ತಿ ಇದ್ದಿದ್ದರಿಂದ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಈಗ ‘ಮಾರ್ಟಿನ್​’ (Martin) ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್​ 11ರಂದು ‘ಮಾರ್ಟಿನ್’ ತೆರೆಕಾಣಲಿದೆ. ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ’ ಸಿನಿಮಾ (Devara Movie) ಅಕ್ಟೋಬರ್​ 10ರಂದು ಬಿಡುಗಡೆ ಆಗಲಿದೆ. ಇದರಿಂದ ಡೇಟ್​ ಕ್ಲ್ಯಾಶ್​ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ನಿರ್ದೇಶನ ಎ.ಪಿ. ಅರ್ಜುನ್​ (AP Arjun) ಅವರು ಉತ್ತರ ನೀಡಿದ್ದಾರೆ. ‘ವಿಜಯದಶಮಿ ಎಂಬುದು ಕನ್ನಡ ನಾಡಿನ ಅದ್ಭುತವಾದ ಹಬ್ಬ. ಈ ಹಬ್ಬಕ್ಕೆ ನಾವು ಏನಾದರೂ ಕೊಡಲೇಬೇಕು. ಆಗೆಲ್ಲ ಕನ್ನಡದಲ್ಲೇ ಮೂರು-ನಾಲ್ಕು ಸಿನಿಮಾ ರಿಲೀಸ್​ ಆಗುತ್ತಿತ್ತು. ಈಗ ನಮ್ಮ ವಿಜಯದಶಮಿಗೆ ನಮ್ಮದೊಂದು ಸಿನಿಮಾ ರಿಲೀಸ್​ ಮಾಡದಿದ್ದರೆ ಹೇಗೆ? ಕ್ಲ್ಯಾಶ್​ ಎನ್ನೋದಕ್ಕಿಂತಲೂ ನಮ್ಮ ತಂಡದಿಂದ ನಮ್ಮ ಸಿನಿಮಾ ಬರುತ್ತಿದೆ, ಅವರ ತಂಡದಿಂದ ಅವರ ಸಿನಿಮಾ ಬರುತ್ತಿದೆ. ಎರಡು ಸಿನಿಮಾಗಳನ್ನು ತಡೆದುಕೊಳ್ಳುವಂತಹ ಸಾಮರ್ಥ್ಯ ಇರುವ ಚಿತ್ರಮಂದಿರಗಳು ಭಾರತದಲ್ಲಿ ಇವೆ. ಎರಡೂ ಸಿನಿಮಾವನ್ನು ವಿಜಯದಶಮಿ ಸಮಯದಲ್ಲಿ ನೋಡುವಂತಹ ಜನರು ಕೂಡ ನಮ್ಮ ದೇಶದಲ್ಲಿ ಇದ್ದಾರೆ’ ಎಂದು ಎ.ಪಿ. ಅರ್ಜುನ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್