AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coach behaves like goonda: ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಶ್ವೇತಾ ಪ್ರದರ್ಶಿಸಿದ ದುಂಡಾವರ್ತನೆಯನ್ನು ಕ್ರೀಡಾ ಸಚಿವ ಬಿ ನಾಗೇಂದ್ರ ಪ್ರಶ್ನಿಸುವರೇ?

ತಮ್ಮಲ್ಲಿ ತರಬೇತಿಗೆ ಬರುವ ಮಕ್ಕಳ ಮುಂದೆ ತೀವ್ರ ಸ್ವರೂಪದ ಅವಮಾನವಾಗುತ್ತಿದ್ದರೂ ಬಿಂದು ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆ. ಅವರ ಸಹನೆ ಮತ್ತು ತಾಳ್ಮೆ ಅಭಿನಂದನೀಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 03, 2023 | 1:17 PM

Share

ಬೆಂಗಳೂರು: ಈ ವಿಡಿಯೋ ವೈರಲ್ ಆಗಿದೆ ಮತ್ತು ಇದನ್ನು ಯುವಜನ ಸೇವೆ ಮತ್ತು ಕ್ರೀಡಾ ಖಾತೆ ಸಚಿವ ಬಿ ನಾಗೇಂದ್ರ (B Nagendra) ಆದಷ್ಟು ಬೇಗ ಒಂದು ಕೆಟ್ಟ ಸಂಸ್ಕೃತಿಯನ್ನು ಕನ್ನಡ ನಾಡಿಗೆ ಪ್ರಚುರ ಪಡಿಸುತ್ತಿರುವ ಟ್ರ್ಯಾಕ್ ಸೂಟ್ ಧಾರಿ ಮಹಿಳೆಗೆ ಒಂದು ಸ್ಪಷ್ಟೀಕರಣ ಕೇಳುವ ಅವಶ್ಯಕತೆಯಿದೆ. ಅಂದಹಾಗೆ ಕೂಗಾಡುತ್ತಿರುವ ಮಹಿಳಾ ಕೋಚ್ ಹೆಸರು ಶ್ವೇತಾ (Shwetha) ಮತ್ತು ಅವರ ಎದುರು ಶಾಲಾ ಮಗುವಿನಂತೆ ಬೈಗುಳ, ದೂಷಣೆ ಕೇಳಿಸಿಕೊಳ್ಳುತ್ತಿರುವರು ಅಥ್ಲೀಟ್ ಮತ್ತು ಜ್ಯೂನಿಯರ್ ಕೋಚ್ ಬಿಂದು ರಾಣಿ (Bindu Rani). ಶ್ವೇತಾ ಮತ್ತು ಬಿಂದು ನಡುವೆ ಜಗಳ ಯಾಕೆ ಶುರುವಾಗಿದೆ ಅನ್ನೋದು ಇಲ್ಲಿ ಮುಖ್ಯವಲ್ಲ, ಅದರೆ ಶ್ವೇತಾ ತನ್ನದೇ ಸಮುದಾಯದ ಒಬ್ಬ ಮಹಿಳೆ ವಿರುದ್ಧ ಹೀಗೆ ಸಾರ್ವಜನಿಕವಾಗಿ ಮನಬಂದಂತೆ ಬೈದಾಡುವುದು ಅಕ್ಷಮ್ಯ. ಒಬ್ಬ ರೌಡಿಯಂತೆ ಅವರು ವರ್ತಿಸುತ್ತಿರುವ ಅವರ ಚೀರಾಟ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರತಿಧ್ವನಿಸುತ್ತದೆ. ಬಿಂದು ರಾಣಿ ಮಾತ್ರ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾರೆ ಮತ್ತು ಒಂದೇ ಒಂದು ಶಬ್ದ ಅವರ ಬಾಯಿಂದ ಹೊರಬರುವುದಿಲ್ಲ.

ಅವರ ಪುಂಡಾಟಿಕೆಯನ್ನು ವಿಡಿಯೋ ಮಾಡುತ್ತಿರುವವರ ಮೇಲೂ ಶ್ವೇತಾ ಕೆಟ್ಟ ಭಾಷೆಯಲ್ಲಿ ಕೂಗಾಡುತ್ತಾರೆ. ತಮ್ಮ ಬ್ಯಾಗಲ್ಲಿದ್ದ ಚಪ್ಪಲಿಯನ್ನು ಹೊರತೆಗೆದು ಬಿಂದುಗೆ ತೋರಿಸುವುದು ಶ್ವೇತಾ ದರ್ಪದ ಅತಿರೇಕ ಮತ್ತು ಅಪ್ಪಟ ಗೂಂಡಾಗಿರು. ಬಿಂದುರನ್ನು ತಳ್ಳಾಡುವ ಮೂಲಕ ದೈಹಿಕ ಹಲ್ಲೆಯನ್ನೂ ಶ್ವೇತಾ ನಡೆಸುತ್ತಾರೆ. ತಮ್ಮಲ್ಲಿ ತರಬೇತಿಗೆ ಬರುವ ಮಕ್ಕಳ ಮುಂದೆ ತೀವ್ರ ಸ್ವರೂಪದ ಅವಮಾನವಾಗುತ್ತಿದ್ದರೂ ಬಿಂದು ಅವಡುಗಚ್ಚಿ ಸಹಿಸಿಕೊಳ್ಳುತ್ತಾರೆ. ಅವರ ಸಹನೆ ಮತ್ತು ತಾಳ್ಮೆ ಅಭಿನಂದನೀಯ! ಕ್ರೀಡಾ ಸಚಿವರೇ, ಶ್ವೇತಾ ಹೆಸರಿನ ಈ ಕೋಚ್ ಗೆ ಸಾರ್ವಜನಿಕ ವರ್ತನೆ, ಶಿಷ್ಟಾಚಾರ, ಶಿಸ್ತು- ಮೊದಲಾದವುಗಳ ತರಬೇತಿ ಬೇಕಿದೆ. ದಯವಿಟ್ಟು ಒದಗಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ