AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coach behaves like goonda: ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಶ್ವೇತಾ ಪ್ರದರ್ಶಿಸಿದ ದುಂಡಾವರ್ತನೆಯನ್ನು ಕ್ರೀಡಾ ಸಚಿವ ಬಿ ನಾಗೇಂದ್ರ ಪ್ರಶ್ನಿಸುವರೇ?

ತಮ್ಮಲ್ಲಿ ತರಬೇತಿಗೆ ಬರುವ ಮಕ್ಕಳ ಮುಂದೆ ತೀವ್ರ ಸ್ವರೂಪದ ಅವಮಾನವಾಗುತ್ತಿದ್ದರೂ ಬಿಂದು ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆ. ಅವರ ಸಹನೆ ಮತ್ತು ತಾಳ್ಮೆ ಅಭಿನಂದನೀಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2023 | 1:17 PM

Share

ಬೆಂಗಳೂರು: ಈ ವಿಡಿಯೋ ವೈರಲ್ ಆಗಿದೆ ಮತ್ತು ಇದನ್ನು ಯುವಜನ ಸೇವೆ ಮತ್ತು ಕ್ರೀಡಾ ಖಾತೆ ಸಚಿವ ಬಿ ನಾಗೇಂದ್ರ (B Nagendra) ಆದಷ್ಟು ಬೇಗ ಒಂದು ಕೆಟ್ಟ ಸಂಸ್ಕೃತಿಯನ್ನು ಕನ್ನಡ ನಾಡಿಗೆ ಪ್ರಚುರ ಪಡಿಸುತ್ತಿರುವ ಟ್ರ್ಯಾಕ್ ಸೂಟ್ ಧಾರಿ ಮಹಿಳೆಗೆ ಒಂದು ಸ್ಪಷ್ಟೀಕರಣ ಕೇಳುವ ಅವಶ್ಯಕತೆಯಿದೆ. ಅಂದಹಾಗೆ ಕೂಗಾಡುತ್ತಿರುವ ಮಹಿಳಾ ಕೋಚ್ ಹೆಸರು ಶ್ವೇತಾ (Shwetha) ಮತ್ತು ಅವರ ಎದುರು ಶಾಲಾ ಮಗುವಿನಂತೆ ಬೈಗುಳ, ದೂಷಣೆ ಕೇಳಿಸಿಕೊಳ್ಳುತ್ತಿರುವರು ಅಥ್ಲೀಟ್ ಮತ್ತು ಜ್ಯೂನಿಯರ್ ಕೋಚ್ ಬಿಂದು ರಾಣಿ (Bindu Rani). ಶ್ವೇತಾ ಮತ್ತು ಬಿಂದು ನಡುವೆ ಜಗಳ ಯಾಕೆ ಶುರುವಾಗಿದೆ ಅನ್ನೋದು ಇಲ್ಲಿ ಮುಖ್ಯವಲ್ಲ, ಅದರೆ ಶ್ವೇತಾ ತನ್ನದೇ ಸಮುದಾಯದ ಒಬ್ಬ ಮಹಿಳೆ ವಿರುದ್ಧ ಹೀಗೆ ಸಾರ್ವಜನಿಕವಾಗಿ ಮನಬಂದಂತೆ ಬೈದಾಡುವುದು ಅಕ್ಷಮ್ಯ. ಒಬ್ಬ ರೌಡಿಯಂತೆ ಅವರು ವರ್ತಿಸುತ್ತಿರುವ ಅವರ ಚೀರಾಟ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸುತ್ತದೆ. ಬಿಂದು ರಾಣಿ ಮಾತ್ರ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾರೆ ಮತ್ತು ಒಂದೇ ಒಂದು ಶಬ್ದ ಅವರ ಬಾಯಿಂದ ಹೊರಬರುವುದಿಲ್ಲ.

ಅವರ ಪುಂಡಾಟಿಕೆಯನ್ನು ವಿಡಿಯೋ ಮಾಡುತ್ತಿರುವವರ ಮೇಲೂ ಶ್ವೇತಾ ಕೆಟ್ಟ ಭಾಷೆಯಲ್ಲಿ ಕೂಗಾಡುತ್ತಾರೆ. ತಮ್ಮ ಬ್ಯಾಗಲ್ಲಿದ್ದ ಚಪ್ಪಲಿಯನ್ನು ಹೊರತೆಗೆದು ಬಿಂದುಗೆ ತೋರಿಸುವುದು ಶ್ವೇತಾ ದರ್ಪದ ಅತಿರೇಕ ಮತ್ತು ಅಪ್ಪಟ ಗೂಂಡಾಗಿರು. ಬಿಂದುರನ್ನು ತಳ್ಳಾಡುವ ಮೂಲಕ ದೈಹಿಕ ಹಲ್ಲೆಯನ್ನೂ ಶ್ವೇತಾ ನಡೆಸುತ್ತಾರೆ. ತಮ್ಮಲ್ಲಿ ತರಬೇತಿಗೆ ಬರುವ ಮಕ್ಕಳ ಮುಂದೆ ತೀವ್ರ ಸ್ವರೂಪದ ಅವಮಾನವಾಗುತ್ತಿದ್ದರೂ ಬಿಂದು ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆ. ಅವರ ಸಹನೆ ಮತ್ತು ತಾಳ್ಮೆ ಅಭಿನಂದನೀಯ! ಕ್ರೀಡಾ ಸಚಿವರೇ, ಶ್ವೇತಾ ಹೆಸರಿನ ಈ ಕೋಚ್ ಗೆ ಸಾರ್ವಜನಿಕ ವರ್ತನೆ, ಶಿಷ್ಟಾಚಾರ, ಶಿಸ್ತು- ಮೊದಲಾದವುಗಳ ತರಬೇತಿ ಬೇಕಿದೆ. ದಯವಿಟ್ಟು ಒದಗಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
ಪಿಡಬ್ಲ್ಯೂಡಿ ಮುಖ್ಯ ಇಂಜಿನಿಯರ್​​ಗೆ ಶಾಕ್​​ ಕೊಟ್ಟ ಲೋಕಾಯುಕ್ತ
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
RCB ಅಭಿಮಾನಿಗಳಿಗೆ ಸರ್ಕಾರದಿಂದ ಇಂದೇ ಸಿಗುತ್ತಾ ಸಿಹಿ ಸುದ್ದಿ?
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್
ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್