AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಚತುರ್ಥಿಯಂದು ಈ ನಿಯಮ ತಪ್ಪದೇ ಪಾಲಿಸಿ: ಪ್ರಸಿದ್ಧ ವೈದಿಕ ವಿದ್ವಾಂಸರು ನೀಡಿದ ಪೂಜಾ ಮಹತ್ವದ ವಿವರಣೆ

ಗಣೇಶ ಚತುರ್ಥಿಯಂದು ಈ ನಿಯಮ ತಪ್ಪದೇ ಪಾಲಿಸಿ: ಪ್ರಸಿದ್ಧ ವೈದಿಕ ವಿದ್ವಾಂಸರು ನೀಡಿದ ಪೂಜಾ ಮಹತ್ವದ ವಿವರಣೆ

ಅಕ್ಷತಾ ವರ್ಕಾಡಿ
|

Updated on:Sep 13, 2026 | 3:41 PM

Share

ಗಣೇಶ ಚತುರ್ಥಿ ಆಚರಣೆಯ ಮಹತ್ವ, ವಿಧಿವಿಧಾನಗಳು ಹಾಗೂ ಪೂಜಾ ಕ್ರಮಗಳ ಬಗ್ಗೆ ದೈವಜ್ಞ ಡಾ. ಕೆ.ಎನ್. ಸೋಮಯಾಜಿ ಅವರು ಸಮಗ್ರ ಮಾಹಿತಿ ನೀಡಿದ್ದಾರೆ. ಗೌರಿ ಗಣೇಶ ಹಬ್ಬ ಒಂದೇ ದಿನ ಬಂದಾಗ ಆಚರಿಸಬೇಕಾದ ಕ್ರಮಗಳು, ಗಣಪತಿಯನ್ನು ಕೂರಿಸಲು ಸೂಕ್ತ ಸಮಯ, ಮೋದಕದ ವಿಶೇಷತೆ ಹಾಗೂ ಗರಿಕೆ ಪೂಜೆಯ ಮಹತ್ವವನ್ನು ಅವರು ವಿವರಿಸಿದ್ದಾರೆ.

ದೇಶದಾದ್ಯಂತ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ಆಚರಿಸಲಾಗುವ ಗಣೇಶ ಚತುರ್ಥಿ ಹಬ್ಬವು ಭಕ್ತಿ ಸಂಭ್ರಮದಿಂದ ಕೂಡಿದೆ. ಈ ಹಬ್ಬದ ಮಹತ್ವ, ಆಚರಣೆಯ ನಿಯಮಗಳು ಹಾಗೂ ಗಣಪತಿಯನ್ನು ಒಲಿಸಿಕೊಳ್ಳುವ ವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಹಾಗೂ ಆಧ್ಯಾತ್ಮಿಕ ಚಿಂತಕರಾದ ದೈವಜ್ಞ ಡಾ. ಕೆ.ಎನ್. ಸೋಮಯಾಜಿ ಅವರು ಮಾಹಿತಿ ನೀಡಿದ್ದಾರೆ. ಕೆಲವು ವರ್ಷಗಳಲ್ಲಿ ಗೌರಿ ಮತ್ತು ಗಣೇಶ ಹಬ್ಬಗಳು ಒಂದೇ ದಿನ ಬರಬಹುದು. ಇದು ತಿಥಿಯ ವ್ಯಾಪ್ತಿಯನ್ನು ಅವಲಂಬಿಸಿರುತ್ತದೆ ಹೊರತು ಅಧಿಕ ಮಾಸದಿಂದಲ್ಲ ಎಂದು ಗುರುಗಳು ಸ್ಪಷ್ಟಪಡಿಸಿದ್ದಾರೆ. ಗಣಪತಿಯನ್ನು ಕೂರಿಸಲು ಯಾವುದೇ ನಿರ್ದಿಷ್ಟ ಶುಭ ಮುಹೂರ್ತ ಇಲ್ಲದಿದ್ದರೂ, ರಾಹುಕಾಲವನ್ನು (ಸೋಮವಾರ ಬೆಳಗ್ಗೆ 7:30 ರಿಂದ 9:00 ರವರೆಗೆ) ಹೊರತುಪಡಿಸಿ, ಬೆಳಗಿನ ಪ್ರಾತಃಕಾಲದಲ್ಲಿ ಪೂಜೆ ಮಾಡುವುದು ಸೂಕ್ತ. ರಾಹುಕಾಲಕ್ಕೆ ಮಹತ್ವ ನೀಡುವವರು ಬೆಳಗ್ಗೆ 7:30 ರ ಮೊದಲು ಅಥವಾ 9:00 ರ ನಂತರ ಪ್ರತಿಷ್ಠಾಪನೆ ಮಾಡಬಹುದು.

ಗಣೇಶನಿಗೆ ಮೋದಕ ಅತ್ಯಂತ ಪ್ರಿಯವಾದ ನೈವೇದ್ಯ. ಮೋದಕದ ಜೊತೆಗೆ ಚಕ್ಕುಲಿ, ಕೋಡ್ಬಳೆ, ಉಂಡೆಗಳಂತಹ ವಿವಿಧ ಭಕ್ಷ್ಯಗಳನ್ನು ಅರ್ಪಿಸಬಹುದು. ವ್ರತ ಮಾಡುವಾಗ 21, 16, 108 ಅಥವಾ 1008 ಮೋದಕಗಳನ್ನು ಅರ್ಪಿಸುವ ಪದ್ಧತಿ ಇದೆ. ಗಣೇಶನಿಗೆ ಗರಿಕೆ, ಕೆಂಪು ಚಂದನ (ರಕ್ತ ಚಂದನ) ಮತ್ತು ಕೆಂಪು ಬಣ್ಣದ ಹೂವುಗಳು ಅತ್ಯಂತ ಪ್ರಿಯ. ಭಕ್ತಿಭಾವದಿಂದ ಇವುಗಳನ್ನು ಅರ್ಪಿಸುವುದರಿಂದ ಗಣಪತಿಯು ಶೀಘ್ರವಾಗಿ ಒಲಿಯುತ್ತಾನೆ ಎಂದು ದೈವಜ್ಞ ಸೋಮಯಾಜಿ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Sep 13, 2026 03:28 PM

Follow Us